Cricket News: ಜಡೇಜಾರವರ ಮೇಲೆ ಮುಗಿ ಬಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಾರಿ ಮುಜುಗರ; ಉಲ್ಟಾ ಹೊಡೆದ ಆಸ್ಟ್ರೇಲಿಯಾ ಮಾಜಿ ನಾಯಕ ಕ್ಲಾರ್ಕ್ ಹೇಳಿದ್ದೇನು ಗೊತ್ತೇ?

Cricket News: ಜಡೇಜಾರವರ ಮೇಲೆ ಮುಗಿ ಬಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಾರಿ ಮುಜುಗರ; ಉಲ್ಟಾ ಹೊಡೆದ ಆಸ್ಟ್ರೇಲಿಯಾ ಮಾಜಿ ನಾಯಕ ಕ್ಲಾರ್ಕ್ ಹೇಳಿದ್ದೇನು ಗೊತ್ತೇ?

Cricket News: ಈಗ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಶುರುವಾಗಿದ್ದು ಫ್ರಬ್ರವರಿ 9ರಂದು, ಮೊದಲ ಪಂದ್ಯ ಮುಗಿಯುವುದಕ್ಕಿಂತ ಮೊದಲೇ ಟೀಮ್ ಇಂಡಿಯಾದ ಚಾಣಾಕ್ಷ ಬೌಲರ್ ರವೀಂದ್ರ ಜಡೇಜಾ (Ravindra Jadeja) ಅವರ ಮೇಲೆ ಆಸ್ಟ್ರೇಲಿಯಾ ತಂಡದವರು ಒಂದು ಅಪವಾದ ಹಾಕುತ್ತಿದ್ದಾರೆ. ಬಾಲ್ ಟ್ಯಾಂಪರಿಂಗ್ ಮಾಡಿರುವ ಅಪವಾದವನ್ನು ರವೀಂದ್ರ ಜಡೇಜಾ ಅವರ ಮೇಲೆ ಹಾಕಿದ್ದು ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮೈಕಲ್ ಕ್ಲಾರ್ಕ್ (Michael Clarke) ಅವರು ಉಲ್ಟಾ ಹೇಳಿಕೆ ನೀಡಿದ್ದಾರೆ.

ಪಂದ್ಯ ನಡೆಯುವಾಗ ಬೌಲಿಂಗ್ ಮಾಡುತ್ತಿದ್ದ ನಡುವೆ ರವೀಂದ್ರ ಜಡೇಜಾ ಅವರು ಸಿರಾಜ್ (Mohammad Siraj) ಅವರ ಬಳಿ ಬಂದು, ಏನೋ ಕೇಳಿ ಅದನ್ನು ತಮ್ಮ ಎಡಗೈಗೆ ಉಜ್ಜಿಕೊಂಡರು. ಇದನ್ನು ನೋಡಿ, ಅವರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ಮೀಡಿಯಾಗಳು ಆರೋಪ ಮಾಡಿ, ಆ ವಿಡಿಯೋಗಳು ವೈರಲ್ ಆಗಿವೆ, ಈ ವಿಚಾರ ವೈರಲ್ ಆದ ಹಾಗೆ, ಐಸಿಸಿ ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ (Rohit Sharma) ಅವರನ್ನು ಕರೆದು ವಿಚಾರಿಸಿದ್ದು, ರವೀಂದ್ರ ಜಡೇಜಾ ಅವರ ಬೆರಳಿಗೆ ನೋವಾದ ಕಾರಣ ಜಡೇಜಾ ಅವರು ಸಿರಾಜ್ ಅವರನ್ನು ಕರೆದು ಅಯಿಂಟ್ಮೆಂಟ್ ಹಾಕಿಕೊಂಡರು ಎಂದು ರೋಹಿತ್ ಶರ್ಮಾ ಅವರು ಹೇಳಿದ್ದು ಐಸಿಸಿ (ICC) ಇದನ್ನು ಒಪ್ಪಿ ಜಡೇಜಾ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಓದಿ..Cricket News: ಪದೇ ಪದೇ ಅದೇ ತಪ್ಪು: ರೋಹಿತ್ ಮೇಲೆ ಮತ್ತೆ ಕಿಡಿ ಕಾರಿದ ಅಭಿಮಾನಿಗಳು. ಯಾಕೆ ಗೊತ್ತೇ?? ಈತ ನಿಜಕ್ಕೂ ನಾಯಕನೇ ಎಂದದ್ದು ಯಾಕೆ ಗೊತ್ತೇ?

ಆಸ್ಟ್ರೇಲಿಯಾ ತಂಡವು ರವೀಂದ್ರ ಜಡೇಜಾ ಅವರ ಬಗ್ಗೆ ಆರೋಪ ಮಾಡಿತ್ತು, ಆದರೆ ಈಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು, “ರವೀಂದ್ರ ಜಡೇಜಾ ಅವರು ಹೆಚ್ಚು ಓವರ್ ಗಳು ಬೌಲಿಂಗ್ ಮಾಡಿದ್ದರು, ಇದರಿಂದ ಅವರ ಕೈಗೆ ನೋವು ಬಂದಿರಬಹುದು, ಆಗ ಅವರು ಅಂಪೈರ್ ಕೈಗೆ ಬಾಲ್ ಕೊಟ್ಟು ನಂತರ ಅವರ ಏನನ್ನಾದರೂ ಹಚ್ಚಿಕೊಳ್ಳಬಹುದಿತ್ತು. ಅಥವಾ ಅಂಪೈರ್ ಎದುರು ಹಚ್ಚಿಕೊಳ್ಳಬಹುದಿತ್ತು. ಈ ವಿಚಾರವನ್ನ ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರ ಕೈಯಲ್ಲಿರುವ ಬಾಲ್ ಅಂಪೈರ್ ಗೆ ಕೊಟ್ಟಿದ್ದರೆ, ನಾನು ಈ ವಿಷಯದ ಬಗ್ಗೆ ಮಾತನಾಡುತ್ತಾ ಇರಲಿಲ್ಲ. ನನಗೆ ಅನ್ನಿಸಿದ ಪ್ರಕಾರ ಇದು 100% ತಪ್ಪು ಗ್ರಹಿಕೆ ಇರಬಹುದು..” ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ವೀರೇಂದ್ರ ಸೆಹ್ವಾಗ್ ಸ್ಥಾನ ತುಂಬುತ್ತಿರುವ ಆಟಗಾರನನ್ನು ಹೆಸರಿಸಿದ ರವಿ ಶಾಸ್ತ್ರೀ: ಸುಮ್ಮನೆ ಇರಿ, ಎಂದು ಫುಲ್ ಗರಂ ಆದ ಸೆಹ್ವಾಗ್ ಫ್ಯಾನ್ಸ್. ಯಾಕೆ ಗೊತ್ತೇ??