ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜಯ.! ಕಾಂಗ್ರೆಸ್, ಎಸ್.ಪಿ, ಬಿ.ಎಸ್.ಪಿ ಮೈತ್ರಿಗೆ ಭಾರೀ ಮುಖಭಂಗ..!!
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜಯ.! ಕಾಂಗ್ರೆಸ್, ಎಸ್.ಪಿ, ಬಿ.ಎಸ್.ಪಿ ಮೈತ್ರಿಗೆ ಭಾರೀ ಮುಖಭಂಗ..!!
ಸಮಾಜವಾದಿ-ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 10 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ.
ತೀವ್ರ ಕುತುಹಲ ಕೆರಳಿಸಿದ್ದ ಉತ್ತರ ಪ್ರದೇಶದ ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್ ಅವರು ಗೆಲುವು ಸಾಧಿಸಿದರೆ ಇನ್ನೊಂದೆಡೆ ಮಾಯಾವತಿಯವರ ಬಿಎಸ್ಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್ ಹಾಗೂ ಎಸ್ಪಿ ಗೆ ತೀವ್ರ ಹಿನ್ನಡೆಯಾಗಿದೆ.
39 ಮತಗಳನ್ನು ಗಳಿಸುವ ಮೂಲಕ ಬಿಜೆಪಿಯ 8 ಅಭ್ಯರ್ಥಿಗಳು ಜಯಿಸಿದ್ದರೆ, ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಅನಿಲ್ ಕುಮಾರ್ ಅಗರ್ವಾಲ್ ಸ್ವತಂತ್ರ ಹಾಗೂ ಬಂಡಾಯ ಶಾಕರರ ನೆರವಿನಿಂದ ಜಯ ಗಳಿಸಿದ್ದಾರೆ.
ಮೈತ್ರಿಯ ವಿಶ್ವಾಸದಿಂದ ಮಾಯಾವತಿಯವರಿಗೆ ಬೆಂಬಲ ಸೂಚಿಸಿ ಉಳಿಕೆಯಾಗಿದ್ದ ಎಸ್ಪಿಯ ಮತಗಳನ್ನು ನೀಡಿದರೂ, ಕಾಂಗ್ರೆಸ್ ಬೆಂಬಲಿಸಿದರೂ ಸೋಲು ಕಂಡಿರುವುದು ಮಾಯಾವತಿಗೆ ಭಾರಿ ಆಘಾತ ನೀಡಿದೆ. ಕಳೆದ ಒಂದು ವಾರದ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಬೀಗಿದ್ದ ಎಸ್ಪಿ ಮತ್ತು ಬಿಎಸ್ಪಿಗೆ ರಾಜ್ಯಸಭಾ ಚುನಾವಣೆ ಮಾತ್ರ ಕೈಕೊಟ್ಟಿದೆ.
2 ನೇ ಪ್ರಾಶಸ್ತ್ಯ ಮತದಲ್ಲಿ ಬಿಜೆಪಿಗೆ ಅದೃಷ್ಟ ಒಲಿದು 9ನೇ ಅಭ್ಯರ್ಥಿ ಕೂಡ ವಿಜಯ ಸಾಧಿಸಿರುವುದು ಕಮಲ ಪಾಳಯದಲ್ಲಿ ಸಂಭ್ರಮ ಮೂಡಿಸಿದೆ.