ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ಕ್ರಿಕೆಟ್ ತಂಡ ಮುಂದಿನ ಪಂದ್ಯ ಗೆಲ್ಲಬೇಕು ಎಂದರೆ, ತಂಡದಲ್ಲಿ ಮಾಡಬೇಕಾದ ಬದಲಾವಣೆಗಳು ಏನು ಗೊತ್ತೇ?? ಮೂರು ಬದಲಾವಣೆ ಬೇಕೇ ಬೇಕು.

1,511

Get real time updates directly on you device, subscribe now.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಪಂದ್ಯಗಳು ನಿನ್ನೆ ಶುರುಗಾಗಿದೆ. ಮೊದಲ ಪಂದ್ಯದಲ್ಲೇ ಕಳಪೆ ಬೌಲಿಂಗ್ ಕಾರಣದಿಂದ ಭಾರತ ತಂಡ ಸೋಲು ಅನುಭವಿಸಿತು. ಬ್ಯಾಟಿಂಗ್ ಪ್ರದರ್ಶನ ಭರ್ಜರಿಯಾಗಿದ್ದರು ಸಹ, ಬೌಲಿಂಗ್ ವಿಭಾಗ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡದ ಕಾರಣ, ಭಾರತ ತಂಡಕ್ಕೆ ಮುಖಭಂಗವಾಗಿದೆ. 20 ಓವರ್ ಗಳಲ್ಲಿ ಉತ್ತಮವಾದ ಬ್ಯಾಟಿಂಗ್ ಇಂದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು, ಇತ್ತ ಆಸ್ಟ್ರೇಲಿಯಾ ತಂಡ, 19.2 ಓವರ್ ಗಳಲ್ಲೇ 209 ರನ್ ಗಳಿಸಿ ಗೆದ್ದಿತು. ನಿನ್ನೆಯ ಪಂದ್ಯದಲ್ಲಿ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರ ಪ್ಲೇಯಿಂಗ್ 11 ಇಂದ ಹೊರಗಿದ್ದದ್ದು ಭಾರತಕ್ಕೆ ನಷ್ಟವಾಯಿತು. ಇನ್ನು ಹರ್ಷಲ್ ಪಟೇಲ್ ಅವರು 49 ರನ್ ಬಿಟ್ಟುಕೊಟ್ಟರೆ, ಭುವನೇಶ್ವರ್ ಕುಮಾಫ್ 52 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿರುವಾಗ ಮುಂದಿನ ಎರಡು ಪಂದ್ಯಗಳನ್ನು ಭಾರತ ತಂಡ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಸೆಪ್ಟೆಂಬರ್ 23ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲಬೇಕೆಂದರೆ ಭಾರತ ತಂಡ ಈ ಮೂರು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಿದೆ..

ಚಾಹಲ್ ಅವರ ಬದಲಾಗಿ ಅಶ್ವಿನ್ ಅವರನ್ನು ಪ್ಲೇಯಿಂಗ್ 11 ಗೆ ಸೇರಿಸಬೇಕು :- ಚಾಹಲ್ ಅವರು ಹಿಂದಿನ ಹಾಗೆ ಚಾಣಾಕ್ಷತೆ ತೋರಿಸುತ್ತಿಲ್ಲ. ನಿನ್ನೆಯ ಪಂದ್ಯದಲ್ಲಿ ಒಂದೇ ಒಂದು ವಿಕೆಟ್, ಅದು ಭಾರತ ತಂಡದಿಂದ ಪಂದ್ಯ ಕೈಜಾರಿದ್ ಬಳಿಕ ಪಡೆದರು, ಅಷ್ಟೇ ಅಲ್ಲದೆ 42 ರನ್ ಬಿಟ್ಟುಕೊಟ್ಟರು. ಚಾಹಲ್ ಅವರ ಆಟದ ಸ್ಥಿತಿ ಹೀಗಿರುವ ಕಾರಣ, ಅವರ ಬದಲಾಗಿ ಅಶ್ವಿನ್ ಅವರನ್ನು ಪ್ಲೇಯಿಂಗ್ 11 ನಲ್ಲಿ ಕರೆತರುವುದು ಉತ್ತಮ ಆಯ್ಕೆಯಾಗಿದೆ. ಅಶ್ವಿನ್ ಅವರು ಚಾಹಲ್ ಅವರಿಗಿಂತ ಒಳ್ಳೆಯ ಬೌಲರ್ ಆಗಿದ್ದಾರೆ, ಹಾಗೂ ಟಿ20 ಪಂದ್ಯಗಳಲ್ಲಿ ಒಳ್ಳೆಯ ಎಕಾನಮಿ ಅವರಿಗಿದೆ. ಅಷ್ಟೇ ಅಲ್ಲದೆ ಅಶ್ವಿನ್ ಅವರ ಬಳಿ ವಿಭಿನ್ನವಾದ ಅಸ್ತ್ರಗಳಿವೆ. ಹಾಗಾಗಿ ವಿಕೆಟ್ ತೆಗೆದು, ಪಂದ್ಯ ಗೆಲ್ಲಿಸುವಲ್ಲಿ ಅಶ್ವಿನ್ ಸಹಾಯಕವಾಗಿರುತ್ತಾರೆ.

