ಮದುವೆಯಾದ ಕೇವಲ ಎರಡೇ ವಾರಕ್ಕೆ ತನ್ನ ಗಂಡನನ್ನು ಕಳೆದುಕೊಂಡ ಮಹಿಳೆ, ನಂತರ ಮಾಡಿದ್ದೇನು ಗೊತ್ತೇ?? ಸಲ್ಯೂಟ್ ಮಾಡಿದ ನೆಟ್ಟಿಗರು.

ಮದುವೆಯಾದ ಕೇವಲ ಎರಡೇ ವಾರಕ್ಕೆ ತನ್ನ ಗಂಡನನ್ನು ಕಳೆದುಕೊಂಡ ಮಹಿಳೆ, ನಂತರ ಮಾಡಿದ್ದೇನು ಗೊತ್ತೇ?? ಸಲ್ಯೂಟ್ ಮಾಡಿದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಕಲಿಯುಗದ ಜೀವನದಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುವುದು ತುಂಬಾನೇ ವಿರಳ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆನಂದ ಭಾಷ್ಪವನ್ನು ಸುರಿಸುತ್ತೀರಿ. ಹೌದು ಗೆಳೆಯರೇ ಇದು ನಡೆದಿರುವುದು ನಮ್ಮ ಭಾರತ ದೇಶದಲ್ಲಿಯೇ. ಒಡಿಶಾದ ಬಸುದೇವ ಪುರದಲ್ಲಿ ಈ ಘಟನೆ ನಡೆದಿರುವುದು. 23 ವರ್ಷದ ಮೌಸುಮಿ ಮೊಹಂತಿ ಎನ್ನುವ ಯುವತಿ ಮದುವೆಯಾಗುತ್ತಾಳೆ.

ಆದರೆ ಈಕೆ ಮದುವೆಯಾದ ಎರಡೇ ವಾರಕ್ಕೆ ನಡೆಯಬಾರದಂತಹ ಘಟನೆ ನಡೆದು ಹೋಗಿತ್ತು. ಹೌದು ಈಕೆಯ ಗಂಡನಿಗೆ ಮಹಾಮಾರಿಯನ್ನು ವುದು ತಗಲಿತ್ತು. ಈಕೆ ತನ್ನ ಗಂಡನನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನವನ್ನು ಮಾಡುತ್ತಾಳೆ. ನಿಮಗೆ ಗೊತ್ತಿರೋ ಹಾಗೆ ಮಹಾಮಾರಿ ಬಂದಮೇಲೆ ಅದನ್ನು ಹೋಗಲಾಡಿಸುವುದು ತುಂಬಾನೇ ಕಷ್ಟ ಎಂಬುದಾಗಿ. ಪ್ರೀತಿ ತನ್ನ ಗಂಡನನ್ನು ಉಳಿಸಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನವನ್ನು ಪಟ್ಟಿದ್ದಳು. ಗಂಡನಿಗೆ ಉತ್ತಮವಾದ ಚಿಕಿತ್ಸೆ ಮಾಡಿಸಬೇಕು ಎಂಬ ಕಾರಣಕ್ಕಾಗಿ 40 ಲಕ್ಷ ರೂಪಾಯಿಯ ದೇಣಿಗೆಯನ್ನು ಕೂಡ ಸಂಗ್ರಹ ಮಾಡಿದಳು.

ಆದರೆ ಆ ವಿಧಿಗೆ ಇವರಿಬ್ಬರು ಜೊತೆಯಲ್ಲಿರುವುದು ಇಷ್ಟವಿಲ್ಲ ಎಂದು ಕಾಣಿಸುತ್ತದೆ ಮದುವೆಯಾದ ಕೆಲವೇ ವಾರಗಳಲ್ಲಿ ಈಕೆಯ ಗಂಡ ಇವಳನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾನೆ. ಗಂಡ ಇಹಲೋಕವನ್ನು ತ್ಯಜಿಸಿದ ನಂತರವೂ ಕೂಡ ಆ ಯುವತಿ ಮಾಡಿರುವ ಕೆಲಸ ನಿಜಕ್ಕೂ ಕೂಡ ಎಲ್ಲರೂ ಸಲ್ಯೂಟ್ ಹೊಡೆಯುವಂತದ್ದು. ಆಕೆ ಮಾಡಿದ ಕೆಲಸವನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆ ಹುಡುಗಿಯ ಕುರಿತಂತೆ ಹೆಮ್ಮೆಪಡುತ್ತೀರಿ. ಹೌದು ಗಂಡನನ್ನು ಉಳಿಸಲು ಸಂಗ್ರಹಿಸಿ ದಂತಹ 40 ಲಕ್ಷ ರೂಪಾಯಿಯನ್ನು ಆಕೆ ಮಹಾಮಾರಿ ಯಿಂದ ಸಂಕಷ್ಟಕ್ಕೊಳಗಾಗಿರುವಂತಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾಳೆ. ತನ್ನ ಗಂಡನನ್ನು ಉಳಿಯಲಿಲ್ಲ ಕೊನೆಪಕ್ಷ ಇದರಿಂದಾಗಿ ಬಳಲುತ್ತಿರುವ ಬೇರೆ ಯಾರಾದರೂ ಉಳಿದುಕೊಳ್ಳಬಹುದು ಎಂಬ ಮನೋಭಾವದಿಂದ ಆಕೆಯ ದಾನ ಮಾಡಿದ್ದಾಳೆ. ಆಕೆಯ ನಿಸ್ವಾರ್ಥ ಮನಸ್ಸಿಗೆ ನಮ್ಮ ಸಲಾಂ.