ಹನಿಮೂನ್ ಗೆ ಎಂದು ಸೌತ್ ಆಫ್ರಿಕಾಗೆ ಹೋದ ಜೋಡಿಗೆ ಅಲ್ಲಿ ನಡೆದ್ದದೇನು ಗೊತ್ತೇ?? ಸಿನಿಮಾದಲ್ಲಿಯೂ ಇಷ್ಟು ಟ್ವಿಸ್ಟ್ ಇರಲ್ಲ.

ಹನಿಮೂನ್ ಗೆ ಎಂದು ಸೌತ್ ಆಫ್ರಿಕಾಗೆ ಹೋದ ಜೋಡಿಗೆ ಅಲ್ಲಿ ನಡೆದ್ದದೇನು ಗೊತ್ತೇ?? ಸಿನಿಮಾದಲ್ಲಿಯೂ ಇಷ್ಟು ಟ್ವಿಸ್ಟ್ ಇರಲ್ಲ.

ನಮಸ್ಕಾರ ಸ್ನೇಹಿತರೇ ಶ್ರೇನಿ ದೇವಾನಿ ಹಾಗೂ ಆನಿ ದೇವಾನಿ ಎಂಬ ಆ ದಂಪತಿಗಳು ತಮ್ಮ ಹನಿಮೂನ್ ಗಾಗಿ ಸೌತ್ ಆಫ್ರಿಕಾ ಸುಂದರವಾದ ಪ್ರದೇಶವಾಗಿರುವ ಕೇಪ್ ಟೌನ್ ಗೆ ಹೋಗಿ ನಂತರ ಕೆಲವೇ ದಿನಗಳಲ್ಲಿ ಆನಿ ದೇವಾನಿ ಯವರು ಜೀವವನ್ನು ಕಳೆದುಕೊಳ್ಳುತ್ತಾರೆ. ಹೌದು ಸ್ನೇಹಿತರೆ ಈ ಕಂಪ್ಲೀಟ್ ಕತೆಯನ್ನು ನೀವು ತಪ್ಪದೆ ಕೊನೆಯವರೆಗೂ ಓದಲೇಬೇಕು ಯಾಕೆಂದರೆ ಇದು ಸಾಕಷ್ಟು ಟ್ವಿಸ್ಟ್ ಗಳಿಂದ ಕೂಡಿದೆ.

ಹೌದು ಸ್ನೇಹಿತರೆ ಮೊದಲಿಗೆ ಬಂದಂತಹ ಕಥೆಯ ಪ್ರಕಾರ ಶ್ರೇನಿ ಹಾಗೂ ಆನಿ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಸಾಕಷ್ಟು ಪ್ರೀತಿಸುತ್ತಿರುತ್ತಾರೆ ಹಾಗೂ ಇವರಿಬ್ಬರೂ ಕೂಡ ಅನಿವಾಸಿ ಭಾರತೀಯರು ಆಗಿರುತ್ತಾರೆ. ಇನ್ನು ಇವರಿಬ್ಬರ ನಿಶ್ಚಿತಾರ್ಥದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಸಾಕಷ್ಟು ವೈಮನಸ್ಸುಗಳು ಕೂಡ ಉಂಟಾಗಿತ್ತು. ಆದರೂ ಕೂಡ ಅವರ ಮದುವೆ ಸಲೀಸಾಗಿ ನಡೆದುಬಿಡುತ್ತದೆ. ಇನ್ನು ಮದುವೆಯಾದ ನಂತರ ಆನಿ ತಮ್ಮ ಪತಿಯ ಕುರಿತಂತೆ ತಂಗಿಯ ಬಳಿ ಸಾಕಷ್ಟು ಮಾತುಗಳನ್ನು ಹೇಳಿರುತ್ತಾರೆ. ಈ ಮಾತುಗಳು ಕೂಡ ಮುಂದಿನ ಸಮಯದಲ್ಲಿ ತನಿಖೆಯಾಗಬೇಕಾದರೆ ತಿರುವನ್ನು ಕೂಡ ನೀಡುತ್ತದೆ.

ಹೌದು ಸ್ನೇಹಿತರೆ ಇವರಿಬ್ಬರೂ ಕೂಡ ಹನಿಮೂನ್ ಗಾಗಿ ಸೌತ್ ಆಫ್ರಿಕಾದ ಅತ್ಯಂತ ಸುಂದರವಾದ ಪ್ರದೇಶ ಕೆಪ್ ಟೌನ್ ಗೆ ಬಂದಿಳಿಯುತ್ತಾರೆ. ನಂತರ ಇವರು ಹಲವಾರು ಪ್ರದೇಶಗಳನ್ನು ಸುತ್ತುತ್ತಾರೆ ಅಂದು ರಾತ್ರಿ ಸಂತೋಷವಾಗಿದ್ದರು. ಆದರೆ ಎಲ್ಲ ಮುಗಿಸಿಕೊಂಡು ಟ್ಯಾಕ್ಸಿಯಲ್ಲಿ ಹೋಟೆಲ್ ರೂಮಿಗೆ ಹೋಗುತ್ತಿರಬೇಕಾದರೆ ಇಬ್ಬರು ಆಗಂತುಕರು ಬಂದು ಇಬ್ಬರ ಬಳಿ ಹಣವನ್ನು ಕಿತ್ತುಕೊಂಡು ನಂತರ ಶ್ರೇನಿ ಯವರ ಪತ್ನಿಯನ್ನು ಕರೆದುಕೊಂಡು ಹೋಗಿ ಮುಗಿಸಿಬಿಡುತ್ತಾರೆ. ಆದರೆ ಪ್ರಕರಣದ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕ ಟ್ಯಾಂಗೋ ಎನ್ನುವವನು ಸಿಕ್ಕಿಬೀಳುತ್ತಾನೆ ಅವನು ಶ್ರೇನಿಯವರನ್ನು ಬೊಟ್ಟುಮಾಡಿ ಇವರೇ ಈ ಕಾರ್ಯಕ್ಕೆ ಕಾರಣ ಎಂಬುದಾಗಿ ಆಶ್ಚರ್ಯಕರ ಮಾತನ್ನು ಹೇಳುತ್ತಾನೆ.

