ಎಷ್ಟು ಸಮಿಕ್ಷೆ ಬಂದರೆನಂತೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತಿರುತ್ತೇವೆ.!!ಮೈಸೂರು ಯುವಕನಿಂದ ಮೋದಿಜಿ ಗೆ ಬಹಿರಂಗ ಪತ್ರ.
ಎಷ್ಟು ಸಮಿಕ್ಷೆ ಬಂದರೆನಂತೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತಿರುತ್ತೇವೆ.!!ಮೈಸೂರು ಯುವಕನಿಂದ ಮೋದಿಜಿ ಗೆ ಬಹಿರಂಗ ಪತ್ರ.
ನಿನ್ನೆ ಬಂದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರವುದಲ್ಲದೇ, 2013ರಲ್ಲಿ ಪಡೆದಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ‘ಸಿ-ಫೋರ್’ ಸಮೀಕ್ಷೆ ಹೇಳಿದೆ.
ವಿಧಾನಸಭೆಯ ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 126, ಬಿಜೆಪಿ 70 ಹಾಗೂ ಜೆಡಿಎಸ್ 27 ಸ್ಥಾನ ಪಡೆಯಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಹಿಂದೆ ಇಂತಹ ಎಷ್ಟೋ ಸಮೀಕ್ಷೆಗಳು ಉಲ್ಟಾ ಹೊಡೆದಿದು ನಾವು ಕಾಣಬಹುದು. ಇದು ಕೂಡ ಅಂತಹದೇ ಒಂದು ಸಮೀಕ್ಷೆ ಎಂದು ಹೇಳಬಹುದು.ಕೆಲವೊಮ್ಮೆ ವಸ್ತುನಿಷ್ಠ ಬೇರೆಇರುತ್ತದೆ ಸಮೀಕ್ಷೆ ಬೇರೆ ಆಧಾರದ ಮೇಲೆ ಮಾಡಿರುತ್ತಾರೆ.
ಅದೇನೇ ಇರಲಿ! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದು ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತವನ್ನು ವಿಶ್ವಗುರು ಮಾಡಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪೂರ್ಣ ಬೆಂಬಲವಿದೆ.
ಹಾಗಾಗಿ ನಾವು 2018 ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ.
ಅಷ್ಟಕು ನಾವು ಯಾಕೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ ಗೊತ್ತಾ..!!??
ಸಹಜವಾಗಿ ಕೇಂದ್ರದಲ್ಲಿ ಬೇರೆ ಪಕ್ಷ ಅಧಿಕಾರ ಮತ್ತು ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದರೆ ಕೇಂದ್ರದಿಂದ ಬಜೆಟ್ ರಾಜ್ಯಕ್ಕೆ ಬರುವುದು ಅಷ್ಟು ಸುಲಭವಲ್ಲ. ಇಷ್ಟು ವರ್ಷ ಇದು ಹಾಗೆಯೇ ನಡೆದುಕೊಂಡು ಬಂದಿದೆ ಆದರೆ ಮೋದಿ ಸರ್ಕಾರ ಈ ಮಲತಾಯಿ ಧೋರಣೆಯನ್ನು ಮಾಡದೆ ರಾಜ್ಯಕ್ಕೆ ಹತ್ತು ಹಲವು ಯೋಜನೆಯಡಿ ಹಣ ಬಿಡುಗಡೆ ಮಾಡಿದ್ದಾರೆ.
ಅಷ್ಟಕು ಯಾವ ಯಾವ ಯೋಜನೆಯಡಿ ಹಣ ಬಂದಿದೆ..!!
*14 ನೇ ಹಣಕಾಸು ಆಯೋಗದ ಅನ್ವಯ ಕರ್ನಾಟಕಕ್ಕೆ 14.19 ಲಕ್ಷ ಕೋಟಿ ರೂ. ಆದಾಯದ ಪಾಲು ಬಂದಿದೆ.
*ಅಮೃತ್ ಯೋಜನೆ:ರಾಜ್ಯದ 27 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.ರಾಜ್ಯಕ್ಕೆ ಐದು ವರ್ಷಗಳಲ್ಲಿ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 4,900 ಕೋಟಿ ರೂ.
