Kannada News: ಧಾರವಾಹಿ ನೋಡಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಮಾಡಿದ ಮಾಸ್ಟರ್ ಪ್ಲಾನ್ ಕಂಡು ಪೊಲೀಸರಿಂದ ದಂಗಾಗಿದ್ದು ಯಾಕೆ ಗೊತ್ತಾ?? ಸುಂದರಿ ಮಾಡಿದ್ದೇನು ಗೊತ್ತೆ?

ಧಾರವಾಹಿ ನೋಡಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಮಾಡಿದ ಮಾಸ್ಟರ್ ಪ್ಲಾನ್ ಕಂಡು ಪೊಲೀಸರಿಂದ ದಂಗಾಗಿದ್ದು ಯಾಕೆ ಗೊತ್ತಾ?? ಸುಂದರಿ ಮಾಡಿದ್ದೇನು ಗೊತ್ತೆ?

Kannada News: ನಮಸ್ಕಾರ ಸ್ನೇಹಿತರೇ, ಪ್ರೀತಿ ಎಂದ ತಕ್ಷಣ ಯುವ ಜನತೆಯಲ್ಲಿ ಇಲ್ಲಸಲ್ಲದ ಆಲೋಚನೆಗಳು ಮೂಡುತ್ತವೆ. ಜೀವನದಲ್ಲಿ ಪ್ರೀತಿ ಮುಖ್ಯ ಎಂಬುವುದರಲ್ಲಿ ಎರಡು ಮಾತಿಲ್ಲ, ಆದರೆ ನೀವು ಪ್ರೀತಿಗಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಮುಂದಿನ ಜೀವನವನ್ನು ನಾಶ ಮಾಡಬಹುದು ಎಂಬುದನ್ನು ಮರೆತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಒಂದು ಕಡೆ ಸಂಗಾತಿಯ ಆಯ್ಕೆಯಲ್ಲಿ ನೀವು ಹೆಚ್ಚು ಕಾಳಜಿ ವಹಿಸಬೇಕು ಅದೇ ರೀತಿ ಸಂಗಾತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರಲ್ಲಿ ಕುರಿತು ಕೂಡ ನೀವು ಸಾಕಷ್ಟು ಆಲೋಚನೆ ಮಾಡಬೇಕು. ಇದನ್ನು ಓದಿ: 15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??

ಹೌದು ಸ್ನೇಹಿತರೇ ನಾವು ಇದೀಗ ಹೇಳಲು ಹೊರಟಿರುವ ನೈಜ ಘಟನೆಯಲ್ಲಿ ಜ್ಯೋತಿ ಹಾಗೂ ಕೃಷ್ಣ ಎಂಬ ಜೋಡಿಗಳು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿರುತ್ತಾರೆ. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಮದುವೆ ಮಾಡುವ ನಿರ್ಧಾರ ಮಾಡಿಕೊಳ್ಳುತ್ತಾರೆ. ಆದರೆ ಪೋಷಕರಿಗೆ ಈ ವಿಷಯ ತಿಳಿಸುವ ಧೈರ್ಯ ಅವರಿಗೆ ಇರಲಿಲ್ಲ, ಆದ ಕಾರಣ ಮನೆ ಬಿಟ್ಟು ಓಡಿ ಹೋಗೋಣ ಎಂಬ ಆಲೋಚನೆ ಮಾಡುತ್ತಾರೆ.

ಆದರೆ ಮನೆ ಬಿಟ್ಟು ಹೋದರೆ ಪೋಷಕರು ಮತ್ತೆ ನಮ್ಮನ್ನು ಹುಡುಕುತ್ತಾರೆ, ಒಂದು ವೇಳೆ ಸಿಕ್ಕಿ ಬಿದ್ದರೆ ಮತ್ತೆ ಮನೆಗೆ ವಾಪಸ್ಸು ಕರೆದುಕೊಂಡು ಹೋಗುತ್ತಾರೆ ಎಂಬ ಆಲೋಚನೆ ಮಾಡಿ ಜ್ಯೋತಿ ಧಾರವಾಹಿಗಳನ್ನು ನೋಡಿ ಅದರಿಂದ ಒಂದು ಹೊಸ ಪ್ಲಾನ್ ರೂಪಿಸುತ್ತಾಳೆ. ಹೌದು ಸ್ನೇಹಿತರೇ, ಧಾರವಾಹಿ ನೋಡಿದ ಜ್ಯೋತಿಯು ತನ್ನಂತೆಯೇ ಎತ್ತರ ಹಾಗೂ ಅಳತೆ ಇರುವ ಹುಡುಗಿಯನ್ನು ಗುರುತಿಸುತ್ತಾಳೆ, ಆ ಹುಡುಗಿ ಅದೇ ಕಾಲೇಜಿನಲ್ಲಿ ಓದುವ ಕಾರಣ ಇವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಇದನ್ನೇ ಬಳಸಿಕೊಂಡ ಜ್ಯೋತಿ ಸಿಮ್ರಾನ್ ಎಂಬ ಹುಡುಗಿಯನ್ನು ನಿನ್ನನ್ನು ಭೇಟಿ ಮಾಡಬೇಕು ಎಂದು ಬೇರೆ ಪ್ರದೇಶಕ್ಕೆ ಕರೆಸಿಕೊಳ್ಳುತ್ತಾಳೆ.

