ಮುಖ್ಯಮಂತ್ರಿಗಳೇ ನೀವು ಅನ್ನ ಕಿತ್ತುಕೊಂಡರೇನಾಯಿತು.? ನಾವೇ ಅನ್ನದಾತರಾಗುತ್ತೇವೆ!! ಶ್ರೀರಾಮ ವಿದ್ಯಾಕೇಂದ್ರ.

0

ಹೌದು!! ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಪ್ರಸಾದ ರೂಪದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮದ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ಈಗಿನ ಸಿದ್ದನ ಪೆದ್ದು ಸರ್ಕಾರ ನಿಲ್ಲಿಸಿದ್ದು ಲೋಕಕ್ಕೆ ಗೊತ್ತಿರುವ ವಿಚಾರ.. ಇದಿಕ್ಕೆ ನಮ್ಮ ಬಂಟ್ವಾಳದ ಶಾಸಕ ರಮಾನಾಥ ರೈ ಅವರೇ ಕುಮ್ಮಕ್ಕು ಕೊಟ್ಟದು ಅನ್ನೋದು ಬೇರೆ ಅಕ್ಷರಶಃ ಸತ್ಯ. ವಿರೋಧವಾಗಿ ಕಲ್ಲಡ್ಕದ 3500 ಮಕ್ಕಳು ಸಿಡಿದೆದ್ದು ಬಿಸಿರೋಡ್ನ ನಡು ರಸ್ತೆಯಲ್ಲಿ ಮಾತಿನ ಮೂಲಕ ಮುಖ್ಯಮಂತ್ರಿ ಹಾಗೂ ರಮಾನಾಥ ರೈ ವಿರುದ್ಧ ತೊಡೆ ತಟ್ಟಿದ್ದು ಇಡೀ ರಾಜ್ಯದ ಯಾಕೆ ದೇಶದ ಗಮನ ಸೆಳೆದಿತ್ತು..

ತಮ್ಮ ಅನ್ನ ಕಿತ್ತುಕೊಂಡ ಈ ರಾಕ್ಷಸರ ವಿರುದ್ಧ ಕಲ್ಲಡ್ಕದ ಮಕ್ಕಳು ತಮ್ಮ ನಿಷ್ಠೆ, ಕಠಿಣ ಪರಿಶ್ರಮ ಮೆರೆದು ರಾಜ್ಯದ ಮುಖ್ಯಮಂತ್ರಿಗಳು ಮತ್ತೆ ಆ ಮಕ್ಕಳೆದುರು ತಲೆಬಾಗುವಂತೆ ಮಾಡಿದ್ದಾರೆ ಗೊತ್ತಾ? ಶಾಸಕರು ಮತ್ತೆ ತಲೆನೋವಲ್ಲಿ ಹತ್ತಾರು ಚಿನ್ನೇಮಾತ್ರೆ ಒಂದೇ ಸಲಕ್ಕೆ ನುಂಗುವ ಹಾಗೆ ಶಾಕ್ ಕೊಟ್ಟಿದ್ದಾರೆ..

ಕಲ್ಲಡ್ಕದ ವಿದ್ಯಾರ್ಥಿಗಳು ID ಕಾರ್ಡ್ ಹಾಕಿಕೊಂಡು ಕುತ್ತಿಗೆಗೊಂದು ಟೈ,ಕಾಲಿಗೆ ಶೂ ಹಾಕಿಕೊಂಡು ಇರುವ ಪಟ್ಟಣದ ಟೈಸನ್ ಕೋಳಿಯ ಹಾಗೆ ಇರುವ ಮಕ್ಕಳಂತೆ ಅಲ್ವೇ ಅಲ್ಲ, ಹುಲಿ ಬಂದಾಗ ಗನ್ ಬದಲು ಗನ್ ನ ಲೈಸೆನ್ಸ್ ತೋರಿಸುವಷ್ಟು ಬುದ್ಧಿವಂತರೂ ಅಲ್ಲಪ್ಪ. ಅವರು ಶ್ರಮಜೀವಿಗಳು, ಮಣ್ಣಲ್ಲೇ ಹುಟ್ಟಿ , ಮನ್ನಿಗೋಸ್ಕರ ಜೀವಿಸುವವರು.

