ಒಂದಾದ ರಾಷ್ತ್ರೀ- ಯತಾ ವಾದಿಗಳು ಹಾಗೂ ಸುಶಾಂತ್ ಫ್ಯಾನ್ಸ್ ! ಅಮಿರ್, ಆಲಿಯಾ ಗೆ ಬಿಗ್ ಶಾಕ್ ! ನಡೆಯುತ್ತಿರುವುದಾದರೂ ಏನು ಗೊತ್ತಾ?
ಒಂದಾದ ರಾಷ್ತ್ರೀ- ಯತಾ ವಾದಿಗಳು ಹಾಗೂ ಸುಶಾಂತ್ ಫ್ಯಾನ್ಸ್ ! ಅಮಿರ್, ಆಲಿಯಾ ಗೆ ಬಿಗ್ ಶಾಕ್ ! ನಡೆಯುತ್ತಿರುವುದಾದರೂ ಏನು ಗೊತ್ತಾ?
ನಮಸ್ಕಾರ ಸ್ನೇಹಿತರೇ, ಬಾಲಿವುಡ್ನಲ್ಲಿ ಇದೀಗ ಎಲ್ಲಿ ನೋಡಿದರೂ ಸ್ವಜನ ಪಕ್ಷಪಾತ ಎಂಬ ಮಾತು ಕೇಳಿ ಬರುತ್ತಿದೆ. ಸ್ವಜನ ಪಕ್ಷಪಾತದಿಂದ ಬಾಲಿವುಡ್ ಚಿತ್ರರಂಗಕ್ಕೆ ನಷ್ಟ ಉಂಟಾಗುತ್ತಿದ್ದು ಯಾವುದೇ ಕಾರಣಕ್ಕೂ ಸ್ವಜನ ಪಕ್ಷಪಾತ ಮಾಡಿದ ಯಾವುದೇ ಸೆಲೆಬ್ರಿಟಿಗಳನ್ನು ನಾವು ಬಿಡುವುದಿಲ್ಲ ಎಂದು ನೆಟ್ಟಿಗರು ಅದರಲ್ಲಿಯೂ ಸುಶಾಂತ ಸಿಂಗ್ ಅಭಿಮಾನಿಗಳು ಪಣತೊಟ್ಟಿದ್ದಾರೆ. ಇನ್ನು ಇದೀಗ ಸ್ವಜನ ಪಕ್ಷಪಾತದ ಜೊತೆ ರಾಷ್ಟ್ರೀ- ಯತೆ ಎಂಬ ವಾದ ಸೇರಿಕೊಂಡಿದ್ದು ಕಳೆದ ಬಾರಿಗಿಂತ ಬಹುದೊಡ್ಡ ಅಭಿಯಾನ ನಡೆಯುವ ಸಾಧ್ಯತೆಗಳು ಕಾಣಸಿಗುತ್ತವೆ. ಒಂದು ವೇಳೆ ಈ ಬಾರಿಯೂ ಕೂಡ ನೆಟ್ಟಿಗರ ಅಭಿಯಾನ ಗೆದ್ದಲ್ಲಿ ಖಂಡಿತ ದೇಶದಲ್ಲಿ ಮತ್ತಷ್ಟು ಸ್ವಜನ ಪಕ್ಷಪಾತ ಹಾಗೂ ರಾಷ್ಟ್ರೀ- ಯತೆ ಕುರಿತು ಸೆಲೆಬ್ರಿಟಿಗಳು ನಡೆ ಇಡುವ ಮುನ್ನ ಆಲೋಚಿಸಿ ಮುಂದುವರೆಯುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಅಸಲಿಗೆ ರಾಷ್ಟ್ರೀ- ಯತೆ ಹಾಗೂ ಸ್ವಜನ ಪಕ್ಷಪಾತದ ಕೂಗು ಕೇಳಿ ಬರಲು ಕಾರಣವಾದರೂ ಏನು?
ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಬಳಿಕ ಬಾಲಿವುಡ್ ಚಿತ್ರರಂಗದಲ್ಲಿ ಕರನ್ ಜೋಹರ್, ಸಲ್ಮಾನ್ ಖಾನ್, ಮಹೇಶ್ ಭಟ್ ಸೇರಿದಂತೆ ಇನ್ನೂ ಹಲವಾರು ಸೆಲೆಬ್ರೆಟಿಗಳು ಸ್ವಜನ ಪಕ್ಷಪಾತದ ಮತ್ತೊಂದು ಮುಖವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ಈಗಾಗಲೇ ಕರನ್ ಜೋಹರ್ ರವರಿಗೆ ಯಾವ ಪರಿಸ್ಥಿತಿ ಬಂದಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಇನ್ನು ಭಾರಿ ನಿರೀಕ್ಷೆ ಮೂಡಿಸಿದ್ದ ಮಹೇಶ್ ಭಟ್ ರವರ ಸಡಕ್ 2 ಚಿತ್ರದ ಟ್ರೈಲರ್ ಗೆ ಬರೋಬ್ಬರಿ 1.2 ಕೋಟಿಗೂ ಹೆಚ್ಚು ಜನರು ಇಷ್ಟವಾಗಿಲ್ಲ ಎಂಬ ಬಟನ್ ಕ್ಲಿಕ್ ಮಾಡಿ ದ್ದಾರೆ. ಇನ್ನು ಕೇವಲ 6.8 ಲಕ್ಷ ಜನರು ಮಾತ್ರ ಟ್ರೈಲರ್ ನಮಗೆ ಇಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಮಹೇಶ್ ಭಟ್ ಸೇರಿದಂತೆ ಅವರ ಪುತ್ರಿ ಆಲಿಯಾ ಭಟ್ ಅವರಿಗೂ ಕೂಡ ಶಾಕ್ ಆಗಿದೆ. ಯಾಕೆಂದರೆ ಈ ಹಿಂದೆ ಆಲಿಯಾ ಭಟ್ ರವರ ನಟನೆ ಚೆನ್ನಾಗಿದೆ ಎಂದು ಹಲವಾರು ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದವು.
ಆದರೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಬಳಿಕ ಆಲಿಯಾ ಭಟ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಇನ್ನು ಭಾರತದ ರಾಷ್ಟ್ರೀ- ಯತ ವಿಚಾರವಾಗಿ ಹಲವಾರು ವರ್ಷಗಳ ಹಿಂದೆ ಅಮೀರ್ ಖಾನ್ ರವರು ನೀಡಿದ್ದ ಹೇಳಿಕೆ ಇಡೀ ಭಾರತದಲ್ಲಿ ಭಾರಿ ಸದ್ದು ಮಾಡಿತ್ತು. ಅಮೀರ್ ಖಾನ್ ರವರ ವಿರುದ್ಧ ನೆಟ್ಟಿಗರು ಗರಂ ಆದ ಕಾರಣ ಸಾವಿರಾರು ಕೋಟಿ ಜಾಹೀರಾತುಗಳು ಅಮೀರ್ ಖಾನ್ ರವರ ಕೈತಪ್ಪಿ ಹೋಗಿದ್ದವು. ಸ್ನ್ಯಾಪ್ಡೀಲ್ ಸಂಸ್ಥೆಯು ಅಮೀರ್ ಖಾನ್ ರವರ ಜಾಹೀರಾತು ತೆಗೆಯದೇ ಕೆಲವು ದಿನಗಳ ಕಾಲ ಕಾಲಕಳೆದ ಕಾರಣ, ಸ್ನ್ಯಾಪ್ಡೀಲ್ ಸಂಸ್ಥೆ ಕಂಡು ಕೇಳರಿಯದ ರೀತಿಯಲ್ಲಿ ನಷ್ಟ ಅನುಭವಿಸಿತು. ಅದಾದ ನಂತರ ಅಮೀರ್ ಖಾನ್ ರವರನ್ನು ಜಾಹೀರಾತಿನಿಂದ ತೆಗೆದರು ಕೂಡ ಸ್ನಾಪ್ ಡೀಲ್ ಸಂಸ್ಥೆ ಮೇಲಕ್ಕೆ ಹೇಳಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ, ಇದೀಗ ಪಾಕ್ ಜೊತೆ ಸೇರಿಕೊಂಡು ಭಾರತ ವಿರುದ್ಧ ಸಂಚು ರೂಪಿಸುತ್ತಿರುವ ಟರ್ಕಿ ಅಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿ, ಭಾರತದ ಆಪ್ತ ಮಿತ್ರ ಇಸ್ರೇಲ್ ದೇಶದ ಪ್ರಧಾನಿಯನ್ನು ಭೇಟಿಯಾಗಲು ಅಮಿರ್ ಖಾನ್ ನಿರಾಕರಿಸಿದ ಕಾರಣ ನೆಟ್ಟಿಗರು ಅಮಿರ್ ಖಾನ್ ರವರ ಮೇಲೆ ಗರಂ ಆಗಿದ್ದಾರೆ.
ಇನ್ನು ಇಷ್ಟೆಲ್ಲಾ ವಿವಾ’ ದಗಳನ್ನು ಮೈಮೇಲೆ ಎಳೆದು ಕೊಂಡಿರುವ ಅಮೀರ್ ಖಾನ್ ಹಾಗೂ ಆಲಿಯಾ ಭಟ್ ರವರು ಇದೀಗ ಒಂದಾಗಿ ಫೋನ್ ಪೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ನೆಟ್ಟಿಗರು ಗರಂ ಆಗಿದ್ದು, ಅಮೀರ್ ಖಾನ್ ಹಾಗೂ ಆಲಿಯಾ ಭಟ್ ರವರ ಜಾಹೀರಾತನ್ನು ಈ ಕೂಡಲೇ ನಿಲ್ಲಿಸದೇ ಹೋದಲ್ಲಿ ಟಿಕ್ ಟಾಕ್, ಚೀನಾ ಅಪ್ಲಿಕೇಶನ್, ಸಡಕ್ 2 ಚಿತ್ರದ ಟ್ರೈಲರ್ ಗೆ ಬಂದ ಗತಿಯು ಫೋನ್ ಪೇ ಅಪ್ಲಿಕೇಶನ್ಗೆ ಬರಲಿದೆ. ಈ ಕೂಡಲೇ ಜಾಹೀರಾತು ನಿಲ್ಲಿ’ ಸಬೇಕು, ಇಲ್ಲವಾದಲ್ಲಿ ಸ್ವಜನ ಪಕ್ಷಪಾತ ಹಾಗೂ ರಾಷ್ಟ್ರೀ- ಯತಾ ವಿಚಾರದಲ್ಲಿ ಅಭಿಯಾನಗಳನ್ನು ನಡೆಸುವ ನೆಟ್ಟಿಗರು ಹೊಸ ಅಭಿಯಾನ ಆರಂಭಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕೆಲವರು, ಈ ಅಭಿಯಾನಗಳನ್ನು ಆರಂಭಿಸಿದ್ದಾರೆ. ಇನ್ನು ಅಭಿಯಾನಕ್ಕೆ ದೊಡ್ಡ ಸೆಲೆಬ್ರೆಟಿಗಳು ಕೂಡ ಕೈ ಜೋಡಿಸಿದ್ದು, ಕಂಗನಾ ರಾವತ್ ರವರ ಟೀಮ್ ಕೂಡ ಇದರಲ್ಲಿ ಪಾಲ್ಗೊಳ್ಳಲಿದೆ ಎಂಬುದು ತಿಳಿದುಬಂದಿದೆ.
Uninstall ever App they promote.
Boycott every product they advertise.
Report every Movie they are in.
They were silent when we cried for Justice for Sushant Singh.
Uninstall it fast Without any second thought.
— Prashant Patel Umrao (@ippatel) August 23, 2020
ಒಂದೆಡೆ ರಾಷ್ಟ್ರೀ ‘ ಯತಾ ವಿಚಾರವಾಗಿ ಚೀನಾ ಅಪ್ಲಿಕೇಶನ್ ಗಳಿಗೆ ಯಾವ ರೀತಿ ಪರಿಸ್ಥಿತಿಯ ತಂದರು ಎಂಬುದು ನಮಗೆಲ್ಲರಿಗೂ ತಿಳಿದಿದೆ, ಇನ್ನೊಂದು ಕಡೆ ಸುಶಾಂತ ಸಿಂಗ್ ಅವರು ಆಲಿಯಾ ಭಟ್ ರವರ ಹೊಸ ಚಿತ್ರದ ಟ್ರೈಲರ್ ಗೆ ಯಾವ ರೀತಿಯ ಪರಿಸ್ಥಿತಿ ತಂದರು ಎಂದು ಕೂಡ ನಿಮಗೆ ತಿಳಿದಿದೆ. ಒಂದು ವೇಳೆ ಸುಶಾಂತ ಸಿಂಗ್ ಫ್ಯಾನ್ಸ್ ರಾಷ್ಟ್ರೀ -ಯತಾ ವಿಚಾರದಲ್ಲಿ ಅಭಿಯಾನಗಳನ್ನು ಆರಂಭಿಸುವವರೂ ಒಂದಾದರೆ ಖಂಡಿತ ದೇಶದಲ್ಲಿ ಅತಿ ದೊಡ್ಡ ಅಭಿಯಾನ ಇದಾಗಲಿದೆ ಎಂಬುದು ಸಾಮಾಜಿಕ ಜಾಲತಾಣಗಳ ನೆಟ್ಟಿಗರ ಲೆಕ್ಕಾಚಾರವಾಗಿದೆ. ಇನ್ನು ಈ ಮಾತುಗಳು ಕೇಳಿ ಬರುತ್ತಿದ್ದಂತೆ ನೆಟ್ಟಿಗರು ಈ ಅಭಿಯಾನಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಕಾರಣ ಫೋನ್ ಪೇ ಸಂಸ್ಥೆಯು ಮುಂದೆ ಯಾವ ರೀತಿಯ ನಿರ್ಣಯವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.