ಸವಾಲೆಸೆದ ಮೋದಿ ಅಭಿಮಾನಿ: ಮತ್ತೊಮ್ಮೆ ಬೆಪ್ಪಾದರೇ ಕಾಂಗ್ರೆಸ್ಸಿಗರು?

ಸವಾಲೆಸೆದ ಮೋದಿ ಅಭಿಮಾನಿ: ಮತ್ತೊಮ್ಮೆ ಬೆಪ್ಪಾದರೇ ಕಾಂಗ್ರೆಸ್ಸಿಗರು?

0

ಈಗೊಂದು ಪತ್ರ ಮೋದಿ ಅಭಿಮಾನಿಯೊಬ್ಬರು ನಮ್ಮ ಪೇಜ್ ಗೆ ಮೆಸೇಜ್ ಮೂಲಕ ಕಳಿಸಿದ್ದರು, ನೀವು ನಿಮ್ಮ ಅಭಿಪ್ರಾಯವನ್ನು ಮೆಸೇಜ್ ಮಾಡಬಹುದು.

ಸ್ವಾಮಿ ನಮಸ್ತೆ, ನಾನು ಒಬ್ಬ ಮೋದಿ ರವರ ಬೆಂಬಲಿಗ. ನಾನು ಇಲ್ಲಿ ಒಂದು ವಿಷಯ ತಿಳಿಸಲು, ಕಾಂಗ್ರೆಸ್ ನವರಿಗೆ ಸವಾಲು ಹಾಕಲು ಮತ್ತು ಮೋದಿ ಜಿ ಅಭಿಮಾನಿಗಳಿಗೆ ಕರೆನೀಡಲು ಬಂದಿದ್ದೇನೆ.

ನಾನು ತಿಳಿಸುವ ವಿಷಯವೇನೆಂದರೆ !

ನಿನ್ನೆಯಷ್ಟೇ ಮೋದಿ ರವರ ಹತ್ಯೆಗೆ ಸಂಚು ರೂಪಿಸಿದ ವಿಷಯ ದೇಶದಾದ್ಯಂತ ತಲ್ಲಣಗೊಳಿಸಿತ್ತು. ಹೌದು ನಿಮಗೆ ತಿಳಿದಿರಬಹುದು ಪ್ರಧಾನಿ ನರೇಂದ್ರ ಮೊದಿಯವರನ್ನು ರೋಡ್ ಶೋವೊಂದರಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಕೊಲ್ಲಲು ಯತ್ನಿಸಲಾಗಿತ್ತು ಎಂಬ ಮಾಹಿತಿಯನ್ನೊಳಗೊಂಡ ಪತ್ರವೊಂದನ್ನು ಪುಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಿಷಯ ಇನ್ನು ಸುದ್ದಿಯಲ್ಲಿ ಇರುವಾಗಲೇ ಕಾಂಗ್ರೆಸ್ಸಿಗರು ಈ ವಿಷಯ ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ‘ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದು ತಿಳಿದಾಗ ನರೇಂದ್ರ ಮೋದಿ ಅನುಸರಿಸುವ ಹಳೆ ತಂತ್ರ ಇದು’ ಎಂದಿದ್ದಾರೆ.

ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಪುಣೆ ಪೊಲೀಸರ ಆರೋಪದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಇಂತಹ ಕಥೆಗಳನ್ನು ಸೃಷ್ಟಿಸುವುದು ಮೋದಿಯವರ ಹಳೆಯ ತಂತ್ರ ಎಂದಿದೆ.ಮಾವೋವಾದಿಗಳು ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ವಿಷಯ ದೇಶದಲ್ಲಿ ತಲ್ಲಣ ಮೂಡಿಸಿರುವಾಗ ಕಾಂಗ್ರೆಸ್ ಇಂಥ ನಾಯಕರು ಈ ರೀತಿ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸುವ ಲಕ್ಷಣವಿದೆ.

ಕಾಂಗ್ರೆಸ್ ನವರಿಗೆ ನನ್ನ ಕಡೆ ಇಂದ ಒಂದು ಸವಾಲು !

ಸ್ವಾಮಿ ಮೋದಿ ಜಿ ರವರಿಗೆ ಜನಪ್ರಿಯತೆಯೆಯ ಅವಶ್ಯಕತೆ ಬಂದಿಲ್ಲ ಬರದ ಹಾಗೆ ನೀವೇ ಪ್ರತಿಯೊಂದು ಕಡೆಯೂ ಪ್ರಚಾರಕರ ಹಾಗೆ ಕೆಲಸ ಮಾಡುತ್ತಿದ್ದೀರಾ. ಇದಕ್ಕೆ ಮೊದಲು ನಿಮಗೆ ನಮಿಸುತ್ತೇನೆ. ನನ್ನ ಸವಾಲು ಏನೆಂದರೆ ಈ ಆರೋಪವನ್ನು ನಿರೂಪಿಸಿ, ಒಂದು ವೇಳೆ ಆದಲ್ಲಿ ಜನ್ಮ ಪೂರ್ತಿ ಕಾಂಗ್ರೆಸ್ ಗೆ ನಂ ಮಠ ಮತ್ತು ನೀವು ದೇಶ ಕೊಳ್ಳೆ ಹೊಡೆದರು ನಾನು ಪ್ರಶ್ನಿಸುವುದಿಲ್ಲ.

ಮೋದಿ ಜಿ ಅವರ ಅಭಿಮಾನಿಗಳಿಗೆ ಕರೆ ನೀಡುತಿದ್ದೇನೆ !

ದಯವಿಟ್ಟು ಪ್ರತಿಯೊಬ್ಬ ಮೋದಿ ಅಭ್ಭಿಮಾನಿಯು ಈ ಲೇಖನವನ್ನು ಓದಿ ಶೇರ್ ಮಾಡಿ ಮತ್ತು ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮದೇ ಆದ ಪ್ರಶ್ನೆ ಸವಾಲುಗಳನ್ನು ಎಸೆಯಿರಿ. ಖಂಡಿತ ಈ ಲೇಖನಗಳ ಶೇರ್ ನ ಸಂಖ್ಯೆ ರಾಹುಲ್ ರವರ ಫಾಲ್ಲೋರ್ಸ್ ಅನ್ನು ದಾಟುತ್ತದೆ ಎಂಬುವ ನಂಬಿಕೆ ಇದೆ.

ಇಂತಿ – ವೀರ ಹಿಂದೂ ಕನ್ನಡಿಗ

ನೋಡಿದಿರಲ್ಲ ಈ ಯುವಕನ ಮಾತುಗಳು. ನೀವು ಯಾವುದೇ ಬರಹಗಳನ್ನು ಕಳುಹಿಸಿದರೆ ಅದನ್ನು ನಾವು ಇಲ್ಲಿ ಪೋಸ್ಟ್ ಮಾಡುತ್ತೇವೆ