ಇತ್ತೀಚೆಗೆ ಕಲ್ಲಡ್ಕದ ವಿದ್ಯಾರ್ಥಿಗಳು ಕಲ್ಲಡ್ಕ ಪಕ್ಕದ ಸುದೇಕಾರು ಎಂಬಲ್ಲಿ ಶಾಲೆಯ ಗದ್ದೆಯಲ್ಲಿ ಶುದ್ಧ ಸಾವಯವದ ಬಂಗಾರದ ಬೆಳೆ ಬೆಳೆದಿದ್ದಾರೆ. ಅವರೇ ನಾಟಿ ಮಾಡಿ, ಅವರೇ ನೆಟ್ಟು,ಅವರೇ ಗೊಬ್ಬರ ಹಾಕಿ,ಅವರೇ ಕಟಾವು ಮಾಡಿ. ಕಷ್ಟಪಟ್ಟು ಅವರ ಬೆವರನ್ನು ಬತ್ತವಾಗಿ ಪರಿವರ್ತಿಸಿ ಶ್ರೀರಾಮನ ಪಾದಕ್ಕೆ ಅರ್ಪಣೆ ಮಾಡಿದ್ದಾರೆ. ಸುಮಾರು 2 ಎಕರೆ ಜಾಗ ಗದ್ದೆಯಲ್ಲಿ ಬತ್ತ ಬೆಳೆಯಲಾಗಿದೆ.ಇದರ ಹುಲ್ಲು ಕಾಲೇಜಿನ ವಸುಧಾರ ಗೋಶಾಲೆಗೆ. ಸಂಬಂದಿಸಿದ ಫೋಟೋ ಇಲ್ಲಿ ಕಾಣಬಹುದು

ಈಗಿನ ಕಾಲದಲ್ಲಿ ದನಕ್ಕೆ ಎಷ್ಟು ಕಾಲಿದೆ ಅಂತ ಗೊತ್ತಿಲ್ಲದವರೆ ಜಾಸ್ತಿ. ನಾಯಿಜತೆ ಅದನ್ನು ಎತ್ತಿಕೊಂಡು status ಹಾಕುವ ಈ ವಾಟ್ಸ್ ಅಪ್ ಯುಗದಲ್ಲಿ ಕೆಸರಿನ ಗದ್ದೆಗಿಳಿದು ತಾವೇ ನಾಟಿ ಮಾಡಿ ತಾವೇ ದುಡಿದು ತಾವೇ ಕಟಾವು ಮಾಡಿ ತಾವೇ ತಿನ್ನುವ ವಿದ್ಯಾರ್ಥಿಗಳು ಎಲ್ಲಿಯಾದ್ರು ಇದ್ರೆ ಅದು ಹಿಂದುತ್ವದ ಶಕ್ತಿಕೇಂದ್ರ ಕಲ್ಲಡ್ಕದಲ್ಲಿ ಮಾತ್ರ.

ಕನ್ನಡ ಮಾಧ್ಯಮ; ಕನ್ನಡ ಮಾಧ್ಯಮ ಅಂತ ಬಾಯಿ ಬಾಯಿ ಬಡಿದುಕೊಳ್ಳುವ ಕನ್ನಡ ಸಂಘಟನೆಗಳು ಊಟದ ವಿಷಯದಲ್ಲಿ ಕರ್ನಾಟಕದ ಅತೀ ದೊಡ್ಡ ಕನ್ನಡ ಮಾಧ್ಯಮ ಶಾಲೆಗೆ ಅನ್ಯಾಯ ಆದಾಗಂತೂ ಮಾತಾಡಲಿಲ್ಲ.. ಇವಾಗಳಾದರೂ ಬಂದು ಮಕ್ಕಳನ್ನು ಪ್ರೋತ್ಸಾಹಿಸುತ್ತೀರಾ? ಅಭಿನ0ದಿಸುತ್ತೀರಾ ಅಂತಾ ಕಾದು ನೋಡಬೇಕಿದೆ.