ಶ್ರೇಣಿ ಹಾಗೂ ಅವರ ಪತ್ನಿಯ ನಡುವೆ ಸಾಕಷ್ಟು ವೈಮನಸ್ಸು ಗಳಿದ್ದದ್ದೂ ಕೂಡ ಹಲವಾರು ಸಿಸಿಟಿವಿ ಫೂಟೇಜ್ ಗಳಲ್ಲಿ ಸಾಬೀತಾಗಿತ್ತು. ಮಾತ್ರವಲ್ಲದೆ ಟ್ಯಾಂಗೋ ಶ್ರೇನಿ ಯವರೇ ನಮಗೆ ಅವರ ಪತ್ನಿಯನ್ನು ಮುಗಿಸಲು ಹಣ ಕೊಟ್ಟಿದ್ದು ಎಂದು ಕೂಡ ಹೇಳುತ್ತಾರೆ. ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರು ಟ್ಯಾಂಗೋ ಹೇಳಿದಂತೆ ಎಲ್ಲವೂ ಕೂಡ ನಿಜವಾಗಿತ್ತು. ಮೊದಲಿಗೆ ಸೌತ್ ಆಫ್ರಿಕಾ ಕಾನೂನು ಶ್ರೇನಿ ಅವರಿಗೆ ಸಜೆಯನ್ನು ನೀಡಿತು. ನಂತರದ ದಿನಗಳಲ್ಲಿ ಈ ಪ್ರಕರಣವನ್ನು ಇನ್ನಷ್ಟು ಕೂಡ ಕೂಲಂಕುಶವಾಗಿ ಪರಿಶೀಲಿಸಿದಾಗ ಅಡಗಿದ್ದ ಸತ್ಯ ಹೊರಗೆ ಬಂದು ಅದೇನೆಂದರೆ,

ಅಲ್ಲಿ ಹಣವನ್ನು ಕದ್ದಿದ್ದ ಟ್ಯಾಂಗೋ ಹಾಗೂ ಅವನ ಅನುಚರರು ಶ್ರೇನಿಯ ಪತ್ನಿಯನ್ನು ಮುಗಿಸಿದನಂತರ ಆ ಪ್ರಕರಣವನ್ನು ಅವನ ಮೇಲೆ ಹಾಕುವುದಕ್ಕಾಗಿ ಸುಂದರವಾದ ಕಥೆಯನ್ನು ಎಲ್ಲಾ ಪುರಾವೆಗಳೊಂದಿಗೆ ಕಟ್ಟಿದ್ದರು. ಹೀಗಾಗಿ ಕೊನೆಯವರೆಗೂ ಕೂಡ ಪೊಲೀಸರಿಗೆ ಶ್ರೇನಿಯೇ ತಪ್ಪಿತಸ್ಥ ಎಂಬ ಭಾವನೆ ಮೂಡುವಂತೆ ಆಗಿತ್ತು ನಂತರ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಶ್ರೇನಿ ನಿರ್ದೋಷಿ ಎಂಬುದು ಸಾಬೀತಾಗಿತ್ತು ಆದರೆ ಆತನ ಪತ್ನಿ ಈ ಲೋಕವನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಳು.

ಯಾರದೋ ಹಣದಾಸೆಗಾಗಿ ಯಾರೋ ಜೀವ ಕಳೆದುಕೊಂಡರು ಹಾಗೂ ಯಾರೋ ಕಂಬಿ ಎನಿಸಿದರೂ ಅನುಭವಿಸಿದರು. ಈಗ ಟ್ಯಾಂಗೋ ಹಾಗೂ ಆತನ ಅನುಚರ ರಿಗೆ ಸೌತ್ಆಫ್ರಿಕ ನ್ಯಾಯಾಲಯ ಕಂಬಿ ಎನಿಸುವಂತೆ ಮಾಡಿದೆ. ಆದರೆ ಶ್ರೇನಿ ಈ ಎಲ್ಲ ಜಂಜಾಟದಲ್ಲಿ ತನ್ನ ಮಡದಿಯನ್ನು ಕಳೆದುಕೊಂಡು ಒಂಟಿಯಾಗಿದ್ದ. ತಮ್ಮ ನಡುವೆ ಇದ್ದ ವೈಮನಸ್ಯವನ್ನು ಕಳೆದುಕೊಳ್ಳಲು ಮಡದಿಯನ್ನು ಸಂತೋಷವಾಗಿರಿಸಲು ಸೌತ್ ಆಫ್ರಿಕಾಗೆ ಬಂದಿದ್ದ. ಆದರೆ ಆ ಸೌತ್ ಆಫ್ರಿಕಾದಲ್ಲಿ ತನ್ನ ಮಡದಿಯನ್ನು ಕಳೆದುಕೊಳ್ಳುತ್ತೇನೆ ಎಂಬ ಯಾವ ಸುಳಿವು ಕೂಡ ಆತನಿಗೆ ತಿಳಿದಿರಲಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.