ಕೇರಳದ ಪ್ರದೇಶ ಕಾಂಗ್ರೆಸ್ ಕಚೇರಿ ಆನ್ ಲೈನ್ ನಲ್ಲಿ ಮಾರಾಟಕ್ಕಿದೆ. ಅದು ಕೇವಲ 10 ಸಾವಿರ ರೂಪಾಯಿಗೆ ಮಾತ್ರ!
ಕೇರಳದಲ್ಲಿ ವಿಚಿತ್ರ ರಾಜಕಾರಣದ ಬೆಳವಣಿಗೆಗಳು ನಡೆಯುತ್ತಿದ್ದರೆ ಕಿಡಿಗೇಡಿಯೊಬ್ಬ ಅನೀಶ್ ಎಂಬ ಹೆಸರಿನಲ್ಲಿ ತಿರುವನಂತಪುರದ ಕೆಪಿಸಿಸಿ ಕಚೇರಿಯ ಚಿತ್ರವನನ್ನು ಒಎಲ್ ಎಕ್ಸ್ ಗೆ ಅಪ್ ಲೋಡ್ ಮಾಡಿದ್ದು ದರ ಸಹ ನಿಗದಿ ಮಾಡಿದ್ದಾನೆ.
ಅಲ್ಲದೇ ಖರೀದಿ ಮಾಡಲು ಬಯಸುವವರು ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾನೆ. ಕಚೇರಿಯ ಸುತ್ತಳತೆ ಸೇರಿಂದಂತೆ ಎಲ್ಲ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ಕಿಡಿಗೇಡಿ ಮಾಡಿರುವ ಕೃತ್ಯಕ್ಕೆ ಕಾಂಗ್ರೆಸ್ ಕಚೇರಿ ಮಾರಾಟಕ್ಕೆ ಬಂದು ನಿಂತಿದೆ.
ಕೇರಳದಲ್ಲಿ ನಡೆಯುತ್ತಿರುವ ರಾಜಕಾರಣದ ಬದಲಾವಣೆಗಳೆ ಈ ಕೃತ್ಯಕ್ಕೆ ಕಾರಣವಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ರಾಜ್ಯಸಭಾ ಸ್ಥಾನವನ್ನು ಕೇರಳ ಕಾಂಗ್ರೆಸ್(ಎಂ)ಗೆ ಬಿಟ್ಟುಕೊಟ್ಟಿತ್ತು. ರಾಜ್ಯ ಸಭಾ ಸ್ಥಾನಕ್ಕೆ ಜೋಸ್ ಕೆ ಮಣಿ ಆಯ್ಕೆ ಮಾಡಿ ನಿರ್ಧಾರ ಪ್ರಕಟಿಸಿತ್ತು. ಇದಕ್ಕು ಮುನ್ನ ಕೇರಳ ವಿಧಾನಸಭೆ ಚುನಾವಣಾ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಯುಡಿಎಫ್ ಆರೋಪಿದಕ್ಕೆ ಯುಡಿಎಫ್ ಮೈತ್ರಿ ತೊರೆದು 2016ರಲ್ಲಿ ಕಾಂಗ್ರೆಸ್ ಹೊರ ಬಂದಿತ್ತು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಯುಡಿಎಫ್ ನೊಂದಿಗೆ ಸೇರಲು ಸಿದ್ಧತೆ ಮಾಡಿಕೊಂಡಿದೆ.