ಮೋದಿ ಪ್ರಧಾನಿ ಕುರ್ಚಿಯ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ- ರಾಹುಲ್ ಗಾಂಧಿ ರವರನ್ನು ನಾಯಿ ಅಂದಿದ್ದು ಯಾಕೆ ಗೊತ್ತಾ??

ಮೋದಿ ಪ್ರಧಾನಿ ಕುರ್ಚಿಯ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ- ರಾಹುಲ್ ಗಾಂಧಿ ರವರನ್ನು ನಾಯಿ ಅಂದಿದ್ದು ಯಾಕೆ ಗೊತ್ತಾ??

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ವಿಶ್ವವೇ ಕಾದು ಕುಳಿತಿರುವ ಭಾರತದ 2019 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದೇ ಮೊಟ್ಟಮೊದಲ ಬಾರಿಗೆ ಇಡೀ ವಿಶ್ವದಲ್ಲಿ ಭಾರತದ ಲೋಕಸಭಾ ಚುನಾವಣೆಯು ಭಾರಿ ಸದ್ದು ಮಾಡುತ್ತಿದೆ, ಕಳೆದ 5 ವರ್ಷಗಳಿಂದ ತನ್ನನ್ನು ತಾನು ವಿಶ್ವ ಮಟ್ಟದಲ್ಲಿ ಭಾರಿ ಮನ್ನಣೆ ಯೊಂದಿಗೆ ಗುರುತಿಸಿಕೊಂಡಿರುವ ಭಾರತ ದೇಶದ ಮುಂದಿನ ಪ್ರಧಾನಿ ಯಾರು ಆಗುತ್ತಾರೆ ಎಂದು ವಿಶ್ವದ ದಿಗ್ಗಜ ನಾಯಕರು ಸಹ ಕಾದು ಕುಳಿತಿದ್ದಾರೆ. ಯಾರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ ಅದರಲ್ಲಿ ಮೋದಿ ಹಾಗೂ ರಾಹುಲ್ ರವರ ನಡುವೆ ಬಾಜಿ ಕಟ್ಟುವವರ ಸಂಖ್ಯೆಯು ಸಹ ಹೆಚ್ಚಾಗಿದೆ.

ಹೀಗಿರುವಾಗ ದೇಶದ ಮುಂದಿನ ಪ್ರಧಾನಿ ಯಾರು ಆಗಲಿದ್ದಾರೆ, ದೇಶವನ್ನು ಮುನ್ನಡೆಸುವ ಸಮರ್ಥ ನಾಯಕ ಯಾರು ಎಂಬುದರ ಕುರಿತು ದೇಶದ ಪ್ರತಿಷ್ಠ ಜ್ಯೋತಿಷಿ ಬೇಜಾನ್ ದಾರುವಾಲಾ ರವರು ಭವಿಷ್ಯ ನುಡಿದಿದ್ದಾರೆ. ಇದೀಗ ಇವರ ಭವಿಷ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಯಾರೂ ಊಹಿಸದ ರೀತಿಯಲ್ಲಿ ರಾಹುಲ್ ಗಾಂಧಿ ರವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ. ಅಷ್ಟಕ್ಕೂ ಅವರ ಭವಿಷ್ಯದ ಸಂಪೂರ್ಣ ವಿವರಗಳೇನು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಎಲ್ಲರೂ ಊಹಿಸಿದಂತೆ ನರೇಂದ್ರ ಮೋದಿ ರವರ ಕುರಿತು ಭವಿಷ್ಯವನ್ನು ನುಡಿದಿರುವ ಬೇಜಾನ್ ದಾರುವಾಲಾ ರವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಹುಲಿಯ ಗುಣಗಳಿದ್ದು ಅವರು ಮತ್ತೊಮ್ಮೆ ಭಾರತ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೇಜಾನ್ ದಾರುವಾಲಾ ರವರು ಹೇಳಿಕೆ ನೀಡಿದ್ದಾರೆ. ಮೋದಿ ರವರು ಅತ್ಯಂತ ಕುಶಾಗ್ರಮತಿ ಎಂದು ಕರೆದಿರುವ ಅವರು ನರೇಂದ್ರ ಮೋದಿರವರು ತುರ್ತು ಸಮಯದಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಸಮರ್ಥ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ವೇಳೆ ರಾಹುಲ್ ಗಾಂಧಿ ರವರ ಕುರಿತು ಹೇಳಿಕೆ ನೀಡಿರುವ ಬೇಜಾನ್ ದಾರುವಾಲಾ ರವರು ರಾಹುಲ್ ಗಾಂಧಿ ರವರಲ್ಲಿ ನಾಯಿಯ ಗುಣಗಳಿವೆ. ಅವರೊಬ್ಬರು ಉತ್ತಮ ನಾಯಕರು ಆಗಬಲ್ಲರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹುಲಿಯು ಯಾವಾಗಲೂ ನಾಯಿಗಿಂತ ಬಲಿಷ್ಠ ವಾಗಿರುತ್ತದೆ ಹೀಗಾಗಿ ಈ ಬಾರಿ ನರೇಂದ್ರ ಮೋದಿ ರವರೆ ಮತ್ತೊಮ್ಮೆ ಪ್ರಧಾನಿ ಕುರ್ಚಿಯನ್ನು ಅಲಂಕರಿಸಲಿದ್ದಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಭವಿಷ್ಯ ಗಳಿಗೂ ಉತ್ತರ ಮೇ 23ರಂದು ಸಿಗಲಿದ್ದು ಇಡೀ ದೇಶವೇ ಫಲಿತಾಂಶಕ್ಕಾಗಿ ಕಾದು ಕುಳಿತಿದೆ. ಚುನಾವಣೆಯ ಫಲಿತಾಂಶದ ಕುರಿತು ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.