ಭಿಕ್ಷೆ ಬೇಡುತ್ತಿದ್ದ ಮಾಜಿ ಯೋಧನ ಕಂಡು ಗಂಭೀರ್ ಮಾಡಿದ್ದೇನು ಗೊತ್ತಾ??

ಭಿಕ್ಷೆ ಬೇಡುತ್ತಿದ್ದ ಮಾಜಿ ಯೋಧನ ಕಂಡು ಗಂಭೀರ್ ಮಾಡಿದ್ದೇನು ಗೊತ್ತಾ??

ಅವರು ಭಾರತೀಯ ಸೇನಾ ಪಡೆಯ ಹೆಮ್ಮೆಯ ಯೋಧ 1965 ಹಾಗೂ 1971 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಭಾರತದ ಗೆಲುವಿನಲ್ಲಿ ಪಾತ್ರ ವಹಿಸಿದ್ದರು. ಆದರೆ ದುರದೃಷ್ಟವಶಾತ್ ಕೆಲವು ತಾಂತ್ರಿಕ ಕಾರಣಗಳಿಂದ ಯೋಧರಿಗೆ ನಿವೃತ್ತಿಯ ನಂತರ ಸಿಗಬೇಕಾದ ಯಾವುದೇ ನಿವೃತ್ತಿ ಸವಲತ್ತುಗಳು ಸಿಗದೇ ಹೋಯಿತು.

https://www.facebook.com/officialkarunaadavaani/

ಅದೆಷ್ಟು ಬಾರಿ ರಕ್ಷಣಾ ಸಚಿವ ಇಲಾಖೆಯ ಬಾಗಿಲು ಬಡಿದರು ಅಗತ್ಯ ನೆರವು ದೊರಕಲಿಲ್ಲ ಬೇರೆ ವಿಧಿಯಿಲ್ಲದೆ ಬೇರೆ ಕೆಲಸಕ್ಕೆ ಹೋಗ ಲಾರದೆ ಈ ಮಾಜಿ ಯೋಧರು ಭಿಕ್ಷೆ ಬೇಡಲು ಆರಂಭಿಸಿದ್ದಾರೆ. ಕೈಯಲ್ಲಿ ತಾವು ಮಾಡಿದ ಸಾಧನೆಯನ್ನು ಅಂದರೆ ನಾನು ಒಬ್ಬ ಯೋಧ 1965 ಹಾಗೂ 1971 ರಲ್ಲಿ ಪಾಕಿಸ್ತಾನದ ವಿರುದ್ಧ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಎಂದು ಹಿಡಿದುಕೊಂಡು ದೆಹಲಿಯ ಬೀದಿಯಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಾರೆ.

ಯೋಧರ ಹೆಸರು ಪಿತಾಂಬರ, ಶನಿವಾರ ಇದೇ ರೀತಿ ತಮ್ಮ ಬದುಕು ಸಾಗಿಸಲು ಭಿಕ್ಷೆ ಬಿಡುತ್ತಿರುವ ಸಂದರ್ಭದಲ್ಲಿ ಜನರು ಐದು ರೂಪಾಯಿ ಹಾಗೂ ಹತ್ತು ರೂಪಾಯಿ ನೋಟುಗಳನ್ನು ಇವರ ಕೈಗೆ ಇಟ್ಟು ಮುಂದೆ ಸಾಗುತ್ತಿದ್ದರು ಆದರೆ ದೇವರು ಬಂದಂತೆ ಅದೇ ಮಾರ್ಗದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರ ಗಮನ ಈ ಕಡೆ ಸೆಳೆಯಿತು.

ತಾವು ದುಡಿದ ಆ ಐಪಿಎಲ್ ಹಣದಿಂದ ಹಲವಾರು ಸೈನಿಕರಿಗೆ ನೆರವಾಗಿರುವ ಗೌತಮ್ ಗಂಭಿರ್ ರವರು ಮೊದಲಿನಿಂದಲೂ ಸೈನಿಕರಿಗೆ ಹಾಗೂ ಬಡವರಿಗೆ ತಮ್ಮ ಸಾಮರ್ಥ್ಯಕ್ಕೆ ಮೀರಿದಷ್ಟು ಸಹಾಯ ಮಾಡುತ್ತಾ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೆಷ್ಟು ಸೈನಿಕ ಕುಟುಂಬಗಳಿಗೆ ನೆರವಾಗಿರುವ ಇವರು ಇಂದೂ ಸಹ ದೆಹಲಿಯಲ್ಲಿ ತಮ್ಮ ಸ್ವಂತ ಹಣದಿಂದ ಬಡವರಿಗೆ ಮೂರು ಹೊತ್ತಿನ ಊಟ ಉಣ ಬಡಿಸುತ್ತಾರೆ.