ಇನ್ನು ಮಂಗಳೂರಿನ ಉಸ್ತುವಾರಿ ಸಚಿವ ಸ್ಥಳೀಯ ಶಾಸಕ ರಮಾನಾಥ ರೈ ಅವರು ಮಕ್ಕಳ ಅನ್ನಕಿತ್ತುಕೊಂಡ ದೊಡ್ಡ ಮಹಾನುಭಾವ. ದಮ್ಮ್ ಇದ್ರೆ ನಿಮ್ಮ ಹುಲಿಕುಣಿತ ಬದಿಗಿಟ್ಟು ಶ್ರೀ ರಾಮವಿದ್ಯಾಕೇಂದ್ರಕ್ಕೆ ಬಂದು ಇಂತಹ ಚಿನ್ನದ ಬೆಳೆ ಬೆಳೆದ ಮಕ್ಕಳನ್ನು ಒಮ್ಮೆ ನೋಡಿ ಅಭಿನಂದಿಸಿ ಸ್ವಾಮಿ. ಗಂಗೆಯಲ್ಲಿ ಮಿಂದಷ್ಟು ಪಾಪ ಪ್ರಾಯಶ್ಚಿತ್ತ ಆಗಬಹುದು ನಿಮ್ಮದು.

ಇನ್ನು ಮುಖ್ಯಮಂತ್ರಿಗಳೇ ನೀವು ರೈತರ ಮಗ ರೈತರ ಮಗ ಅನ್ನುವವರು. ಮಣ್ಣಿನ ಮಗ ಅಲ್ಲ ರೈತರನ್ನು ಅವರ ಮಕ್ಕಳನ್ನು ಮಣ್ಣು ಮಾಡಿದ ಮಗ ನೀವು . ಇಂತಹ ಒಂದು ವಿದ್ಯಾಕೇಂದ್ರವನ್ನು ಒಂದು ವಿದ್ಯಾರ್ಥಿಯನ್ನು ನಿಮ್ಮಿಂದ ಸೃಷ್ಠಿ ಮಾಡಲು ಸಾಧ್ಯವೇ??ಅಷ್ಟು ತಾಕತ್ತು ನಿಮ್ಮತ್ರ ಇದೆಯೇ??

ಏನೇ ಆಗಲಿ ನಿಮ್ಮಿಂತ ಕಿತ್ತು ತಿನ್ನುವ ಕಟುಕರ ಮದ್ಯೆ ಕಷ್ಟಪಟ್ಟು ಬೆವರು ಸುರಿಸಿ ತಿನ್ನುವ ಮುಗ್ಧ ಜೀವಿಗಳಿದ್ದಾರೆ ಅಲ್ವಾ ಅದು ವಿಶೇಷ.

ಇದಿಕ್ಕೆಲ್ಲದ್ದಕ್ಕೂ ಮಾರ್ಗದರ್ಶಕರು ಹಿಂದುತ್ವದ ದೃವನಕ್ಷತ್ರದಂತೆ ಇರುವ ಡಾ.ಕಲ್ಲಡ್ಕ ಪ್ರಭಾಕರ ಭಟ್ ಜಿ. ಮಕ್ಕಳೊಂದಿಗೆ ಅವರೂ ಗದ್ದೆಗಿಳಿದು ಪೈರು ಕಟಾವು ಮಾಡುತ್ತಾರೆ, ನಗು ನಗುತ್ತಾ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವ ದಾರಿದೀಪ ಅವರು. ಅದರೋಂದಿಗೆ ಶಿಕ್ಷಕ ವರ್ಗದವರ ಪಾತ್ರವೂ ಅಪಾರ.

