ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ರವರ ಬಗ್ಗೆ ಮಾತನಾಡಿದ ಗವಾಸ್ಕರ್. ಜಾಡಿಸಿದ್ದು ಯಾರಿಗೆ ಗೊತ್ತೇ?? ಹೇಳಿದ್ದೇನು ಗೊತ್ತೇ?

ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ರವರ ಬಗ್ಗೆ ಮಾತನಾಡಿದ ಗವಾಸ್ಕರ್. ಜಾಡಿಸಿದ್ದು ಯಾರಿಗೆ ಗೊತ್ತೇ?? ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ 2019 ರಿಂದ ವಿರಾಟ್ ಕೊಹ್ಲಿ ರವರು ಯಾವುದೇ ರೀತಿಯ ಫಾರ್ಮೆಟ್ ಗಳಲ್ಲಿ ಒಂದೇ ಒಂದು ಶತಕವನ್ನು ಸಿಡಿಸಿಲ್ಲ. ಹೀಗಾಗಿ ಅವರು ಮತ್ತೊಮ್ಮೆ ತಮ್ಮ ಲಯಕ್ಕೆ ಮರಳಿ ಬರುತ್ತಾರೆ ಎಂಬುದಾಗಿ ಬಿಸಿಸಿಐ ಸೇರಿದಂತೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ ಆದರೆ ಇದುವರೆಗೂ ಅಂತಹ ಸೌಭಾಗ್ಯ ಯಾರಿಗೂ ಕೂಡ ಸಿಕ್ಕಿಲ್ಲ. ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಕುರಿತಂತೆ ಮಾಜಿ ಕ್ರಿಕೆಟಿಗರು ಕೂಡ ಸಾರಾಸಗಟಾಗಿ ಅವರನ್ನು ತಂಡದಿಂದ ಹೊರಗಿಡುವಂತೆ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಹೊರಗಿಡುವ ಅಂತ ಹಾಗೂ ಟಿ20 ವಿಶ್ವಕಪ್ ನಲ್ಲಿ ಆಡಿಸಲು ಅವರು ದೇಶಿಯ ಕ್ರಿಕೆಟ್ನಲ್ಲಿ ಏನಾದರೂ ಸಾಧಿಸಿದ್ದರೆ ಮಾತ್ರ ಆಡಿಸಲು ಎಂಬುದಾಗಿ ಹೇಳಿದವರು ಸಾಲಿನಲ್ಲಿ ಮಾಜಿ ನಾಯಕ ಕಪಿಲ್ ದೇವ್ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವಾರು ಖ್ಯಾತನಾಮರು ಕಾಣಸಿಗುತ್ತಾರೆ. ವಿರಾಟ್ ಕೊಹ್ಲಿ ಅವರ ಪರವಾಗಿ ಮೊದಲ ಬಾರಿಗೆ ಸುನಿಲ್ ಗಾವಸ್ಕರ್ ನಿಂತಿದ್ದಾರೆ. ಮಾಜಿ ಆಟಗಾರ ಆಗಿರುವ ಸುನಿಲ್ ಗವಾಸ್ಕರ್ ಅವರು ಈ ಬಾರಿ ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರ ಪರವಾಗಿ ನಿಂತಿದ್ದಾರೆ.

ರೋಹಿತ್ ಶರ್ಮಾ ಕಳಪೆ ಫಾರ್ಮ್ ನಲ್ಲಿದ್ದಾಗ ಯಾರು ಕೂಡ ಅವರ ಕುರಿತಂತೆ ಮಾತನಾಡಿಲ್ಲ ಆದರೆ ಯಾಕೆ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಕುರಿತಂತೆ ಮಾತನಾಡುತ್ತಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಫಾರ್ಮ್ ತಾತ್ಕಾಲಿಕ ಕ್ಲಾಸ್ ಶಾಶ್ವತ ಎಂಬುದಾಗಿ ಹೇಳಿದ್ದಾರೆ. ಏಕದಿನ ಸರಣಿಯನ್ನುವುದು ವಿರಾಟ್ ಕೊಹ್ಲಿ ಅವರಿಗೆ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಉತ್ತಮ ಸಮಯವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಬೇಕು ಎಂಬುದಾಗಿ ಸುನೀಲ್ ಗಾವಸ್ಕರ್ ಹೇಳಿದ್ದಾರೆ. ಉಳಿದ ನಿರ್ಧಾರವನ್ನು ನಮ್ಮ ಆಯ್ಕೆ ಸಮಿತಿಯ ಸದಸ್ಯರು ತೆಗೆದುಕೊಳ್ಳುತ್ತಾರೆ ಎಂಬುದಾಗಿ ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ.