ಶ್ರೀ ಕೃಷ್ಣನ 11ನೇ ಅವತಾರವಂತೆ ನಮ್ಮ ಮೋದಿ ಜಿ

0

ಪ್ರಧಾನ ಮೋದಿ ರವರು ದೇಶದ ಜನರಿಗಾಗಿ ಮತ್ತು ದೇಶಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದನ್ನು ಪ್ರತಿಯೊಬ್ಬರು ಶ್ಲಾಘಿಸಿಸುತ್ತಿದ್ದಾರೆ.  ಶಾಸಕರಾದ ಸಿದ್ದು ಸವದಿ ಅವರು ತಮ್ಮದೇ ಆದ ರೀತಿಯಲ್ಲಿ ಮೋದಿರವರ ಕೆಲಸವನ್ನು ಶ್ಲಾಘಿಸಿದ್ದಾರೆ.

ಮೋದಿ ರವರ ಕನಸಿನ ಯೋಜನೆಯಾದ ಉಜ್ವಲ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲು ಬಂದಿದ್ದ ಶಾಸಕರಾದ ಸಿದ್ದು ಸವದಿ ರವರು ಮೋದಿ ರವರು ದೇಶದಲ್ಲಿ ಬಡತನ ಕಿತ್ತು ಹಾಕಲು ಮತ್ತು ಭಾರತದ ಹೆಮ್ಮೆಯನ್ನು ಹಿಗ್ಗಿಸಲು ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು ಇವರು ಶ್ರೀಕೃಷ್ಣನ 11ನೇ ಅವತಾರ, ಹಾಗಾಗಿ ಮತ್ತೊಮ್ಮೆ ಅವರನ್ನು ಬೆಂಬಲಿಸೋಣ ಎಂದು ಹೇಳಿದ್ದಾರೆ.