ಅಸಲಿಗೆ ಹರ್ಷಲ್ ಪಟೇಲ್ ರವರು ಭುವನೇಶ್ವರ್ ಕುಮಾರ್ ರವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದರೂ ಕೂಡ ಸರಣಿ ಶ್ರೇಷ್ಠ ಭುವಿಗೆ ನೀಡಿದ್ದು ಯಾಕೆ ಗೊತ್ತೇ??

ಅಸಲಿಗೆ ಹರ್ಷಲ್ ಪಟೇಲ್ ರವರು ಭುವನೇಶ್ವರ್ ಕುಮಾರ್ ರವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದರೂ ಕೂಡ ಸರಣಿ ಶ್ರೇಷ್ಠ ಭುವಿಗೆ ನೀಡಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು ಸಮ ಬಲದೊಂದಿಗೆ ಮುಗಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಕಾರಣದಿಂದಲೇ ಈ ಸರಣಿಯನ್ನು ಟೈ ಮೂಲಕ ಮುಗಿಸಲಾಗಿದೆ. ಮೊದಲ ಎರಡು ಪಂದ್ಯವನ್ನು ಸೌತ್ ಆಫ್ರಿಕಾ ತಂಡ ಗೆದ್ದರೆ ಕೊನೆಯ ಎರಡು ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದಿದೆ. ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡ ಈ ಫಲಿತಾಂಶವನ್ನು ಸಾಧಿಸಿದೆ. ಇನ್ನು ನಾಲ್ಕು ಪಂದ್ಯಗಳಿಂದ 6 ವಿಕೆಟ್ ಗಳನ್ನು ಕಬಳಿಸಿರುವ ಭುವನೇಶ್ವರ್ ಕುಮಾರ್ ರವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ.

ಆದರೆ ಈ ಕುರಿತಂತೆ ಹಲವಾರು ಜನರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಇವರಿಗೆ ಹೋಲಿಸಿದರೆ ಹರ್ಷಲ್ ಪಟೇಲ್ ರವರು ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ಗಳನ್ನು ಕಬಳಿಸಿದ್ದಾರೆ ಆದರೂ ಕೂಡ ಹರ್ಷಲ್ ಪಟೇಲ್ ರವರ ಬದಲಾಗಿ ಭುವನೇಶ್ವರ್ ಕುಮಾರ್ ರವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ಕ್ರಿಕೆಟ್ ಅಭಿಮಾನಿಗಳು ಯಾಕೆ ಹೀಗೆ ಮಾಡಿದ್ದೀರಾ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯನ್ನು ಹರಿಸುತ್ತಿದ್ದಾರೆ. ಈ ಸರಣಿಯಲ್ಲಿ ಹರ್ಷಲ್ ಪಟೇಲ್ ರವರು ನಾಲ್ಕು ಪಂದ್ಯಗಳಲ್ಲಿ 88 ರನ್ ನೀಡಿ 7 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಅದರಲ್ಲಿಯೂ ಅವರ ಬೆಸ್ಟ್ ಬೌಲಿಂಗ್ ಫಿಗರ್ 25 ರನ್ನುಗಳಿಗೆ 4 ವಿಕೆಟ್ ಕಬಳಿಸಿರುವುದು ಆಗಿದೆ. ಇನ್ನು ಭುವನೇಶ್ವರ್ ಕುಮಾರ್ ರವರು ನಾಲ್ಕು ಪಂದ್ಯಗಳಲ್ಲಿ 85 ರನ್ನು ನೀಡಿ 6 ವಿಕೆಟ್ ಕಬಳಿಸಿದ್ದಾರೆ.

ಈ ಸರಣಿಯಲ್ಲಿ ಅವರ ಬೆಸ್ಟ್ ಬೌಲಿಂಗ್ ಫಿಗರ್ 13 ರನ್ನುಗಳಿಗೆ 4 ವಿಕೆಟ್ ಆಗಿದೆ. ವಿಕೆಟ್ ಪಡೆದುಕೊಂಡಿರುವ ವಿಚಾರದಲ್ಲಿ ಅಶೋಕ್ ಪಟೇಲ್ ಅವರು ಮುಂದಿರಬಹುದು ಆದರೆ ಎಕಾನಮಿ ದೃಷ್ಟಿಯಲ್ಲಿ ಭುವನೇಶ್ವರ್ ಕುಮಾರ್ ರವರು ಸಾಕಷ್ಟು ಬಂದಿದ್ದಾರೆ. ಹರ್ಷಲ್ ಪಟೇಲ್ ರವರು 7.24 ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿದ್ದರೆ ಈ ಕಡೆ ಭುವನೇಶ್ವರ್ ಕುಮಾರ್ ರವರು 6.07 ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿರುವ ಕಾರಣದಿಂದಾಗಿ ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ನಿಮ್ಮ ಕುತೂಹಲ ಹಾಗೂ ಗೊಂದಲವನ್ನು ನಾವು ಪರಿ ಹರಿಸಿದ್ದೇವೆ ಎಂಬುದಾಗಿ ಭಾವಿಸುತ್ತೇವೆ.