ನಾಗರಿಕರಲ್ಲಿ ಮನವಿ ಮಾಡಿಕೊಂಡ ಕೇಂದ್ರ ಸರ್ಕಾರ ಒಮ್ಮೆ ಓದಿ ದಯವಿಟ್ಟು ಶೇರ್ ಮಾಡಿ

ನಾಗರಿಕರಲ್ಲಿ ಮನವಿ ಮಾಡಿಕೊಂಡ ಕೇಂದ್ರ ಸರ್ಕಾರ ಒಮ್ಮೆ ಓದಿ ದಯವಿಟ್ಟು ಶೇರ್ ಮಾಡಿ

0

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆ ದಿನ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ.  ಹಲವಾರು  ಹೆಮ್ಮೆಯ  ಭಾರತೀಯರ ಮತ್ತು ವೀರ ನಾಯಕರ ರಕ್ತ ಸಮರ್ಪಿಸಿದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತ್ತು.

 

ಇದೇ ವಿಚಾರವಾಗಿ ಕೇಂದ್ರ ಸರ್ಕಾರವು ನಾಗರಿಕರಲ್ಲಿ ಒಂದು ಮನವಿಯನ್ನು ಮಾಡಿಕೊಂಡಿದೆ, ದಯವಿಟ್ಟು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲ ನೀಡಿ ನಿಮ್ಮ ನೆರೆಹೊರೆಯವರಿಗೂ ಈ ನಿರ್ಧಾರದ ಬಗ್ಗೆ ಅರಿವು ಮೂಡಿಸಿ ಎಂದು ಕೋರಿಕೊಳ್ಳುತ್ತಿದ್ದೇವೆ.

ಸ್ವತಂತ್ರ ದಿನಾಚರಣೆಯ ಎಂದ ತಕ್ಷಣವೇ ನಮಗೆ ನೆನಪಿಗೆ ಬರುವುದು ನಮ್ಮ ಹೆಮ್ಮೆಯ ತ್ರಿವರ್ಣಧ್ವಜ,  ಶಾಲೆಯ ದಿನಗಳಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಶಾಲೆಯಲ್ಲಿ ಸಂಭ್ರಮಪಟ್ಟ ದಿನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಅದರಂತೆಯೇ ಪ್ರತಿಯೊಬ್ಬರೂ ಇಂದಿಗೂ ಸ್ವತಂತ್ರ ದಿನಾಚರಣೆ ಯನ್ನು ಆಚರಿಸುತ್ತೀರಿ ಎಂಬುದು ನಮಗೆ ತಿಳಿದಿದೆ ,  ಆದರೆ ಈ ಬಾರಿ ದಯವಿಟ್ಟು ನೀವು ಪ್ಲಾಸ್ಟಿಕ್ ತ್ರಿವರ್ಣ ಧ್ವಜಗಳನ್ನು ಖರೀದಿಸಬೇಡಿ.  ಬದಲಾಗಿ  ಸ್ವಲ್ಪ  ಖರ್ಚು ಹೆಚ್ಚಾದರೂ ಪರವಾಗಿಲ್ಲ ಬಟ್ಟೆಯಿಂದ ಮಾಡಿದ  ತ್ರಿವರ್ಣ ಧ್ವಜವನ್ನು  ಖರೀದಿಸಿ ಸ್ವತಂತ್ರ ದಿನಾಚರಣೆ ಯನ್ನು ಆಚರಿಸಿ. ದಯವಿಟ್ಟು ಪ್ರತಿಯೊಬ್ಬರು ಭೂಮಿಯನ್ನು ರಕ್ಷಿಸುವ ಸಲುವಾಗಿ ಈ ಕೋರಿಕೆಯನ್ನು ಪಾಲಿಸಿ.