ಆರ್ ಎಸ್ ಎಸ್ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ದಿಗ್ವಿಜಯ ಸಿಂಗ್
ಆರ್ ಎಸ್ ಎಸ್ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ದಿಗ್ವಿಜಯ ಸಿಂಗ್
ದಿಗ್ವಿಜಯ್ ಸಿಂಗ್ ರವರು ಮತ್ತೊಮ್ಮೆ ಆರೆಸ್ಸೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಆರ್ ಎಸ್ ಎಸ್ ವಿರುದ್ಧ ಸದಾ ಕಿಡಿಕಾರುವ ದಿಗ್ವಿಜಯ್ ಸಿಂಗ್ ರವರು ಪ್ರತಿ ಬಾರಿಯೂ ಆರ್ಎಸ್ಎಸ್ ಅನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಒಂದು ಮೆಟ್ಟಿಲು ಮೇಲೆ ಹೋಗಿ ಈ ಬಾರಿ ಒಂದು ಮೆಟ್ಟಿಲು ಮೇಲೆ ಹೋಗಿ ಗುರಿಯಾಗಿಸಿಕೊಂಡು ಮಾತನಾಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಷ್ಟಕ್ಕೂ ವಿಷಯದ ಮೂಲವೇನು?
ಮಧ್ಯಪ್ರದೇಶದಲ್ಲಿ ಈ ಏಕ ಯಾತ್ರ ನಡೆಸುತ್ತಿರುವ ದಿಗ್ವಿಜಯ್ ಸಿಂಗ್ ರವರು ಝಾಬುವಾದಲ್ಲಿ ಮಾತನಾಡುತ್ತಾ ಈವರೆಗೆ ಭಯೋತ್ಪಾದನಾ ಚಟುವಟಿಕೆ ಆರೋಪದಲ್ಲಿ ಬಂಧನಕ್ಕೊಳಗಾದ ಹಿಂದೂ ವ್ಯಕ್ತಿಗಳೆಲ್ಲರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದೊಂದಿಗೆ ನಂಟು ಹೊಂದಿದ್ದರು ಎನ್ನುವ ಮೂಲಕ RSS ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಂ ಗೋಡ್ಸೆ ಕೂಡಾ RSS ನೊಂದಿಗೆ ನಂಟು ಹೊಂದಿದ್ದರು. ಅವರ ಸಿದ್ಧಾಂತ ದ್ವೇಷ ಹಬ್ಬಿಸುತ್ತದೆ. ಈ ದ್ವೇಷದಿಂದಲೇ ಹಿಂಸಾಚಾರ ಹುಟ್ಟಿಕೊಳ್ಳುತ್ತದೆ ಹಾಗೂ ಇದೇ ಭಯೋತ್ಪಾದನೆಯಲಕ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ” ಎಂದಿದ್ದಾರೆ.
ದಿಗ್ವಿಜಯ್ ಸಿಂಗ್ ಆರ್ಎಸ್ಎಸ್ನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದು ಇದೇ ಮೊದಲ ಬಾರಿ ಅಲ್ಲ. ಕಳೆದ ಕೆಲ ದಿನಗಳ ಹಿಂದೆ ಸಾಗರದಲ್ಲಿ ಮಾತನಾಡಿದ್ದ ಅವರು ‘ನಾನು ಬಲಪಂಥೀಯ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಿದ್ದೇನೆಂದರೆ ಅದು ಸಂಘಿ ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿರುತ್ತದೆಯೇ ಹೊರತು ಹಿಂದೂ ಭಯೋತ್ಪಾದನೆ ಎಂದಲ್ಲ’ ಎಂದಿದ್ದರು.
ಪ್ರತಿ ಬಾರಿಯೂ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ದಿಗ್ವಿಜಯ್ ಸಿಂಗ್ ರವರು ಮುಂದಿನ ದಿನಗಳಲ್ಲಿ ಚುನಾವಣೆ ಸೋಲನ್ನು ಎದುರಿಸುವ ಭೀತಿಯನ್ನು ಹೊಂದಿದ್ದಾರೆ.