ಆರು ತಿಂಗಳುಗಳಲ್ಲಿ ಯಡಿಯೂರಪ್ಪರವರ ಸರ್ಕಾರ: ಹೊಸ ಬಾಂಬ್

ಆರು ತಿಂಗಳುಗಳಲ್ಲಿ ಯಡಿಯೂರಪ್ಪರವರ ಸರ್ಕಾರ: ಹೊಸ ಬಾಂಬ್

0

ಚುನಾವಣೆ ಫಲಿತಾಂಶ ಹೊರಬರಲು ಇನ್ನು ಕೆಲವು ಗಂಟೆಗಳು ಬಾಕಿ ಇರುವಾಗ ಕಾಂಗ್ರೆಸ್ ಕುಮಾರಸ್ವಾಮಿರಾವರಿಗೆ ಬೆಂಬಲ ನೀಡುವುದಾಗಿ ಘೋಷಿಸಿ, ಬಿ ಜೆ ಪಿ ಗೆ ದೊಡ್ಡ ಶಾಕ್ ನೀಡಿತ್ತು. ಬಿ ಜೆ ಪಿ ಪಕ್ಷವು ಸಹ ಜೆಡಿಎಸ್ ಮೈತ್ರಿಗೆ ಪ್ರಯತ್ನಪಟ್ಟಿದ್ದು ಸುಳ್ಳಲ್ಲ.ಆದರೆ ಕಾಂಗ್ರೆಸ್ ನೀಡಿದಷ್ಟು ಆಫರ್ ಗಳನ್ನೂ ಬಿಜೆಪಿ ಪಕ್ಷವು ನೀಡಲಿಲ್ಲ ಎಂಬುದು ತಿಳಿದಿರುವ ವಿಷಯ ಮತ್ತು ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ಮುಂದಾಲೋಚನೆ ಮಾಡಿ ಬೆಂಬಲ ಘೋಷಿಸಿ ಸರ್ಕಾರ ರಚನೆ ಮಾಡಲು ನಿರ್ಧರಿಸಿತ್ತು.

ಆದರೆ ಸರ್ಕಾರ ರಚನೆಯಾದ ಮೇಲೆ ಸಚಿವ ಸ್ಥಾನ ಸಂಚಿಕೆಯಲ್ಲಿ ಮತ್ತು ಕಾರು ಬಂಗಲೆ ಎಂದುಕೊಂಡು ಶಾಸಕರು ಜಗಳವಾಡುತ್ತಾ ಕುಳಿತಿದ್ದಾರೆ. ಇತ್ತ ಅತೃಪ್ತ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಇದೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿ ಒಬ್ಬರ ಮೇಲೆ ಒಬ್ಬರು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈಗ ಹುಕ್ಕೇರಿ ಶಾಸಕರಾದ ಉಮೇಶ್ ಕತ್ತಿ ರವರು ಇನ್ನೂ ಕೇವಲ ಆರು ತಿಂಗಳುಗಳ ಒಳಗೆ ಮುಖ್ಯಮಂತ್ರಿಯಾಗಲಿದ್ದಾರೆ ನಮ್ಮ ಯಡಿಯೂರಪ್ಪನವರು ಎಂದು ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ಹಿರಣ್ಯಕೇಶಿ ನದಿಯಿಂದ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗೊಂದಿಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಎಚ್​ಡಿಕೆ ಈ ಬಾರಿಯೂ ವಚನ ಭ್ರಷ್ಟ ಆಗದೆ ನುಡಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು