Business Kannada: ಕೇವಲ 25 ಸಾವಿರ ರೂಪಾಯಿಯನ್ನು ಬಂಡವಾಳ ಹಾಕಿ, ಬರೋಬ್ಬರಿ 30 ಲಕ್ಷ ಗಳಿಸುವ ಸುಲಭ ಬಿಸಿನೆಸ್ ಯಾವುದು ಗೊತ್ತೇ??

Business Kannada: ಕೇವಲ 25 ಸಾವಿರ ರೂಪಾಯಿಯನ್ನು ಬಂಡವಾಳ ಹಾಕಿ, ಬರೋಬ್ಬರಿ 30 ಲಕ್ಷ ಗಳಿಸುವ ಸುಲಭ ಬಿಸಿನೆಸ್ ಯಾವುದು ಗೊತ್ತೇ??

Business Kannada: ಇತ್ತೀಚಿನ ವರ್ಷಗಳಲ್ಲಿ ಹಲವರಿಗೆ ಹೊರಗಡೆ ಹೋಗಿ ಕೆಲಸ ಮಾಡುವುದಕ್ಕಿಂತ ಮನೆಯಲ್ಲಿ ಕೂತು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಹೊಸ ಬ್ಯುಸಿನೆಸ್ (Business) ಶುರು ಮಾಡಲು ಇಷ್ಟ ಪಡುತ್ತಾರೆ. ಅದರಲ್ಲೂ ಕೋವಿಡ್ ಸಮಸ್ಯೆ ಬಂದ ನಂತರ ಬಹಳಷ್ಟು ಜನರು ಕೆಲಸ ಕಳೆದುಕೊಂಡ ಕಾರಣ, ಬಹುತೇಕರು ಬ್ಯುಸಿನೆಸ್ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಬ್ಯುಸಿನೆಸ್ ಮಾಡಲು ಶುರು ಮಾಡುವ ಮೊದಲು, ಕಡಿಮೆ ಹಣ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯುವ ಹಾಗೆ ಬ್ಯುಸಿನೆಸ್ ಶುರು ಮಾಡಬೇಕು. ಅಂತಹ ಒಂದು ಬ್ಯುಸಿನೆಸ್ ಬಗ್ಗೆ ಇಂದು ನಿಮವೇ ತಿಳಿಸಿಕೊಡುತ್ತೇವೆ. ಇಂದು ನಿಮಗೆ ನಾವು ತಿಳಿಸುತ್ತಿರುವುದು ಮುತ್ತು ಕೃಷಿ ಬಗ್ಗೆ..

