ಬಿಗ್ ಬ್ರೇಕಿಂಗ್: ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದ ಬಿಎಸ್ ವೈ

ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದ ಬಿಎಸ್ ವೈ

0

ಹೌದು ಬಿಎಸ್ ವೈ ರವರು ಈಗ ರಾಜ್ಯದಲ್ಲಿನ ಬಿಜೆಪಿ ಬೆಂಬಲಿಗರಿಗೆ ಬೃಹತ್ ಶಾಕ್ ಒಂದನ್ನು ನೀಡಿದ್ದಾರೆ.  ಅಷ್ಟಕ್ಕೂ ಏನದು ಶಾಕ್? ಮತ್ತು ಅದರ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೂ ಮುನ್ನ ಭಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರವೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ರವರ ಪುತ್ರ ಸ್ಪರ್ಧಿಸಿದ ಕ್ಷೇತ್ರವಾದ ವರುಣ. ಕಾರಣವೇನೆಂದರೆ ಇಲ್ಲಿ ಬಿಎಸ್ವೈ ರವರ ಪುತ್ರನಾದ ವಿಜಯೇಂದ್ರ ರವರು ಸ್ಪರ್ಧಿಸುತ್ತಾರೆ ಎಂದು ಅಭಿಮಾನಿಗಳು ಭಾರಿ ಆಸೆಯಿಂದ ಎದುರು ನೋಡುತ್ತಿದ್ದರು.

ಆದರೆ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ರವರಿಗೆ ಟಿಕೆಟ್ ನೀಡದೆ ಅಭಿಮಾನಿಗಳಲ್ಲಿ ಈ ಬಾರಿ ನಿರಾಸೆಯನ್ನುಂಟು ಮಾಡಿತ್ತು. ಕ್ಷೇತ್ರದಲ್ಲಿ ಸರಿಯಾದ ಎದುರಾಳಿ ಇಲ್ಲದೆ ಸಿಎಂ ಸಿದ್ದರಾಮಯ್ಯ ರವರ ಪುತ್ರ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ಅನ್ನು ದೂರಿದ್ದರು.

ಟಿಕೆಟ್ ಸಿಗದೆ ಇದ್ದರು ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು ವಿಜಯೇಂದ್ರ ರವರ ಪಕ್ಷದ ಮೇಲಿನ ಪ್ರೀತಿಯನ್ನು ಸಾರಿದಂತಿತ್ತು.  ಹಲವಾರು ಜನರು ಈ ಕಾರ್ಯವನ್ನು ಶ್ಲಾಘಿಸಿದ್ದರು.

ಅಷ್ಟಕ್ಕೂ ಈಗ ಯಾಕೆ ಆ ವಿಚಾರ ಎನ್ನುತ್ತೀರಾ ಕೆಳಗಡೆ ಓದಿ !

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಎಸ್ ವೈ ರವರ ಪುತ್ರ ಸ್ಪರ್ಧಿಸುತ್ತಾರೆ ಎಂಬ ಆಕಾಂಕ್ಷೆಯಲ್ಲಿ  ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದರು. ಆದರೆ ಬಿಎಸ್ವೈ ರವರು ಎಲ್ಲಾ ಆಸೆಗಳಿಗೆ ತಣ್ಣೀರು ಎರಚಿದ್ದಾರೆ. ಹೌದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರರಾದ ಬಿ ವೈ ವಿಜಯೇಂದ್ರ ರವರು ಯುವ ಮೋರ್ಚಾ ಉಪಾಧ್ಯಕ್ಷರಾಗಿ ಪಕ್ಷದ ಪರ ಪ್ರಚಾರ ಕೈಗೊಳ್ಳಲಿದ್ದಾರೆಯೇ ಹೊರತು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ  ಎಂದು ಸ್ಪಷ್ಟಪಡಿಸಿದ್ದಾರೆ.