ಅಸಲಿಗೆ ಇಂದು ಐಪಿಎಲ್ ವಿನ್ ಆಗಿ ಹಾರ್ಧಿಕ್ ಶ್ರೇಷ್ಠ ನಾಯಕನಾಗಿ ಹೇಗೆ ಆದರು ಗೊತ್ತೇ?? ಕ್ರಿಕೆಟಿಗ ಹೇಳಿದ್ದೇನು ಗೊತ್ತೇ?

ಅಸಲಿಗೆ ಇಂದು ಐಪಿಎಲ್ ವಿನ್ ಆಗಿ ಹಾರ್ಧಿಕ್ ಶ್ರೇಷ್ಠ ನಾಯಕನಾಗಿ ಹೇಗೆ ಆದರು ಗೊತ್ತೇ?? ಕ್ರಿಕೆಟಿಗ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ರವರು ಭಾರತೀಯ ಕ್ರಿಕೆಟ್ ತಂಡವನ್ನು ಸೇರಿದ ಸಂದರ್ಭದಲ್ಲಿ ಅತ್ಯುತ್ತಮ ಆಲ್ರೌಂಡರ್ ಆಟಗಾರನಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಬೀರಿದರು ಕೂಡ ನಂತರದ ದಿನಗಳಲ್ಲಿ ಅಂದರೆ ಇತ್ತೀಚಿಗೆ ಸಾಕಷ್ಟು ಇಂಜುರಿ ಗಳಿಂದಾಗಿ ತಂಡದಿಂದ ಹೊರಗೆ ತಿಳಿದುಕೊಳ್ಳಬೇಕಾದ ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾರ್ದಿಕ್ ಪಾಂಡ್ಯ ರವರ ಕಥೆ ಮುಗಿಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹಾರ್ದಿಕ್ ಪಾಂಡ್ಯ ರವರು ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಚುಕ್ಕಾಣಿಯನ್ನು ಹಿಡಿದು ಮೊದಲ ಆವೃತ್ತಿಯಲ್ಲಿಯೇ ಕಪ್ ಗೆಲ್ಲುತ್ತಾರೆ.

ಕಂಬ್ಯಾಕ್ ಮಾಡಿದ್ರೆ ಹೀಗೆ ಮಾಡಬೇಕು ಎನ್ನುವುದಾಗಿ ಎಲ್ಲರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಕೊಂಡಿದ್ದರು. ಇನ್ನು ಈಗಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ಮರಳಿರುವ ಹಾರ್ದಿಕ್ ಪಾಂಡ್ಯ ರವರು ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ರು ಇದೇ ಮೂಲಕ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೂಡ ಭಾರತೀಯ ತಂಡದ ಕಪ್ತಾನನಾಗಿ ಆಯ್ಕೆಯಾಗುತ್ತಾರೆ. ಹಾರ್ದಿಕ್ ಪಾಂಡ್ಯ ರವರ ನಾಯಕತ್ವದ ಯಶಸ್ಸಿನ ಹಿಂದಿನ ಗುಟ್ಟೇನು ಎಂಬುದರ ಕುರಿತಂತೆ ಎಲ್ಲರಿಗೂ ಕುತೂಹಲ ಇರಬಹುದು ಇದರ ಕುರಿತಂತೆ ಗುಜರಾತ್ ಟೈಟನ್ಸ್ ತಂಡದ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದ ಯಶ್ ದಯಾಳ್ ರವರು ಹಾರ್ದಿಕ್ ಪಾಂಡ್ಯ ಅವರ ಕುರಿತಂತೆ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಒಬ್ಬರು ಅತ್ಯಂತ ತಾಳ್ಮೆ ಹಾಗೂ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವ ಆಟಗಾರರಾಗಿದ್ದಾರೆ. ಅವರಿಗೆ ಯಾವ ಸಂದರ್ಭದಲ್ಲಿ ಹೇಗೆ ಆಡಬೇಕು ಹಾಗೂ ಹೇಗೆ ನಿರ್ಧಾರವನ್ನು ಕೈಗೊಳ್ಳಬೇಕು ಎನ್ನುವುದರ ಕುರಿತಂತೆ ಸ್ಪಷ್ಟವಾದ ದೂರದೃಷ್ಟಿಯಿದೆ ಎಂಬುದಾಗಿ ಹೊಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ರವರು ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಿರುವ ಸ್ಪೀಡ್ ನೋಡಿದ್ರೆ ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ ರವರಿಗೆ ನಾಯಕತ್ವದಲ್ಲಿ ಕಾಂಪಿಟೇಶನ್ ನೀಡಬಹುದು ಎನ್ನಲಾಗುತ್ತಿದೆ.