ಎಲ್ಲರನ್ನೂ ಕಾಡುತ್ತಿದೆ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಹೊಸ ಸಿನಿಮಾದ ಟೈಟಲ್; ಇದರ ಕುರಿತಂತೆ ಕುದ್ದಾಗಿ ಉಪೇಂದ್ರ ಹೇಳಿದ್ದೇನು ಗೊತ್ತಾ??

ಎಲ್ಲರನ್ನೂ ಕಾಡುತ್ತಿದೆ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಹೊಸ ಸಿನಿಮಾದ ಟೈಟಲ್; ಇದರ ಕುರಿತಂತೆ ಕುದ್ದಾಗಿ ಉಪೇಂದ್ರ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಂತು-ಇಂತು ಹಲವಾರು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿರುವ ಒಳ್ಳೆಯ ಗಳಿಗೆ ಬಂದೇಬಿಟ್ಟಿದೆ. ಹೌದು ನಾವು ಮಾತನಾಡುತ್ತಿರುವುದು ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಸಿನಿಮಾದ ಕುರಿತಂತೆ. ರಿಯಲ್ ಸ್ಟಾರ್ ಉಪೇಂದ್ರ ರವರು ಹಲವಾರು ವರ್ಷಗಳ ಹಿಂದೆ ನಿರ್ದೇಶನದಲ್ಲಿ ಇಡೀ ಕನ್ನಡ ಚಿತ್ರರಂಗಕ್ಕೆ ಭಾಷ್ಯಯನ್ನು ಬರೆದಂತಹ ನಿರ್ದೇಶಕ. ರಿಯಲ್ ಸ್ಟಾರ್ ಉಪೇಂದ್ರ ರವರ ನಿರ್ದೇಶನದ ಸಿನಿಮಾಗಳು ಎಂದರೆ ಖಂಡಿತವಾಗಿ ಬಾಕ್ಸಾಫೀಸ್ ನಲ್ಲಿ ಹಾಗೂ ಜನರ ಮನವನ್ನು ಗೆಲ್ಲುವುದಕ್ಕೆ ಹೇಳಿಮಾಡಿಸಿದಂತಹ ಚಿತ್ರ ಎಂಬುದಾಗಿ ಮಾತಿತ್ತು

ಆದರೆ ಯಾಕೋ ಏನೋ ಗೊತ್ತಿಲ್ಲ ನಿರ್ದೇಶಕನ ಸ್ಥಾನದಿಂದ ರಿಯಲ್ ಸ್ಟಾರ್ ಉಪೇಂದ್ರ ರವರು ಕೆಲವು ವರ್ಷಗಳ ಹಿಂದೆಯೇ ಹೊರಬಂದಿದ್ದರು. ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪ್ರಜಾಕೀಯ ಕ್ಕೆ ಕೂಡ ಬಹುತೇಕ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ಹೀಗಾಗಿ ಅಭಿಮಾನಿಗಳು ಪದೇಪದೇ ಉಪೇಂದ್ರ ರವರನ್ನು ಬಾಸ್ ಯಾವಾಗ ನಿರ್ದೇಶನ ಮಾಡುತ್ತೀರಿ ಎಂಬುದಾಗಿ ಕೇಳುತ್ತಲೇ ಇದ್ದರು. ಕೊನೆಗೂ ಕೂಡ ನಿನ್ನೆ ಉಪೇಂದ್ರರವರು ತಮ್ಮ ನಿರ್ದೇಶನದ ಸಿನಿಮಾ ಕುರಿತಂತೆ ಘೋಷಣೆಯನ್ನು ಹೊರಡಿಸಿದ್ದಾರೆ. ಸಿನಿಮಾದ ಪೋಸ್ಟರ್ನಲ್ಲಿ ಕೊಂಬಿರುವ ಕುದುರೆಯನ್ನು ಏರಿ ರಿಯಲ್ ಸ್ಟಾರ್ ಉಪೇಂದ್ರ ರವರು ಬರುತ್ತಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ತಲೆಗೆ ಹುಳ ಬಿಟ್ಟಂತೆ ಆಗಿರುವುದು ಈಗ ಚಿತ್ರದ ಟೈಟಲ್ ಕುರಿತಂತೆ. ಸಾಮಾನ್ಯವಾಗಿ ಇದು ಯು ಐ ಅಂದರೆ ನೀನು ನಾನು ಎನ್ನುವ ಅರ್ಥವನ್ನು ನೀಡುವಂತೆ ಕಾಣುತ್ತಿದೆ. ಈ ಕುರಿತಂತೆ ರಿಯಲ್ ಸ್ಟಾರ್ ಉಪೇಂದ್ರ ರವರು ಖುದ್ದಾಗಿ ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಕುದುರೆ ಗೊರಸಿನ ಲಾಳದಂತೆ ಕಾಣುವ ಟೈಟಲ್ ಕುರಿತಂತೆ ರಿಯಲ್ ಸ್ಟಾರ್ ಉಪೇಂದ್ರರ ಅವರಲ್ಲಿ ಕೇಳಿದಾಗ ಅವರು ನೀಡಿರುವ ಉತ್ತರ ಇನ್ನಷ್ಟು ಕುತೂಹಲಕಾರಿಯಾಗಿತ್ತು. ಈ ಪ್ರಶ್ನೆಯನ್ನು ಕೇಳಿದಾಗ 2000 ಉಪೇಂದ್ರರವರು ಇದನ್ನು ನೋಡಿದಾಗ ನಿಮಗೆ ಏನು ಅನಿಸುತ್ತದೆ, ಜನರು ಇದನ್ನು ಏನು ಅಂದುಕೊಳ್ಳುತ್ತಾರೆ ಎನ್ನುವುದರ ಮೇಲೆ ಟೈಟಲ್ ನಿಂತಿದೆ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಅಧಿಕೃತವಾಗಿ ಟೈಟಲ್ ಘೋಷಣೆ ಯಾವಾಗ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.