ಭುವನೇಶ್ವರ್ ಕುಮಾರ್ ಬದಲು ದೀಪಕ್ ಚಹರ್ :- ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಅವರು ಈಗ ಭಾರತ ತಂಡದ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ. ಮತ್ತೊಂದು ಸಾರಿ ಡೆತ್ ಓವರ್ ನಲ್ಲಿ ಕಳಪೆ ಬೌಲಿಂಗ್ ಮಾಡಿ, 19ನೇ ಓವರ್ ನಲ್ಲಿ 16 ರನ್ ಬಿಟ್ಟುಕೊಟ್ಟು, 4 ಓವರ್ ಗಳಲ್ಲಿ 52 ರನ್ ಬಿಟ್ಟುಕೊಟ್ಟಿದ್ದಾರೆ. ಭುವನೇಶ್ವರ್ ಕುಮಾರ್ ಅವರು ತಂಡ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾಗಿರುವುದರಿಂದ, ಅವರ ಬದಲಾಗಿ ದೀಪಕ್ ಚಹರ್ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆಮಾಡಿಕೊಳ್ಳುವುದು ಒಳ್ಳೆಯದು. ಚಹರ್ ಅವರು ಉತ್ತಮವಾಗಿ ಬೌಲಿಂಗ್ ಮಾಡುವುದು ಮಾತ್ರವಲ್ಲದೆ, ಬ್ಯಾಟಿಂಗ್ ನಲ್ಲಿ ಸಹ ಒಳ್ಳೆಯ ಪ್ರದರ್ಶನ ನೀಡುತ್ತಾರೆ.

ಉಮೇಶ್ ಯಾದವ್ ಬದಲಿಗೆ ಜಸ್ಪ್ರೀತ್ ಬುಮ್ರ :- ಉಮೇಶ್ ಯಾದವ್ ಅವರು ಬಹಳ ಸಮಯದ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಮೊಹಮ್ಮದ್ ಶಮಿ ಅವರು ಕರೊನಾ ಕಾರಣದಿಂದ ಪಂದ್ಯದಿಂದ ಹೊರಗಿರುವ ಕಾರಣ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ನಿನ್ನೆಯ ಉಮೇಶ್ ಯಾದವ್ ಅವರು ಉತ್ತಮ ಪ್ರದರ್ಶನ ನೀಡಿಲ್ಲ. 2 ವಿಕೆಟ್ ಪಡೆದರು ಸಹ ಹೆಚ್ಚಿನ ರನ್ ಬಿಟ್ಟುಕೊಟ್ಟರು. ಇವರ ಬದಲಾಗಿ ಜಸ್ಪ್ರೀತ್ ಬುಮ್ರ ಅವರು ಕಣಕ್ಕೆ ಇಳಿಯುವುದು ಉತ್ತಮವಾಗಿದೆ. ಆದರೆ ಜಸ್ಪ್ರೀತ್ ಬುಮ್ರ ಅವರು ಟಿ20 ವಿಶ್ವಕಪ್ ಗಿಂತ ಮೊದಲು ಲಯ ಕಂಡುಕೊಳ್ಳಬೇಕಿರುವುದರಿಂದ, ತಂಡದಿಂದ ದೂರವಿದ್ದಾರೆ.

Get real time updates directly on you device, subscribe now.