Kannada News: ಅಂದು ದಲಿತರಿಗೆ ಮುಸ್ಲಿಂ ಹುದ್ದೆ ಎಂದು ಹೇಳಿದ್ದ ಕುಮಾರಣ್ಣ, ಇಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ? ಯಾರಿಗೆ ಅಂತೇ ಗೊತ್ತೇ DCM ಹುದ್ದೆ??

Kannada News: ಅಂದು ದಲಿತರಿಗೆ ಮುಸ್ಲಿಂ ಹುದ್ದೆ ಎಂದು ಹೇಳಿದ್ದ ಕುಮಾರಣ್ಣ, ಇಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ? ಯಾರಿಗೆ ಅಂತೇ ಗೊತ್ತೇ DCM ಹುದ್ದೆ??

Kannada News: ರಾಜ್ಯದಲ್ಲಿ ಎಲೆಕ್ಷನ್ ಹತ್ತಿರ ಬರುತ್ತಿದ್ದ ಹಾಗೆಯೇ ಮತದಾರರನ್ನು ಸೆಳೆಯಲು ಬಹಳ ತಂತ್ರಗಳನ್ನು ಹಾಕಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂದು ಕೂಡ ನಾಯಕರು ಹಂಚಿಕೊಳ್ಳುತ್ತಿದ್ದಾರೆ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು ನೋಡಿದರೆ, ಜೆಡಿಎಸ್ (JDS) ಪಕ್ಷ ಕಷ್ಟದಲ್ಲಿದೆ, ಮಂಡ್ಯದಲ್ಲಿ ಮತ್ತು ರಾಜ್ಯದ ಬೇರೆ ಕಡೆಗಳಲ್ಲಿ ಜೆಡಿಎಸ್ ಪಕ್ಷದವರು ಬೇರೆಯದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಇಂತಹ ಸಾಕಷ್ಟು ಬೆಳವಣಿಗೆಗಳು ಬೆಳಕಿಗೆ ಬರುತ್ತಿದೆ. ಇದೆಲ್ಲವು ಒಂದು ಕಡೆ ನಡೆಯುತ್ತಿರುವಾಗ ಜೆಡಿಎಸ್ ನಾಯಕ ರಾಜ್ಯದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ಕೆಲ ದಿನಗಳ ಹಿಂದೆ ದಲಿತರಿಗೆ ಡಿಸಿಎಂ ಹುದ್ದೆ ನೀಡುವುದಾಗಿ ಹೇಳಿಕೆ ನೀಡಿದ್ದರು, ಇದೀಗ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಇತ್ತೀಚೆಗೆ ನೀಡಿರುವ ಮತ್ತೊಂದು ಹೇಳಿಕೆಯಲ್ಲಿ ತಮ್ಮ ಪಕ್ಷ ಆಡಳಿತಕ್ಕೆ ಬಂದರೆ ಡಿಸಿಎಂ ಹುದ್ದೆಯನ್ನು ಕುರುಬರಿಗೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Kannada News: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆ ಬ್ರೇಕ್ ಹಾಕಲು, ಖ್ಯಾತ ನಟಿಯನ್ನು ಕರೆತಂದ ಸಿದ್ದು. ಅಖಾಡಕ್ಕೆ ಇಳಿಯುತ್ತಿರುವುದು ಯಾರು ಗೊತ್ತೇ??

ಈ ಮಾತಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರತಿಕ್ರಿಯೆ ನೀಡಿದ್ದು, “ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಮತ್ತು ಅವರ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ, ಕುರುಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಅದು ನಮಗೂ ತುಂಬಾ ಸಂತೋಷ” ಎಂದು ಹೇಳಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಬಗ್ಗೆ ಕೂಡ ಪ್ರಶ್ನೆ ಕೇಳಲಾಯಿತು, ಅದಕ್ಕೂ ಉತ್ತರಿಸಿ, “ಪ್ರಧಾನಿಯವರು ಕರ್ನಾಟಕಕ್ಕೆ ಬಂದು ಹೋಗಲಿ ಬಿಡಿ.. ಅವರು ಬರೋದು ಬೇಡ ಅಂತ ಹೇಳೋಕೆ ಆಗುತ್ತಾ?” ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ, ಅಮಿತ್ ಶಾ, ಮಾಸ್ಟರ್ ಮೈಂಡ್ ಕೆಲಸ ಆರಂಭ. ಟಾರ್ಗೆಟ್ ಏನು ಅಂತೇ ಗೊತ್ತೇ??