Kannada News: ಅದಾನಿ ಷೇರು ಮತ್ತೆ ಮೇಲಕ್ಕೆ ಹೋಗುವುದು ಖಚಿತವೇ? ಮಹತ್ವದ ದೊಡ್ಡ ಹೆಜ್ಜೆ ಇತ್ತ ಅದಾನಿ. ಏನು ಗೊತ್ತೇ??

Kannada News: ಅದಾನಿ ಷೇರು ಮತ್ತೆ ಮೇಲಕ್ಕೆ ಹೋಗುವುದು ಖಚಿತವೇ? ಮಹತ್ವದ ದೊಡ್ಡ ಹೆಜ್ಜೆ ಇತ್ತ ಅದಾನಿ. ಏನು ಗೊತ್ತೇ??

Kannada News: ಅದಾನಿ ಸಂಸ್ಥೆಗೆ ಈಗಾಗಲೇ ಏನೆಲ್ಲಾ ನಡೆದಿದೆ, ಅವರಿಗೆ ಎಷ್ಟೆಲ್ಲಾ ಹಣ ನಷ್ಟವಾಗಿದೆ ಎಂದು ನಮಗೆಲ್ಲ ಗೊತ್ತಿದೆ. ಇದೀಗ ಅದಾನಿ ಕಂಪನಿ ಬಗ್ಗೆ ಮತ್ತೊಂದು ಹೊಸ ವಿಚಾರ ಹರಿದಾಡುತ್ತಿದೆ. 2023ರ ಮಾರ್ಚ್ ತಿಂಗಳು ಮುಗಿಯುವುದಕ್ಕಿಂತ ಮೊದಲು, ₹6,500 ಕೋಟಿ ರೂಪಾಯಿ ಸಾಲವನ್ನು ಅದರ ಸಮಯಕ್ಕಿಂತ ಮೊದಲೇ ಪಾವತಿ ಮಾಡಿಬಿಡಬೇಕು ಎಂದು ಅದಾನಿ ಸಂಸ್ಥೆ ನಿರ್ಧಾರ ಮಾಡಿದೆ. ಈ ರೀತಿ ಮಾಡುವುದರಿಂದ ಅವರ ಸಂಸ್ಥೆಯ ಹೂಡಿಕೆದಾರರ ವಿಶ್ವಾಸ ಹೆಚ್ಚಾಗುತ್ತದೆ ಎಂದು ನಂಬಿಕೆ ಇದೆ.

ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು ತಮ್ಮ ಎಲ್ಲ ಬ್ರ್ಯಾಂಡ್ ಗಳಿಗೂ ರೀಫೈನಾನ್ಸ್ ಮಾಡಬೇಕು ಎಂದು ನಿರ್ಧಾರ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹಾಂಕಾಂಗ್ ನಲ್ಲಿ ಅದಾನಿ ಸಂಸ್ಥೆಯು ತಮ್ಮ ಸಮೂಹದ ಆಡಳಿತ ಮಂಡಳಿಯ ಜೊತೆಗೆ ಸಭೆಯನ್ನು ನಡೆಸಿದ್ದು, ಆ ಸಭೆಯಲ್ಲಿ ಈ ವಿಚಾರದ ಬಗ್ಯೆ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಂಪನಿಯ ಕಡೆಯಿಂದ ಈ ವಿಚಾರಗಳ ಬಗ್ಗೆ ಇನ್ನೂ ಅಧಿಕೃತವಾದ ಮಾಹಿತಿಗಳು ಸಿಕ್ಕಿಲ್ಲ. ಇದನ್ನು ಓದಿ..Kannada News: ಅಸಲಿಗೆ ಬಿಜೆಪಿ ಸೇರಿಕೊಳ್ಳಬೇಕು ಎಂದುಕೊಂಡಿದ್ದ ಅನಂತ್ ನಾಗ್, ಕೊನೆ ಕ್ಷಣದಲ್ಲಿ ಗೈರಾಗಿದ್ದು ಯಾಕೆ ಗೊತ್ತೇ?ಅಸಲಿ ಕಾರಣ ಏನು ಗೊತ್ತೇ?

ಈ ವರ್ಷ ಜನವರಿ 24ರ ದಿನ ಹಿಂಡನ್ ಬರ್ಗ್ ಸಂಸ್ಥೆ ಮಾಡಿದ ಅದೊಂದು ನ್ಯೂಸ್ ಇಂದಾಗಿ, ಅದಾನಿ ಕಂಪನಿಗೆ ಬರೋಬರಿ ₹12ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಇದೀಗ ಅದಾನಿ ಸಂಸ್ಥೆ ಸಮಯಕ್ಕಿಂತ ಮೊದಲೇ ಸಾಲವನ್ನು ಪಾವತಿ ಮಾಡುವುದಾಗಿ ನಿರ್ಧಾರ ಮಾಡಿರುವ ವಿಚಾರ ಬೆಳಕಿಗೆ ಬಂದ ನಂತರ, ಶೇರ್ ಮಾರ್ಕೆಟ್ ನಲ್ಲಿ ಅದಾನಿ ಅವರ 8 ಸಂಸ್ಥೆಗಳ ಶೇರ್ ಗಳಲ್ಲಿ ಚೇತರಿಕೆ ಕಂಡುಬಂದಿದೆ. ಅದಾನಿ ಎಂಟರ್ಪ್ರೈಸಸ್ ನ ಶೇರ್ ಗಳಲ್ಲಿ 14.90% ಏಳಿಗೆ ಕಂಡುಬಂದಿದೆ. ಇದನ್ನು ಓದಿ..Kannada News: ತಾರಕರತ್ನ ಹೆಂಡತಿಗಾಗಿ ಗಟ್ಟಿ ನಿರ್ಧಾರ ಮಾಡಿದ ಎನ್ಟಿಆರ್ ಪತ್ನಿ ಪ್ರಣತಿ: ತೆಗೆದುಕೊಂಡ ನಿರ್ಧಾರವೇನು ಗೊತ್ತೇ??