Kannada News: ಕೊನೆ ಕ್ಷಣದಲ್ಲಿ ನಿಟ್ಟುಸಿರು ಬಿಟ್ಟ ದರ್ಶನ್, ಅಪ್ಪು ಅಭಿಮಾನಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ ಏನಾಗಿದೆ ಗೊತ್ತೇ??

Kannada News: ಕೊನೆ ಕ್ಷಣದಲ್ಲಿ ನಿಟ್ಟುಸಿರು ಬಿಟ್ಟ ದರ್ಶನ್, ಅಪ್ಪು ಅಭಿಮಾನಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ ಏನಾಗಿದೆ ಗೊತ್ತೇ??

Kannada News: ಡಿಬಾಸ್ ದರ್ಶನ್ (Dboss Darshan) ಅವರ ಕ್ರಾಂತಿ (Kranti) ಸಿನಿಮಾ ಜನವರಿ 26ರಂದು ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೆ ಉಳಿದಿರುವುದು ಇನ್ನೆರಡು ದಿನಗಳು ಮಾತ್ರ, ಅಭಿಮಾನಿಗಳು ಸೆಲೆಬ್ರೇಟ್ ಮಾಡಲು ಥಿಯೇಟರ್ ನಲ್ಲಿ ಕಟೌಟ್ ನಿಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಹಾಗೆಯೇ ದೊಡ್ಡ ದೊಡ್ಡ ಫ್ಲೆಕ್ಸ್ ಗಳು, ಬ್ಯಾನರ್ ಗಳು ತಯಾರಾಗುತ್ತಿದೆ. ಕಳೆದ ತಿಂಗಳು ಹೊಸಪೇಟೆಯಲ್ಲಿ ನಡೆದ ಅದೊಂದು ಘಟನೆ ನಟ ದರ್ಶನ್ ಮತ್ತು ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಭಿಮಾನಿಗಳ ನಡುವೆ ವೈಮನಸ್ಸು ಶುರುವಾಗಿತ್ತು. ಒಬ್ಬರನ್ನೊಬ್ಬರು ದೂರುವುದು ಇಂತಹ ಘಟನೆಗಳು ನಡೆದಿತ್ತು.

ಇಬ್ಬರ ಅಭಿಮಾನಿಗಳು ಬೀದಿಗೆ ಕೂಡ ಇಳಿದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಹ ಸಂಘರ್ಷಗಳು ನಡೆದಿದ್ದವು. ಆದರೆ ಕ್ರಾಂತಿ ಸಿನಿಮಾ ಬಿಡುಗಡೆ ಆಗುವ ಎರಡು ದಿನ ಮೊದಲೇ ದೊಡ್ಮನೆ ಅಭಿಮಾನಿಗಳು ಮಾಡಿರುವ ಅದೊಂದು ಕೆಲಸಕ್ಕೆ ಎಲ್ಲರ ಮೆಚ್ಚುಗೆ ಸಿಕ್ಕಿದೆ. ಗೋಕಾಕ್ ನ ದೊಡ್ಮನೆ ಅಭಿಮಾನಿಗಳು ಕ್ರಾಂತಿ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಫ್ಲೆಕ್ಸ್ ಒಂದನ್ನು ಮಾಡಿಸಿ, ದರ್ಶನ್ ಅವರ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದ್ದಾರೆ. ದೊಡ್ಮನೆ ಅಭಿಮಾನಿಗಳ ಈ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ಸಿಕ್ಕಿದೆ. ದೊಡ್ಮನೆ ಅಭಿಮಾನಿಗಳು ಮಾಡಿಸಿರುವ ಫ್ಲೆಕ್ಸ್ ನಲ್ಲಿ ಅಪ್ಪು ಅವರು ಯುವ ರಾಜ್ ಕುಮಾರ್ (Yuva Rajkumar) ಅವರ ಫೋಟೋ ಜೊತೆಗೆ, ದರ್ಶನ್ ಅವರ ಫೋಟೋ ಕೂಡ ಹಾಕಿಸಿದ್ದಾರೆ. ಇದನ್ನು ಓದಿ..Kannada News: ಪಾಪ ತನ್ನ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ ಸಮಂತಾ ರವರನ್ನು ಶಾಕುಂತಲಂ ಟೀಮ್ ಏನು ಮಾಡಿದೆ ಗೊತ್ತೇ?? ಕೆಳ ಮಟ್ಟಕೆ ಇಳಿದ ಸಿನಿಮಾ ತಂಡ.

ದೊಡ್ಮನೆ ಅಭಿಮಾನಿಗಳು ವೈಷಮ್ಯದ ವಿಚಾರಗಳನ್ನು ಅಲ್ಲಿಗೆ ಬಿಟ್ಟು, ಸೌಹಾರ್ದಗೆ ತೋರಿ ದರ್ಶನ್ ಅವರ ಸಿನಿಮಾಗೆ ವಿಶ್ ಮಾಡಿರುವುದು ಅವರ ಒಳ್ಳೆಯ ಗುಣವನ್ನು ತೋರಿಸುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದರ್ಶನ್ ಅವರ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ಕಲಾವಿದರ ಅಭಿಮಾನಿಗಳು ಕೂಡ, ತಮ್ಮ ಮೆಚ್ಚಿನ ನಟ ಮಾತ್ರ ಬೇಕು ಎಂದುಕೊಳ್ಳುವುದಕ್ಕಿಂತ ಕನ್ನಡದ ಎಲ್ಲಾ ಕಲಾವಿದರಿಗೂ ಸಪೋರ್ಟ್ ಮಾಡಿ, ಕನ್ನಡ ಚಿತ್ರರಂಗ ಬೆಳೆಯಲು ಕೈಜೋಡಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Kannada News: ಜೀವನೇ ಕೊಡುವಷ್ಟು ಆ ನಟಿಯನ್ನು ಪ್ರೀತಿ ಮಾಡಿದ್ದ ತೆಲುಗಿನ ಬಾಲಯ್ಯ: ಆದರೆ ಕೊನೆಗೆ ಕೈ ಕೊಟ್ಟದ್ದು ಯಾಕೆ ಗೊತ್ತೆ? ಕೊನೆಯಲ್ಲಿ ಏನಾಯ್ತು ಗೊತ್ತೇ??