ಬರೋಬ್ಬರಿ 12 ವರ್ಷಗಳ ನಂತರ ತನ್ನ ಸ್ವಂತ ರಾಶಿಗೆ ಮರಳಲಿದ್ದಾನೆ ಗುರು, ಐದು ರಾಶಿಗಳಿಗೆ ಅದೃಷ್ಟವೇ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ಬರೋಬ್ಬರಿ 12 ವರ್ಷಗಳ ನಂತರ ತನ್ನ ಸ್ವಂತ ರಾಶಿಗೆ ಮರಳಲಿದ್ದಾನೆ ಗುರು, ಐದು ರಾಶಿಗಳಿಗೆ ಅದೃಷ್ಟವೇ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಹಲವಾರು ಗ್ರಹಗಳು ತಮ್ಮ ರಾಶಿಗೆ ಪ್ರವೇಶವನ್ನು ಮಾಡಲಿದ್ದಾವೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಗುರುಗ್ರಹದ ಕುರಿತಂತೆ. ಬರೋಬ್ಬರಿ 12 ವರ್ಷಗಳ ನಂತರ ಗುರುಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೀನ ರಾಶಿಯನ್ನು ಏಪ್ರಿಲ್ 13ರಂದು ಪ್ರವೇಶಿಸಲಿದ್ದಾನೆ. ಗುರುಗ್ರಹದ ಮೀನರಾಶಿಯ ಪ್ರವೇಶದಿಂದಾಗಿ ಹಲವಾರು ರಾಶಿಯವರಿಗೆ ಅದೃಷ್ಟ ಖುಲಾಯಿ ಸಲಿದೆ. ಹಾಗಿದ್ದರೆ ಆ ರಾಶಿಯವರು ಯಾರು ಎನ್ನುವುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ಮೇಷ ರಾಶಿ; ಗುರು ಗ್ರಹ ಮೀನ ರಾಶಿಯನ್ನು ಪ್ರವೇಶಿಸುವುದರಿಂದಾಗಿ ಮೇಷ ರಾಶಿಯವರಿಗೆ ವಿದೇಶಿ ಪ್ರವಾಸದ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಇದೆ. ಧರ್ಮ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದಾಗಿ ವೈವಾಹಿಕ ಜೀವನದಲ್ಲಿ ಕೂಡ ಸಂತೋಷವನ್ನು ಅನುಭವಿಸಲಿದ್ದೀರಿ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಕೂಡ ಅತಿಶೀಘ್ರದಲ್ಲಿ ನೀವು ಕಾಣಲಿದ್ದೀರಿ. ಪ್ರತಿಯೊಂದು ಕೆಲಸದಲ್ಲಿ ಕೂಡ ನಿಮಗೆ ಅದೃಷ್ಟ ಜೊತೆಯಾಗಿರಲಿದೆ.

ವೃಷಭ ರಾಶಿ; ಉತ್ತಮ ಆದಾಯವನ್ನು ಗಳಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಹೊಂದಿರುವ ವೃಷಭ ರಾಶಿಯವರಿಗೆ ಗುರುವಿನ ರಾಶಿ ಪಲ್ಲಟ ಅದೃಷ್ಟವಾಗಿ ಪರಿಣಮಿಸಲಿದೆ. ರಹಸ್ಯ ಕರಮೂಲ ಸೇರಿದಂತೆ ಹಲವಾರು ಮೂಲಗಳಿಂದ ಆದಾಯ ನೀರಿನಂತೆ ಹರಿದು ಬರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಥಿಕ ಸಮಸ್ಯೆ ಎನ್ನುವುದಂತೂ ಮುಂದಿನ ದಿನಗಳಲ್ಲಿ ನಿಮಗೆ ಕಾಣುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವ ಕಾಲ ಸನ್ನಿಹಿತವಾಗಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತುಂಬಿ ತುಳುಕಾಡಲಿದೆ.

