Big News: ಮುಖ್ಯ ಆಯ್ಕೆದಾರರ ಹುದ್ದೆಗೆ ಬಂದ ಮಾಜಿ ಆಟಗಾರ: ಈತನೇ ಫೈನಲ್. ಈಗಲಾದರೂ ತಂಡದ ಆಯ್ಕೆ ಸರಿಹೋಗಲಿದೆಯೇ??

Big News: ಮುಖ್ಯ ಆಯ್ಕೆದಾರರ ಹುದ್ದೆಗೆ ಬಂದ ಮಾಜಿ ಆಟಗಾರ: ಈತನೇ ಫೈನಲ್. ಈಗಲಾದರೂ ತಂಡದ ಆಯ್ಕೆ ಸರಿಹೋಗಲಿದೆಯೇ??

Big News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು (Team India) ಉತ್ತಮ ಪ್ರದರ್ಶನ ನೀಡದೆ ಸೆಮಿಫೈನಲ್ಸ್ ನಲ್ಲಿ ಸೋತು ವಿಶ್ವಕಪ್ ನಲ್ಲಿ ಸೋತು ಹೊರಗೆ ಬಂದ ನಂತರ, ಬಿಸಿಸಿಐ (BCCI) ಹೊಸ ನಿರ್ಧಾರಗಳನ್ನು ತೆಗೆದುಕೊಂಡು, ಎಲ್ಲವನ್ನು ಹೊಸದಾಗಿ ಶುರು ಮಾಡಬೇಕು ಎಂದು ಈಗಾಗಲೇ ಆಯ್ಕೆ ಸಮಿತಿಯನ್ನು ವಜಾ ಗೊಳಸಿದೆ. ಚೇತನ್ ಶರ್ಮಾ (Chetan Sharma) ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿ, ಆಯ್ಕೆಗಾರರ ಹುದ್ದೆಗೆ ಹೊಸದಾಗಿ ಅರ್ಜಿಗೆ ಆಹ್ವಾನ ಸಹ ನೀಡಲಾಗಿತ್ತು. ಅರ್ಜಿಗೆ ಆಹ್ವಾನ ನೀಡಿದ ನಂತರ ಆಯ್ಕೆಗಾರರ ಸಮಿತಿಗೆ ಆಯ್ಕೆ ಆಗಬಹುದಾದ ಆಟಗಾರರು ಯಾರಿರಬಹುದು ಎನ್ನುವ ಚಾರ್ವ್ಹೆಯಾಗಿತ್ತು.

ಅದಕ್ಕೆ ಅಧಿಕೃತವಾಗಿ ಇನ್ನು ಉತ್ತರ ಸಿಕ್ಕಿಲ್ಲದೆ ಹೋದರು ಕೂಡ, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಒಬ್ಬ ಆಟಗಾರನ ಹೆಸರು ಕೇಳಿಬರುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಇಂದ ನಿವೃತ್ತಿ ಪಡೆದ ಯುವ ಆಟಗಾರ ಅಜಿತ್ ಅಗರ್ಕರ್ (Ajith Agarkar) ಅವರ ಹೆಸರು ಕೇಳಿಬರುತ್ತಿದೆ. ಅಜಿತ್ ಅವರು ಆಯ್ಕೆ ಸಮಿತಿಗೆ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು, ಆದರೆ ಸೆಲೆಕ್ಟ್ ಆಗಿರಲಿಲ್ಲ. ಕಳೆದ ಸಾರಿ ಕೂಡ ಅಜಿತ್ ಅವರ ಹೆಸರು ಕೇಳಿಬಂದಿತ್ತು. ಆದರೆ, ಆಯ್ಕೆ ಸಮಿತಿಯ ಆಯ್ಕೆದಾರರನ್ನು ಅಂತಿಮ ಗೊಳಿಸಿದಾಗ ಕೊನೆಯ ಕ್ಷಣದಲ್ಲಿ ಇವರ ಹೆಸರನ್ನು ಲಿಸ್ಟ್ ಇಂದ ಕೈಬಿಡಲಾಗಿತ್ತು. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳ ಕಷ್ಟ ಕಾಲ ಮುಗಿದು, ಈ ರಾಶಿಗಳಿಗೆ ಶುಭ ಆರಂಭ: ಹಣದ ಹೊಳೆಯೇ ಹರಿಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ಆದರೆ ಈ ವರ್ಷ ಅಜಿತ್ ಅಗರ್ಕರ್ ಅವರು ಆಯ್ಕೆ ಸಮಿತಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಹುದ್ದೆಯಲ್ಲಿ ಸ್ಥಾನ ಪಡೆಯಲು ಅಜಿತ್ ಅಗರ್ಕರ್ ಅವರಿಗೆ ಎಲ್ಲಾ ಅರ್ಹತೆ ಇದೆ ಎಂದು ಹೇಳಲಾಗುತ್ತಿದ್ದು, ಅವರ ಜೊತೆಗೆ ಇದರ ಬಗ್ಗೆ ಬಿಸಿಸಿಐ ಚರ್ಚೆ ನಡೆಸಿಲ್ಲ, ಆದರೆ ಅಜಿತ್ ಅಗರ್ಕರ್ ಅವರೇ ಆಯ್ಕೆಯಾಗಬಹುದು ಎನ್ನುವ ಮಾತಂತು ಮೂಲಗಳ ಪ್ರಕಾರ ತಿಳಿದುಬಂದಿದ್ದು, ಅಂತಿಮವಾಗಿ ಬಿಸಿಸಿಐ ಆಯ್ಕೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Personal Loan: ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾ? ಹಾಗಿದ್ದರೆ ಈ ಟಾಪ್ 5 ಬ್ಯಾಂಕ್ ಗಳಲ್ಲಿ ನೀವು ಸರಿ ಎಂದರೆ ಸಾಕು ಹುಡುಕಿಕೊಂಡು ಬಂದು ಹಣ ನೀಡುತ್ತಾರೆ.