Cricket News: ಪಂದ್ಯ ಗೆಲ್ಲಿಸಿದ ಜಡೇಜಾ ಬಿಗ್ ಶಾಕ್ ಕೊಟ್ಟ ಐಸಿಸಿ: ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಜಡೇಜಾ ಗೆ ಐಸಿಸಿ ಮಾಡಿದ್ದೇನು ಗೊತ್ತೇ??

Cricket News: ಪಂದ್ಯ ಗೆಲ್ಲಿಸಿದ ಜಡೇಜಾ ಬಿಗ್ ಶಾಕ್ ಕೊಟ್ಟ ಐಸಿಸಿ: ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಜಡೇಜಾ ಗೆ ಐಸಿಸಿ ಮಾಡಿದ್ದೇನು ಗೊತ್ತೇ??

Cricket News: ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) 4 ಟೆಸ್ಟ್ ಪಂದ್ಯಗಳ ಸೀರೀಸ್ ನ ಮೊದಲ ಪಂದ್ಯದಲ್ಲಿ ಭಾರತ ತಂಡ ಮುನ್ನಡೆ ಸಾಧಿಸಿದೆ. 132 ರನ್ಸ್ ಅಂತರದಲ್ಲಿ ಗೆದ್ದಿರುವ ಭಾರತ ತಂಡ, 1-0 ಪಾಯಿಂಟ್ಸ್ ನಲ್ಲಿ ಮುನ್ನಡೆಯಲ್ಲಿದೆ. ಪಂದ್ಯ ಗೆದ್ದ ಖುಷಿಯಲ್ಲಿದ್ದರು ಸಹ, ಭಾರತ ತಂಡಕ್ಕೆ ಅದರಲ್ಲೂ ಒಬ್ಬ ಆಟಗಾರನಿಗೆ ಐಸಿಸಿ ದೊಡ್ಡ ಶಾಕ್ ನೀಡಿದೆ. ಪಂದ್ಯ ಗೆಲ್ಲಲು ಮುಖ್ಯ ಕಾರಣ ಆಗಿರುವ ರವೀಂದ್ರ ಜಡೇಜಾ (Ravindra Jadeja) ಅವರಿಗೆ ದಂಡ ವಿಧಿಸಿದೆ. ಅಷ್ಟಕ್ಕೂ ನಡೆದಿದ್ದೇನು? ಈ ವಿವಾದ ಆಗಿದ್ದೇಕೆ? ತಿಳಿಸುತ್ತೇವೆ ನೋಡಿ..

ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೊದಲ ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ಜಡೇಜಾ ಅವರು ಬೌಲಿಂಗ್ ಮಾಡುವಾಗ, ಮೊಹಮ್ಮದ್ ಸಿರಾಜ್ (Mohammad Siraj) ಅವರ ಬಳಿ ಹೋಗಿ ತಮ್ಮ ಕೈಗೆ ಏನನ್ನೋ ಉಜ್ಜಿಕೊಂಡರು. ಈ ಘಟನೆ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು. ಇದನ್ನೇ ಇಟ್ಟುಕೊಂಡು ಆಸ್ಟ್ರೇಲಿಯಾ ಮೀಡಿಯಾದವರು ರವೀಂದ್ರ ಜಡೇಜಾ ಅವರ ಮೇಲೆ ಆರೋಪ ಮಾಡಿದರು. ಬಳಿಕ ಐಸಿಸಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma), ರವೀಂದ್ರ ಜಡೇಜಾ, ಹಾಗೂ ನಿತಿನ್ ಮೆನನ್ (Nitin Menon), ರಿಚರ್ಡ್ ಲಿಂಗ್ ವರ್ತ್ (Richard Illingworth), ಮೂರನೇ ಅಂಪೈರ್ ಮೈಕಲ್ ಗೋಫ್ ಮತ್ತು ನಾಲ್ಕನೇ ಅಂಪೈರ್ ಕೆ.ಎನ್ ಅನಂತಪದ್ಮನಾಭನ್ (K N Ananthapadmanabhan) ಇವರು ಕೂಡ ರವೀಂದ್ರ ಜಡೇಜಾ ಅವರ ವಿರುದ್ಧ ಆರೋಪ ಮಾಡಿದ್ದರು.. ಇದನ್ನು ಓದಿ..Cricket News: ಜಡೇಜಾರವರ ಮೇಲೆ ಮುಗಿ ಬಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಾರಿ ಮುಜುಗರ; ಉಲ್ಟಾ ಹೊಡೆದ ಆಸ್ಟ್ರೇಲಿಯಾ ಮಾಜಿ ನಾಯಕ ಕ್ಲಾರ್ಕ್ ಹೇಳಿದ್ದೇನು ಗೊತ್ತೇ?

ಆದರೆ ರವೀಂದ್ರ ಜಡೇಜಾ ಅವರು ಮತ್ತು ಮ್ಯಾಚ್ ನ ರೆಫ್ರಿ ಆಗಿದ್ದ ಆಂಡಿ ಪ್ರಿಕ್ರಾಫ್ಟ್ ಅವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ರವೀಂದ್ರ ಜಡೇಜಾ ಅವರು ಲೆವೆಲ್ 1ನ, 2.20 ನಿಯಮದ ಉಲ್ಲಂಘನೆ ಮಾಡಿರುವುದರಿಂದ ಅವರಿಗೆ ಐಸಿಸಿ (ICC) ದಂಡ ವಿಧಿಸಿದೆ. ಪಂದ್ಯಕ್ಕೆ ಖರ್ಚಾದ 25% ಶುಲ್ಕವನ್ನು ರವೀಂದ್ರ ಜಡೇಜಾ ಅವರು ಭರಿಸಬೇಕು ಎಂದು ಶಿಕ್ಷೆ ನೀಡಿದ್ದು, ರವೀಂದ್ರ ಜಡೇಜಾ ಅವರು ಒಪ್ಪಿಕೊಂಡಿದ್ದಾರೆ. ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಮೊದಲ ಇನ್ನಿಂಗ್ಸ್ ನಲ್ಲಿ 22 ಓವರ್ ಬೌಲಿಂಗ್ ಮಾಡಿ, 47 ರನ್ಸ್ ಕೊಟ್ಟು 5 ವಿಕೆಟ್ಸ್ ಪಡೆದರು, ಬ್ಯಾಟಿಂಗ್ ನಲ್ಲಿ 142 ಎಸೆತಗಳಲ್ಲಿ 75 ರನ್ಸ್ ಗಳಿಸಿದರು, ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ಸ್ ಪಡೆದರು. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ, ರವೀಂದ್ರ ಜಡೇಜಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಂದಿದೆ. ಇದನ್ನು ಓದಿ..Kannada News: ಜಮ್ಮು ಹಾಗೂ ಕಾಶ್ಮೀರದಲ್ಲಿ ಲಿಥಿಯಂ ಸಿಕ್ಕಿರಿವುದು ಅದೆಷ್ಟು ಗೊತ್ತು? ಇದರಿಂದ ದೇಶಕ್ಕೆ ಹಾಗೂ ಸ್ಥಳೀಯರಿಗೆ ಏನು ಲಾಭ ಗೊತ್ತೇ??