*ಉಜ್ವಾಲ್ ಯೋಜನೆ: ಈ ಯೋಜನೆಯಡಿ ಬಿಪಿಎಲ್ ಕಾರ್ಡುದಾರ ಕುಟುಂಬಗಳ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವನ್ನು ಒದಗಿಸಲಾಗುವುದು – ರಾಜ್ಯಕ್ಕೆ ಮೂರು ವರ್ಷಗಳಲ್ಲಿ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 4,900 ಕೋಟಿ ರೂ.
*ಜಿಲ್ಲಾ ಖನಿಜ ನಿಧಿ: ರೂ. 34,353
*ರಾಷ್ಟ್ರೀಯ ಹೆದ್ದಾರಿಗಳು: ರೂ. 27,000 ಕೋಟಿ
*ಬೆಂಗಳೂರು ಮೆಟ್ರೋ: ರೂ. 2,600 ಕೋಟಿ ರೂ.
*ರೈಲ್ವೆ ಇಲಾಖೆಕ್ಕೆ: ರೂ. 2,197 ಕೋಟಿ.
* ಸ್ಮಾರ್ಟ್ ಸಿಟಿ: ರಾಜ್ಯದ 6 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳನ್ನು ಆಯ್ಕೆಮಾಡಲಾಗಿದೆ. ಈ ಯೋಜನೆ ಪೂರ್ಣ ಗೊಳ್ಳುವ ಈ ಯೋಜನೆ ಮೊತ್ತ ರೂ. 960 ಕೋಟಿ ರೂ.
*ಪ್ರಧಾನಿ ಕೃಷ್ಣ ಸಿಂಚೈ ಯೋಜನೆ: ರೂ. 405
*ಸರ್ಕಾರಿ ಕಾರು ಗಳು ಬಸ್ಗಳು ಖರೀದಿಗೆ: ರೂ. 239 ಕೋಟಿ.
*ಪ್ರಧಾನಿ ಆವಾಸ್ ಯೋಜನೆ: ರೂ. 219 ಕೋಟಿ.
*ಸ್ವಚ್ ಭಾರತ: ರೂ. 204 ಕೋಟಿ.
*Soil ಆರೋಗ್ಯ ಕಾರ್ಡ್: ರೂ. 31 ಕೋಟಿ
ಇತರ ನಿಯೋಜನೆಗಳೊಂದಿಗೆ, ಒಟ್ಟಾರೆಯಾಗಿ ಸುಮಾರು ರೂ. 3.36 ಲಕ್ಷ ಕೋಟಿ ರೂ ಮೋದಿ ಸರ್ಕಾರ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ.
ಇಷ್ಟಲ್ಲಾ ಕೆಲಸ ಮಾಡಿರುವ ಮೋದಿಜಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಮಾಡುತ್ತಾರೆ ಎಂದು ಬರವಸೆ ಎಲ್ಲರಲ್ಲೂ ಇದೆ.
ಇದುವರೆಗೂ ಇಷ್ಟು ದುಡ್ಡು ಕೇಂದ್ರದ ರಾಜ್ಯಕ್ಕೆ ಬಂದಿದೆ ಆದರೂ ಕೂಡ ನಮ್ಮ ಮುಖ್ಯಮಂತ್ರಿಗಳು ಹೇಳುತ್ತಾರೆ ಕೇಂದ್ರದಿಂದ ಯಾವುದೇ ಸೌಲಭ್ಯಗಳು ಬಂದಿಲ್ಲ ಅನೋದು ಎಷ್ಟರಮಟ್ಟಿಗೆ ಸರಿ ನೀವೇ ಯೋಚನೆ ಮಾಡಿ.
ದೇಶಕ್ಕೆ ನರೇಂದ್ರ ಮೋದಿಯವರ ಸೇವೆ ಅಪ್ರತಿಮ..!! ಹಾಗೆ ರಾಜ್ಯಕ್ಕೆ ಯಡಿಯೂರಪ್ಪ ಸೇವೆ ಅಪ್ರತಿಮ..!!ಹಾಗಾಗಿ ನಾವು 2018 ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಸೋಲಲು ಬಿಡುವುದಿಲ್ಲ ಗೆಲ್ಲಿಸಿಯೇ ತೀರುತ್ತೇವೆ.
-ಭರತ, ಮೈಸೂರು