ಸದಾ ದೇಶಭಕ್ತರಾಗಿ, ದೇಶವನ್ನು ಕಾಯುವ ಸೈನಿಕರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಇವರ ಕಣ್ಣಿಗೆ ಭಿಕ್ಷೆ ಬೇಡುತ್ತಿದ್ದ ಪಿತಾಂಬರ  ರವರು ಕಾಣಸಿಗುತ್ತಾರೆ. ಹಣ ನೀಡಿ ಇವರ ಸಹಾಯಕ್ಕೆ ಧಾವಿಸುವುದು ಗೌತಮ್ ಗಂಭಿರ್ ರವರಿಗೆ ಎರಡು ನಿಮಿಷಗಳ ಕೆಲಸವಾಗಿತ್ತು. ಆದರೆ ತಾವು ನೀಡಿದ ಹಣ ಎಷ್ಟು ದಿವಸ ಇವರನ್ನು ಪೋಷಿಸುತ್ತದೆ ಎಂಬುದನ್ನು ಯೋಚಿಸಿದ ಗಂಭೀರ್ ರವರು ತಾವು ನೋಡಿದ ತಕ್ಷಣವೇ ಅವರ ಬಳಿ ಹೋಗಿ  ಅವರ ಹಿನ್ನೆಲೆ ಹಾಗೂ ಸಮಸ್ಯೆ ಏನೆಂಬುದನ್ನು ವಿವರವಾಗಿ ಕೇಳಿ ತಿಳಿದುಕೊಳ್ಳುತ್ತಾರೆ.

ಬಳಿಕ ಭಿಕ್ಷೆ ಬೇಡುತ್ತಿದ್ದ ಯೋಧನ ಭಾವ ಚಿತ್ರವನ್ನು ಸೆರೆಹಿಡಿದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಕ್ಷಣಾ ಸಚಿವಾಲಯಕ್ಕೆ ವಿಷಯವನ್ನು ಮುಟ್ಟಿಸುತ್ತಾರೆ.ಟ್ವಿಟರ್ ನಲ್ಲಿ ಸಾಮಾನ್ಯವಾಗಿ ತಕ್ಷಣವೇ ಎಲ್ಲಾ ಕಾರ್ಯಗಳಿಗೂ ಸ್ಪಂದಿಸುವ ರಕ್ಷಣಾ ಸಚಿವಾಲಯ, ಗೌತಮ್ ಗಂಭೀರ್ ರವರ ಒಂದೇ ಒಂದು ಪ್ರೀತಿಯಿಂದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ಮಾಜಿ ಯೋಧರ ನಂಬರ್ ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಗಂಭೀರ್ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ವ್ಯಕ್ತವಾಗಿದೆ.

ಇನ್ನು ಈ ಮೂಲಕ ಗಂಭೀರ್ ಅವರು ಮತ್ತೊಮ್ಮೆ ತಮಗಿರುವ ಸಾಮಾಜಿಕ ಕಳಕಳಿಯನ್ನು ಸಾರಿದ್ದಾರೆ. ಕ್ರಿಕೆಟ್ ನಲ್ಲಿ ಭಾರತದ ಹಿರಿಮೆ ಹೆಚ್ಚಿಸಿರುವ ಗೌತಮ್ ಗಂಭೀರ್ ಅವರು ಈ ಹಿಂದೆಯೂ ಹಲವಾರು ಬಾರಿ ಸೈನಿಕರ ನೆರವಿಗೆ ಧಾವಿಸಿದ್ದಾರೆ.  ಇವರ ಸಮಾಜ ಸೇವೆ ಹೀಗೆ ಮುಂದುವರಿಯಲಿ ಹಾಗೂ  ಇದರಿಂದ ಮತ್ತಷ್ಟು ಜನರಿಗೆ ಉಪಯೋಗವಾಗಲಿ ಎಂದು ಆಶಿಸುತ್ತೇವೆ..