ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯಾರು ಹೇಳಿದರು ಕೇಳುತ್ತಿಲ್ಲ ದ್ರಾವಿಡ್: ಆ ಇಬ್ಬರ ಮೇಲೆ ಫುಲ್ ನಂಬಿಕೆ: ಅದರಿಂದಲೇ ನಿನ್ನೆ ಪಂದ್ಯ ಕೂಡ ಗೆದ್ದಿದ್ದು: ದ್ರಾವಿಡ್ ಮಾಡಿರುವ ಗಟ್ಟಿ ನಿರ್ಧಾರ ಏನು ಗೊತ್ತೇ??

21,752

Get real time updates directly on you device, subscribe now.

ಅಕ್ಟೋಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾ ಆತಿಥ್ಯದಲ್ಲಿ ಈ ಪಂದ್ಯಗಳು ನಡೆಯಲಿದೆ. ಹಾಗಾಗಿ ಏಷ್ಯಾಕಪ್ 2022 ಪಂದ್ಯಗಳನ್ನು ಸಹ ಟಿ20 ಮಾದರಿಯಲ್ಲೇ ನಡೆಸಲಾಗುತ್ತಿದೆ. ಭಾನುವಾರ್ಕ್ ನಡೆದ ಭಾರತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಹಾಗೂ ರವೀಂದ್ರ ಜಡೇಜಾ ಉತ್ತಮವಾದ ಪ್ರದರ್ಶನ ನೀಡಿದರು. ಆದರೆ ಪಂದ್ಯದ ದಿನ ಕೋಚ್ ರಾಹುಲ್ ದ್ರಾವಿಡ್ ಅವರು ತೆಗೆದುಕೊಂಡಿರುವ ನಿರ್ಧಾರ ಈಗ ಚರ್ಚೆಗೆ ಗ್ರಾಸವಾಗಿದೆ..

ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನ್ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಟ್ಟರು, ಈ ನಿರ್ಧಾರ ಯಾಕೆ ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಪಂತ್ ಅವರ ಬದಲಾಗಿ ಆಯ್ಕೆಯಾದ ಇನ್ನಿಬ್ಬರು ಆಟಗಾರರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ, ಅತ್ಯುತ್ತಮ ಆಟಗಾರನಾದ ಕೆ.ಎಲ್.ರಾಹುಲ್ ಅವರು ಕಳೆದ ಕೆಲವು ದಿನಗಳ ಹಿಂದೆ ಇಂಜೂರಿಯಿಂದ ತಂಡದಿಂದ ದೂರ ಉಳಿದಿದ್ದರು, ಈಗ ಅವರು ಉತ್ತಮವಾದ ಫಾರ್ಮ್ ನಲ್ಲಿಲ್ಲ. ರಾಹುಲ್ ಅವರಿಗಿಂತ ರಿಷಬ್ ಪಂತ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಹಾಗೂ ಶುಬ್ಮನ್ ಗಿಲ್ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ಆದರೆ ಪಂತ್ ಅವರನ್ನು ಪ್ಲೇಯಿಂಗ್ 11ಗೆ ಆಯ್ಕೆ ಮಾಡದೆ ಬೆಂಚ್ ಕಾಯುವ ಹಾಗೆ ಮಾಡಲಾಯಿತು.

ಇನ್ನು ಬೌಲರ್ ಗಳ ವಿಚಾರಕ್ಕೆ ಬಂದರೆ, ಹಾರ್ದಿಕ್ ಪಾಂಡ್ಯ ಅವರು ಆಕ್ ರೌಂಡರ್ ಆಗಿ ಉತ್ತಮವಾದ ಪ್ರದರ್ಶನ ನೀಡಿದರು. ಭುವನೇಶ್ವರ್ ಕುಮಾರ್ 4 ವಿಕೆಟ್ಸ್ ಪಡೆದರು, ಅರ್ಷದೀಪ್ ಸಿಂಗ್ ಸಹ ಉತ್ತಮವಾದ ಪ್ರದರ್ಶನ ನೀಡಿದರು, ಆದರೆ ಆವೇಶ್ ಖಾನ್ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಯಿದೆ, ಆವೇಶ್ ಖಾನ್ ಎರಡು ಓವರ್ ಬೌಲಿಂಗ್ ಮಾಡಿ, 1 ವಿಕೆಟ್ ಪಡೆದು, 19 ರನ್ಸ್ ನೀಡಿದರು. ಆವೇಶ್ ಖಾನ್ ಆಕ್ರಮಣಕಾರಿ ಪ್ರದರ್ಶನ ನೀಡುತ್ತಿಲ್ಲ. ಅವರಿಗಿಂತ ಉತ್ತಮವಾದ ಆಯ್ಕೆಗಳು ಇರುವಾಗ, ರಾಹುಲ್ ದ್ರಾವಿಡ್ ಅವರು ಆವೇಶ್ ಖಾನ್ ಅವರನ್ನು ತಂಡಕ್ಕೆ ಯಾಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಸಹ ಶುರುವಾಗಿದೆ.

Get real time updates directly on you device, subscribe now.