ದೇವೇಗೌಡ ರ ವಿರುದ್ಧ ತೊಡೆ ತಟ್ಟಿದ ಸಿಂಹ.. ದೋಸ್ತಿ ಪಕ್ಷಗಳಿಗೆ ಬಹಿರಂಗ ಸವಾಲು

ದೇವೇಗೌಡ ರ ವಿರುದ್ಧ ತೊಡೆ ತಟ್ಟಿದ ಸಿಂಹ.. ದೋಸ್ತಿ ಪಕ್ಷಗಳಿಗೆ ಬಹಿರಂಗ ಸವಾಲು

0

ಕರ್ನಾಟಕ ಬಿಜೆಪಿಯ ಯುವ ನಾಯಕರಾದ ಪ್ರತಾಪ್ ಸಿಂಹ ರವರು ತಮ್ಮ ಸ್ವಂತ ಬಲದಿಂದ ಗೆದ್ದು ಬಂದವರು, ಯಾವುದೇ ರಾಜಕೀಯ ಬೆಂಬಲವಿಲ್ಲದೆ ಕೇವಲ ತಮ್ಮ ಶಕ್ತಿಯ ಬಲದಿಂದ ಮತ್ತು ಕೇವಲ ನರೇಂದ್ರ ಮೋದಿ ರವರಿಗಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬೀಗಿದ್ದರು.

ತಮ್ಮನ್ನು ಗೆಲ್ಲಿಸಿದ ಜನಕ್ಕೆ ಯಾವುದೇ ರೀತಿಯಲ್ಲೂ ಮೋಸವಾಗದೆ ಬಹಳಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಕೈಗೊಂಡಿರುವ ಇವರು ಬಿಜೆಪಿ ಪಕ್ಷದ ಯುವ ನಾಯಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈಗಿರುವ ಟ್ರೆಂಡ್ ಹೇಗಿದೆ ಎಂದರೆ ಪ್ರತಾಪ್ ಸಿಂಹ ಎಂದರೆ ಯುವಕರಲ್ಲಿ ಎಲ್ಲಿಲ್ಲದ ಹುಮ್ಮಸ್ಸು ಮೂಡುತ್ತದೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುವ ಇವರು ಈಗ ಮತ್ತೊಮ್ಮೆ  ಬಹಿರಂಗವಾಗಿ ಮಾಜಿ ಪ್ರಧಾನಿಯಾದ ದೇವೇಗೌಡರಿಗೆ ಮತ್ತು ಕರ್ನಾಟಕದಲ್ಲಿ ಇರುವ ದೋಸ್ತಿ ಪಕ್ಷಗಳಿಗೆ ಬಹಿರಂಗ ಸವಾಲೆಸೆದು ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಪ್ರತಾಪ್ ಸಿಂಹರವರ ಮಾತುಗಳೇನು?

ದೇವೇಗೌಡರು ಬಿಜೆಪಿ ಪಕ್ಷದ ಬಗ್ಗೆ ಮಾತನಾಡುತ್ತಾರೆ, ಅವರು ಸುಮ್ಮನೆ ಮಾತನಾಡುವ ಬದಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಂಸದರು ಏನು ಕೆಲಸ ಮಾಡಿದ್ದಾರೆ ಅದರ ಬಗ್ಗೆ ಒಂದು ರಿಪೋರ್ಟ್ ಕಾರ್ಡ್ ಅನ್ನು ತಯಾರಿಸಿ, ಬಿಡುಗಡೆ ಮಾಡಲಿ ನಾನು ನನ್ನ ಕೆಲಸ ಗಳನ್ನು ಒಳಗೊಂಡ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತೇನೆ.

ಬಿಡುಗಡೆಯಾದ ನಂತರ ಮುಂದಿನ ಚುನಾವಣೆಯಲ್ಲಿ ನಿಮ್ಮ ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ನನ್ನ ವಿರುದ್ಧ ಸ್ಪರ್ಧಿಸಲಿ ಆಗ ಬಿಜೆಪಿ ಪಕ್ಷದ ಶಕ್ತಿ ಏನೆಂಬುದನ್ನು ನಾನು ತೋರಿಸುತ್ತೇನೆ ನಿಮ್ಮ ಸವಾಲನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ  ಎಂದುಬಹಿರಂಗ ಸವಾಲೊಂದನ್ನು  ಪ್ರತಾಪ್ ಸಿಂಹರವರು ಮಾಜಿ ಪ್ರಧಾನಿ ದೇವೇಗೌಡ ರವರಿಗೆ ಎಸೆದಿದ್ದಾರೆ