ಇಡಿ ಆತಂಕ : ಡಿಕೆ ಬ್ರದರ್ಸ್ ನೆರವಿಗೆ ಬರ್ತಾರ ರಾಜ್ಯದ ಈ ಸ್ವಾಮೀಜಿ?

0

ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಇಂದು ಅವರು ಬಂಧನವಾಗುವ ಭೀತಿಯೂ ಸಹ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಅವರನ್ನು ಕಾಪಾಡಲು ರಾಜ್ಯದ ಪ್ರಸಿದ್ದ ಮಠವೊಂದರ ಸ್ವಾಮೀಜಿಗಳು ನೆರವಿಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಆದಿಚುಂಚನಗಿರಿ ಮಠಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಭೇಟಿ ನೀಡಿದ್ದು, ಶ್ರೀಗಳ ಜೊತೆಗೆ ಸಚಿವರು ಐಟಿ ಹಾಗೂ ಇಡಿಯಿಂದ ತಮಗೆ ಇರುವ ಭೀತಿಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಕಳೆದ ಬಾರಿ ಸಚಿವ ಡಿಕೆ ಶಿವಕುಮಾರ ಹಾಗೂ ಅವರ ಆಪ್ತರ ಮನೆ ಮೇಲೆ ದಾಳಿ ನಡೆದ ವೇಳೆಯಲ್ಲಿ ಸ್ವಾಮೀಜಿಗಳೇ ಸಮಸ್ಯೆಯನ್ನು ಬಗೆಹರಿಸಿದ್ದರು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದಾವೆ.

ಸ್ವಾಮೀಜಿಗಳಿಗೆ ರಾಜಕೀಯವಾಗಿ ಭಾರಿ ಬೆಂಬಲವಿದೆ ಕೆಲವು ಬಿಜೆಪಿ ನಾಯಕರ ಜೊತೆ ಸಂಪರ್ಕವಿದೆ,  ಅದನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಡಿಕೆ ಶಿವಕುಮಾರ್ ಅವರನ್ನು ಬಂಧನ ಮುಕ್ತ ಮಾಡುವಂತೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.