ಅಲ್ಲಿ ಬಂದ ಸಿಮ್ರಾನ್ ಗೆ ಬಹಳ ಹೊತ್ತು ಮಾತನಾಡಿದ ನಂತರ ಕೂಲ್ ಡ್ರಿಂಕ್ಸ್ ಕೊಡುವ ನೆಪದಲ್ಲಿ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿ ಕೊಡುತ್ತಾಳೆ. ಆಗ ಜ್ಯೋತಿಯನ್ನು ಪ್ರೀತಿ ಮಾಡಿದ್ದ ಕೃಷ್ಣ ಅಲ್ಲಿಗೆ ಬರುತ್ತಾನೆ. ಇಬ್ಬರು ಸೇರೀ ಆಕೆಯ ಮುಖವನ್ನು ಗುರುತು ಸಿಗದಂತೆ ಮಾಡಿ, ಆಕೆಯ ಜೀವವನ್ನು ತೆಗೆದುಬಿಡುತ್ತಾರೆ. ಜ್ಯೋತಿ ಬಟ್ಟೆಯನ್ನು ಸಿಮ್ರಾನ್ ಗೆ ಹಾಕಿ ಅವಳ ಐಡಿ ಕಾರ್ಡ್ ಉಂಗುರದಂತಹ ಗುರುತು ವಸ್ತುಗಳನ್ನು ಸಿಮ್ರಾನ್ ದೇಹಕ್ಕೆ ಹಾಕುತ್ತಾಳೆ. ಹಾಗೂ ಸಿಮ್ರಾನ್ ವಸ್ತುಗಳನ್ನು ತಾನು ತೆಗೆದುಕೊಂಡು ಜ್ಯೋತಿ ಹಾಗೂ ಕೃಷ್ಣ ಇಬ್ಬರು ಊರು ಬಿಟ್ಟು ಹೋಗುತ್ತಾರೆ. ಇದನ್ನು ಓದಿ: Kannada News: ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.

ಜ್ಯೋತಿ ಕಾಣದೇ ಕಂಗಲಾದ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು ಸಿಮ್ರಾನ್ ದೇಹವನ್ನು ನೋಡಿ ಅಲ್ಲಿ ಇದ್ದ ಐಡಿ ಕಾರ್ಡ್ಗಳನ್ನು ಗಮನಿಸಿದ ಬಳಿಕ ಇದು ಜ್ಯೋತಿ ಇರಬಹುದು ಎಂದು ಪೋಷಕರಿಗೆ ಕರೆ ಮಾಡುತ್ತಾರೆ. ಅಲ್ಲಿಗೆ ಬಂದ ಪೋಷಕರು ದುಃಖದಲ್ಲಿ ವಸ್ತುಗಳನ್ನು ನೋಡಿ ಸೂಕ್ಷ್ಮವಾಗಿ ಗಮನಿಸದೆ ತನ್ನ ಮಗಳು ಜ್ಯೋತಿಯೆಂದು ಒಪ್ಪಿಕೊಳ್ಳುತ್ತಾರೆ, ಜ್ಯೋತಿ ಎಂಬ ಹೆಸರಿನಲ್ಲಿ ಸಿಮ್ರಾನ್ ಹುಡುಗಿಯ ಅಂತ್ಯ ಸಂಸ್ಕಾರ ನಡೆಯುತ್ತದೆ.

ಮತ್ತೊಂದು ಕಡೆ ಸಿಮ್ರಾನ್ ಮನೆಯವರು ಕೂಡ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರ ನೀಡುತ್ತಾರೆ, ಈ ಪ್ರಕರಣವನ್ನು ಕೆದಕಲು ಆರಂಭಿಸಿದಾಗ ಸಿಮ್ರಾನ್ ಗೆ ಬಂದಿರುವ ಕರೆಗಳು ಹಾಗೂ ಅವಳು ಓಡಾಟ ಮಾಡಿದ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ, ಪೋಲಿಸ್ ರೆಕಾರ್ಡ್ ನಲ್ಲಿ ಇರುವ ಜ್ಯೋತಿ ದೇಹ ಎಂದುಕೊಂಡು ತೆಗೆದಿರುವ ಫೋಟೋಗಳನ್ನು ತೋರಿಸಿದಾಗ ಕತ್ತಿನ ಭಾಗದಲ್ಲಿ ಇದ್ದ ಮಚ್ಚೆ ಹಾಗೂ ದೇಹದ ಇನ್ನಿತರ ಭಾಗಗಳನ್ನು ಗಮನಿಸಿ ಇದು ಜ್ಯೋತಿಯಲ್ಲ ಸಿಮ್ರಾನ್ ಎಂದು ತಿಳಿದು ಬರುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿ, ಜ್ಯೋತಿ ಹಾಗೂ ಕೃಷ್ಣ ರನ್ನು ಹುಡುಕಲು ಆರಂಭಿಸುತ್ತಾರೆ. ಬರೋಬ್ಬರಿ ಐದು ವರ್ಷಗಳ ಬಳಿಕ ಈ ಜೋಡಿಗಳು ಸಿಕ್ಕಿಬಿದ್ದಿದ್ದು, ಇದೀಗ ಇವರಿಬ್ಬರಿಗೂ ಶಿಕ್ಷೆ ಘೋಷಣೆಯಾಗಿದೆ. ಇದನ್ನು ಓದಿ: ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?