“ಹಳ್ಳಿಯವರಾದ್ರು.. ಬಡವರಾದ್ರು.ಪಾಪದವರಾದ್ರು ನಿಮ್ಮ ಹಾಗೆ ಪಾಪಿಗಳಲ್ಲ ಸಿದ್ದಣ್ಣ. ಯಾರಿಗಿಂತನೂ ನಾವೇನೂ ಕಮ್ಮಿ ಅಲ್ಲ. ಕಷ್ಟವನ್ನು ಎದುರಿಸುವ ಸಾಮರ್ಥ್ಯ ಇರುವವರು.. ಕಷ್ಟ ಇದೆ ಅಂತ ಮನಸ್ಸಿಗೆ ಹೇಳದೆ, ಮನಸ್ಸಿದೆ ಅಂತಾ ಕಷ್ಟಕ್ಕೆ ಹೇಳುವ ವಿದ್ಯಾರ್ಥಿಗಳು ಎಲ್ಲಕ್ಕೂ ಮಿಗಿಲಾಗಿ ಸ್ವಾಭಿಮಾನಿಗಳು. ನಾವು ಅನ್ನ ಕೊಡುವರೆ ಹೊರತು. ನಿಮ್ಮಹಾಗೆ ಕಿತ್ತುಕೊಳ್ಳುವವರು ಆಗೋಲ್ಲ ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ.”

ಇದೆ ಮುಗ್ದ ಮಕ್ಕಳು ಬೆಳೆದು ಮಾಡಿದ ಅಕ್ಕಿಯನ್ನೇ ನಿಮ್ಮ ಕಾಂಗ್ರೆಸ್ ಸರ್ಕಾರದ ಶವದ ಅಂತಿಮ ಯಾತ್ರೆಯಲ್ಲಿ ಹೆಣದ ಮೇಲೆ ಬಿಸಾಡುತ್ತೇವೆ ಸಿದ್ದಣ್ಣ ಎಚ್ಚರ!!! ಇನ್ನಾದರೂ ನಿಮ್ಮನ್ನು ನೀವು ತಿದ್ದಿಕೊಳ್ಳಿ.

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ನಿಜವಾದ ಭಕ್ತರು ಅಂದ್ರೆ ಹೀಗೇನೆ. ಶ್ರೀರಾಮ ವಿದ್ಯಾಸಂಸ್ಥೆಯ ಪ್ರತಿಯೊಂದು ಮಗು ಕೂಡ ಹೀಗೇನೆ, ಶ್ರೀರಾಮ ನ ಪ್ರತಿಬಿಂಬದಂತೆ…!! ಇದೆ ಹಿಂದೂಧರ್ಮದ ಶಕ್ತಿಕೇಂದ್ರ..!

ಸತ್ಯದ ಗಾಳಿ ಓಂಕಾರ ಶಬ್ಧ ಮಾಡುತ್ತಾ ಬೀಸುವ ಕಲ್ಲಡ್ಕ ಹನುಮಾನ್ ನಗರ. ನಾವು ಕಣ್ಣೀರು ಸುರಿಸುವವಲ್ಲ, ಬೆವರು ಸುರಿಸುವವರು…!! ಬೆವರು ಸುರಿಸುವವರು ಕಣ್ಣೀರು ಅಂತೂ ಅಲ್ಲವೇ ಅಲ್ಲ!

ಹಿಂದುತ್ವ ರಕ್ಷಕರೂ ನಾವೇ ಅನ್ನದಾತರೂ ನಾವೇ ಜೈ ಜವಾನ್ ಜೈ ಕಿಸಾನ್…!!

ಸಹಮತವಿದ್ರೆ ಶೇರ್ ಮಾಡಿ..ಧನ್ಯವಾದಗಳು.

-ಸಚಿನ್ ಜೈನ್ ಹಳೆಯೂರು