ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ ಮುಸ್ಲಿಂ ಬಾಂಧವರು

ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ ಮುಸ್ಲಿಂ ಬಾಂಧವರು

0

ಅಯೋಧ್ಯೆಯು ಶ್ರೀರಾಮನ ಜನ್ಮ ಸ್ಥಳ ವೆಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಕೆಲವರು ಕೇವಲ ಹಿಂದುತ್ವವನ್ನು ದೂಷಿಸುವ ಉದ್ದೇಶದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬಾರದು ಎಂದು ವಾದಿಸುತ್ತಿದ್ದಾರೆ.

ಇನ್ನು ಕೆಲವು ಮುಸ್ಲಿಂ ಬಾಂಧವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂದು ಅಯೋಧ್ಯೆಯಲ್ಲಿ ಯಾವುದೇ ಮಸೀದಿಗಳು ಇರಲಿಲ್ಲ,ಎಂದು ಹೇಳಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿರುವ ಮುಸ್ಲಿಂ ಬಾಂಧವರು ಮಾಡಿದ ಕೆಲಸವನ್ನು ನೋಡಿದರೆ ಶಹಬ್ಬಾಸ್ ಎನ್ನುತ್ತೀರ.

ಒಂದು ಕಡೆ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಒಂದು ಕಡೆ ಮುಸ್ಲಿಮರು ನಮ್ಮ ಮಸೀದಿಗಳು ಅಯೋಧ್ಯೆಯಲ್ಲಿ ಇರಲಿಲ್ಲ, ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳ ಆದ್ದರಿಂದ ಇಲ್ಲಿ  ರಾಮಮಂದಿರ ನಿರ್ಮಾಣವಾಗಬೇಕು ಇದೊಂದು ಪುಣ್ಯದ ಕೆಲಸವಾಗಿದ್ದು ಅದಕ್ಕಾಗಿ ತಮ್ಮ ಭೂಮಿಯನ್ನು ನೀಡಲು ಸಿದ್ಧರಿರುವುದಾಗಿ ಅಯೋಧ್ಯೆಯ ಮುಸ್ಲಿಂ ಬಾಂಧವರು ತಿಳಿಸಿದ್ದಾರೆ.

ಇದರಿಂದ ರಾಮಮಂದಿರ ನಿರ್ಮಾಣಕ್ಕೆ ಆನೆಬಲ ಬಂದಂತಾಗಿದ್ದು, ಕೋರ್ಟು ತೀರ್ಪು ರಾಮಮಂದಿರ ನಿರ್ಮಾಣದ ಪರವಾಗಿರುತ್ತದೆ ಎಂದು ಇಡೀ ದೇಶದ ಜನತೆಯ ಕಾಯುತ್ತಿದ್ದಾರೆ.