ಇದು ಬೇರೆ ಬ್ಯುಸಿನೆಸ್ ಗಿಂತ ಬಹಳ ವಿಶೇಷವಾದ ಬ್ಯುಸಿನೆಸ್ ಆಗಿದೆ, ಕಪ್ಪೆ ಚಿಪ್ಪು ಮತ್ತು ಮುತ್ತುಗಳ (Pearl Business) ವ್ಯಾಪಾರದಲ್ಲಿ ಜನರಿಗೂ ಹೆಚ್ಚಿನ ಆಸಕ್ತಿ ಇದೆ. ಈ ಬ್ಯುಸಿನೆಸ್ ನಲ್ಲಿ ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸಬಹುದು. ಈ ವಿಶೇಷ ಮುತ್ತಿನ ಕೃಷಿ ಶುರು ಮಾಡಲು ಒಂದು ಕೊಳ, ಕಪ್ಪೆಚಿಪ್ಪು ಮತ್ತು ನಿಮಗೆ ತರಬೇತಿಯ ಅವಶ್ಯಕತೆ ಇದೆ. ಇದಕ್ಕಾಗಿ ನಿಮ್ಮ ಬಳಿ ಜಮೀನು ಇದ್ದರೆ, ಅದರಲ್ಲಿ ಒಂದು ಕೊಳ ನಿರ್ಮಾಣ ಮಾಡಿ, ಮುತ್ತುಗಳ ಕೃಷಿ ಶುರು ಮಾಡಬಹುದು. ಸರ್ಕಾರದ ಸಹಾಯವನ್ನು ಪಡೆದು ಈ ಬ್ಯುಸಿನೆಸ್ ಶುರು ಮಾಡಬಹುದು. ಈ ಕೃಷಿಗೆ ಬೇಕಾಗುವ ಬಹಳ ಮುಖ್ಯವಾದ ವಸ್ತು ಕಪ್ಪೆಚಿಪ್ಪುಗಳು, ಅವುಗಳು ನಮ್ಮ ದೇಶದಲ್ಲಿ ಬಿಹಾರ (Bihar), ಮತ್ತು ದಕ್ಷಿಣ ಭಾರತದಲ್ಲಿ (South India) ಲಭ್ಯವಿದೆ. ಮುತ್ತಿನ ಕೃಷಿಗೆ ತರಬೇತಿ ಕೂಡ ನೀಡುತ್ತಾರೆ, ಮುಂಬೈ (Mumbai) ಮತ್ತು ಮಧ್ಯಪ್ರದೇಶದ (Madhyapradesh) ಹೋಶಂಗಾಬಾದ್ ನಲ್ಲಿ ಪಡೆಯಬಹುದು. ಇದನ್ನು ಓದಿ.. Business: ಯಾವುದೇ ವ್ಯಾಪಾರ ಆರಂಭಿಸಿದರೂ ಯಶಸ್ಸು ಪಡೆಯುವ ರಾಶಿಗಳು ಯಾವುವು ಗೊತ್ತೇ?? ಜೀವನದಲ್ಲಿ ಉದ್ಯೋಗಕ್ಕಿಂತ ವ್ಯಾಪಾರವೇ ಬೆಸ್ಟ್.

ನೀವು ತರಬೇತಿ ಪಡೆಯುವಾಗ, ಈ ಬ್ಯುಸಿನೆಸ್ ಗಾಗಿ ನಿಮಗೆ ಬೇಕಾದ ಎಲ್ಲಾ ಮಾಹಿತಿಗಳು ಸಿಗುತ್ತದೆ. ಮುತ್ತು ಕೃಷಿ ಬ್ಯುಸಿನೆಸ್ ಇಂದ ನೀವು ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡಲು, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ಸರ್ಕಾರದ ಕಡೆಯಿಂದ ನಿಮಗೆ ಸಾಲ ಸಿಗುತ್ತದೆ. ಒಂದು ಮುತ್ತು 150 ರಿಂದ 200 ರೂಪಾಯಿ ಬೆಲೆ ಬಾಳುತ್ತದೆ, ಗುಣಮಟ್ಟ ಚೆನ್ನಾಗಿದ್ದರೆ 200 ರೂಪಾಯಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಒಂದು ಎಕರೆ ಹೊಂಡದಲ್ಲಿ ನೀವು ಮುತ್ತು ಕೃಷಿ ಬ್ಯುಸಿನೆಸ್ ಶುರು ಮಾಡಿದರೆ ವಾರ್ಷಿಕವಾಗಿ ಸುಮಾರು 30 ಲಕ್ಷ ರೂಪಾಯಿ ವರೆಗು ಸಂಪಾದನೆ ಮಾಡಬಹುದು. ಇದನ್ನು ಓದಿ.. Cricket News: ದಿನೇಶ್ ಕಾರ್ತಿಕ್ ಇನ್ನೆಂದು ತಂಡಕ್ಕೆ ಆಡದೆ ಇರಬಹುದು ಎಂದ ರಾಬಿನ್ ಉತ್ತಪ್ಪ: ಪಂತ್ ಯಾವಾಗ ಆಡಬೇಕು ಅಂತೇ ಗೊತ್ತೇ?