ಪಂದ್ಯವನ್ನು ಗೆಲ್ಲಿಸಿಕೊಟ್ಟ ಶಹಬಾಜ್ ಆಹ್ಮದ್ ರವರ ಕುರಿತು ಮಾತನಾಡಿದ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಗೊತ್ತೇ??

ಪಂದ್ಯವನ್ನು ಗೆಲ್ಲಿಸಿಕೊಟ್ಟ ಶಹಬಾಜ್ ಆಹ್ಮದ್ ರವರ ಕುರಿತು ಮಾತನಾಡಿದ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಷ್ಟು ವರ್ಷಗಳಿಂದ ನೀರಸ ಪ್ರದರ್ಶನವನ್ನು ನೀಡುತ್ತಾ ಬಂದಿದ್ದ ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಗೆಲುವಿನ ಲಯಕ್ಕೆ ಮರಳಿದೆ ಎಂದು ಹೇಳಬಹುದಾಗಿದೆ. ಮೊದಲ ಪಂದ್ಯವನ್ನು ಸೋತ ಬಳಿಕ ಡುಪ್ಲೆಸಿಸ್ ರವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿದ ಎರಡು ಪಂದ್ಯಗಳನ್ನು ಬ್ಯಾಕ್ ಟು ಬ್ಯಾಕ್ ರೋಚಕವಾಗಿ ಗೆದ್ದುಕೊಂಡಿತು.

ಈ ಬಾರಿ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಸರಿಯಾದ ತಂಡವನ್ನು ಮೆಗಾ ಹರಾಜಿನಲ್ಲಿ ಖರೀದಿಸಿದೆ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ನಿನ್ನೆ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ ಜೊತೆಗೆ ತಂಡದ ಗೆಲುವಿನ ಶ್ರೇಯ ಶಹಬ್ಬಾಜ್ ಅಹಮ್ಮದ್ ರವರಿಗೆ ಕೂಡ ಸಲ್ಲುತ್ತದೆ. ಕೇವಲ 26 ಎಸೆತಗಳಿಂದ ಬರೋಬ್ಬರಿ 44 ರನ್ನುಗಳನ್ನು ಬಾರಿಸಿದ್ದಾರೆ ಹಾಗೂ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ತಂಡ ಸೋಲುವ ಪರಿಸ್ಥಿತಿಯಲ್ಲಿ ಇದ್ದ ಸಮಯದಲ್ಲಿ ತಂಡವನ್ನು ಆದರಿಸಿದ ಶ್ರೇಯ ಶಹಬಾಜ್ ರವರಿಗೆ ಸಲ್ಲುತ್ತದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಇವರ ಕುರಿತಂತೆ ಮ್ಯಾಚ್ ಮುಗಿದ ನಂತರ ಡುಪ್ಲೆಸಿಸ್ ಅವರು ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ನೀವು ಎಲ್ಲರೂ ನೋಡಿರುವ ಹಾಗೆ ಶಹಬ್ಬಾಜ್ ರವರನ್ನು ನೋಡಿದರೆ ಅವರು ಬಿಗ್ ಶಾಟ್ ಪ್ಲೇಯರ್ ಎಂದು ಅನಿಸುವುದಿಲ್ಲ. ತಂಡಕ್ಕೆ ಬೇಕಾಗಿರುವ ಇನ್ನಿಂಗ್ಸನ್ನು ಬೇಕಾದ ಸಮಯದಲ್ಲಿ ಅವರು ನಿರ್ವಹಿಸಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಆಟವನ್ನು ಆಡಬೇಕು ಎನ್ನುವ ಕ್ಲಿಯರ್ ಪ್ಲಾನಿಂಗ್ ಅವರ ಆಟದಲ್ಲಿ ಇದೆ. ಅವರಿಗೂ ಕೂಡ ಬೌಲಿಂಗ್ ಇಡಬೇಕೆನ್ನುವ ಚರ್ಚೆ ನಾನು ಹಾಗೂ ವಿರಾಟ್ ಕೊಹ್ಲಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂಬುದಾಗಿ ಡುಪ್ಲೆಸಿಸ್ ರವರು ಹೇಳಿದ್ದಾರೆ.