ಮಿಥುನ ರಾಶಿ; ಹಲವಾರು ವರ್ಷಗಳಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಉದ್ಯೋಗವನ್ನು ಹುಡುಕುತ್ತಿರುವವರಿಗೆ ಖಂಡಿತವಾಗಿ ಅತಿಶೀಘ್ರದಲ್ಲೇ ಉದ್ಯೋಗದ ಅವಕಾಶ ಸಿಗಲಿದೆ. ಅದರಲ್ಲೂ ಈ ಅವಧಿಯಲ್ಲಿ ಮೆಡಿಕಲ್ ಕಾನೂನು ಆಹಾರ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕಾಡುತ್ತಿರುವ ಅವರಿಗೆ ಉತ್ತಮ ಸಂಭಾವನೆ ಇರುವಂತಹ ಉದ್ಯೋಗ ಸಿಗುವುದರಲ್ಲಿ ಎರಡು ಮಾತಿಲ್ಲ. ಉತ್ತಮವಾದ ಜೀವನವನ್ನು ನಡೆಸಲು ಉತ್ತಮ ಸಂಭಾವನೆ ಇರುವ ಉದ್ಯೋಗ ಸಿಕ್ಕರೆ ಇನ್ನೇನು ಬೇಕು ಹೇಳಿ.

ಕರ್ಕಾಟಕ ರಾಶಿ; ಉದ್ಯೋಗದಲ್ಲಿರುವವರು ಗುರು ರಾಶಿಯ ಸಂಕ್ರಮಣದಿಂದ ಆಗಿ ಯಾವುದೇ ಕೆಲಸ ಮಾಡಿದರೂ ಕೂಡ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಎಲ್ಲರೂ ಕೂಡ ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಕೆಲಸವನ್ನು ಮೆಚ್ಚಿಕೊಂಡು ಹಿರಿಯ ಅಧಿಕಾರಿಗಳು ನಿಮ್ಮ ಸಂಬಳವನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ವ್ಯಾಪಾರಸ್ಥರಿಗೂ ಕೂಡಾ ಬರುವ ಆದಾಯದಲ್ಲಿ ಹೆಚ್ಚಳ ಕಂಡು ಬರಲಿದೆ. ಅದರಲ್ಲೂ ಒಂದು ವೇಳೆ ನೀವು ಟ್ರಾನ್ಸ್ಪೋರ್ಟ್ ವ್ಯಾಪಾರ ಕ್ಷೇತ್ರದಲ್ಲಿ ಇದ್ದರೆ ಖಂಡಿತವಾಗಿ ನಿಮಗೆ ಆದಾಯ ಎನ್ನುವುದು ದ್ವಿಗುಣವಾಗಿ ಹೆಚ್ಚಳವಾಗಲಿದೆ. ಕರ್ಕಾಟಕ ರಾಶಿಯ ವ್ಯಾಪಾರಸ್ಥರಿಗೆ ಏಪ್ರಿಲ್ 13 ರಿಂದ ಉತ್ತಮ ದಿನಗಳು ಆರಂಭವಾಗಲಿದೆ.

ಸಿಂಹ ರಾಶಿ; ಹಲವಾರು ಸಮಯಗಳಿಂದ ಸಿಂಹರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ವುದು ಡೋಲಾಯಮಾನವಾಗಿ ಇರುತ್ತದೆ. ಗುರುವಿನ ಸಂಕ್ರಮಣದಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪದಿಂದಾಗಿ ನಿಮ್ಮ ಸಂಸಾರದ ನಡುವೆ ಬಿರುಕು ನೋಡಬಹುದಾದಂತಹ ಎಲ್ಲಾ ಸಾಧ್ಯತೆಗಳು ಕೂಡ ಇರುತ್ತವೆ ಇದರ ಕುರಿತಂತೆ ನೀವು ಜಾಗೃತರಾಗಿರಬೇಕು ಹಾಗೂ ನಿಮ್ಮ ಸಂಗಾತಿ ಜೊತೆಗೆ ನಂಬಿಕೆಯನ್ನು ಬಲವಾಗಿ ಇರಿಸಿಕೊಳ್ಳಬೇಕು. ಜೀವನದಲ್ಲಿ ನಿಮಗೆ ಪ್ರಗತಿ ಸಾಧಿಸಲು ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದಾಗಿದೆ. ಇವರೇ ಗುರು ಗ್ರಹದ ರಾಶಿ ಸಂಕ್ರಮಣದಿಂದ ಆಗಿ ಲಾಭವನ್ನು ಪಡೆಯಲಿರುವಂತಹ ರಾಶಿಗಳು.