ಚಕ್ರವರ್ತಿ ಚಂದ್ರಚುಡ್ ರವರು ಎಲಿಮಿನೇಟ್ ಆಗಲು ಪ್ರೇಕ್ಷಕರ ವೋಟ್ ಕಾರಣವಲ್ಲ, ಮತ್ತೇನು ಗೊತ್ತೇ?? ಕೊನೆಗೂ ಬಯಲಾಯಿತು ಅಸಲಿ ಕಥೆ.

ಚಕ್ರವರ್ತಿ ಚಂದ್ರಚುಡ್ ರವರು ಎಲಿಮಿನೇಟ್ ಆಗಲು ಪ್ರೇಕ್ಷಕರ ವೋಟ್ ಕಾರಣವಲ್ಲ, ಮತ್ತೇನು ಗೊತ್ತೇ?? ಕೊನೆಗೂ ಬಯಲಾಯಿತು ಅಸಲಿ ಕಥೆ.

ನಮಸ್ಕಾರ ಸ್ನೇಹಿತರೇ ದಿನಕಳೆದಂತೆ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನ ಜನಪ್ರಿಯತೆ ಮುಗಿಲು ಮುಟ್ಟುತ್ತಿದೆ. ಇನ್ನು ಈ ಬಾರಿ ನೆನ್ನೆ ಅಷ್ಟೇ ಮಧ್ಯರಾತ್ರಿ ಚಕ್ರವರ್ತಿ ಚಂದ್ರಶೇಖರ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗಡೆ ಹೋಗಿದ್ದಾರೆ. ಹೌದು ಸ್ನೇಹಿತರೆ ಚಕ್ರವರ್ತಿ ಚಂದ್ರಚುಡ್ ರವರು ಬಿಗ್ ಬಾಸ್ ಕನ್ನಡ ಸೀಸನ್ 15 ಕಾರ್ಡ್ ಮೂಲಕ ಎಂಟ್ರಿ ನೀಡಿದ್ದರು. ಚಕ್ರವರ್ತಿ ಚಂದ್ರಚುಡ್ ರವರಿಗೆ ಪತ್ರಿಕೋದ್ಯಮದ ಹಿನ್ನಲೆಯಿದೆ. ಇನ್ನು ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತುಗಾರಿಕೆಯಿಂದ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅವರು ತಪ್ಪು ಮಾಡಿದ್ದರೂ ಸಹ ಅದನ್ನು ಒಪ್ಪಿ ಕೊಳ್ಳದೆ ಅದನ್ನು ಸಮರ್ಥಿಸಿಕೊಳ್ಳುವ ರಿಂದಾಗಿ ಎಲ್ಲರಿಗೂ ಕೂಡ ಅವರು ನುಂಗಲಾರದ ಕಡಲೆಬೀಜ ವಾಗಿದ್ದರು. ಇನ್ನು ಕಳೆದ ವಾರ ಯಾವುದೇ ಎಲಿಮಿನೇಷನ್ ಇಲ್ಲದ ಕಾರಣ ಈ ವಾರದ ಮಧ್ಯದಲ್ಲಿ ಎಲ್ಲಿ ಎಲಿಮಿನೇಷನ್ ನ್ನು ಮಾಡುವ ಕುರಿತಂತೆ ಸುಳಿವು ನೀಡಲಾಗಿತ್ತು. ಅದರಂತೆ ನಾಮಿನೇಟ್ ಆಗಿದ್ದ ಶಮಂತ್ ಹಾಗೂ ಚಕ್ರವರ್ತಿ ರವರನ್ನು ಬಿಗ್ ಬಾಸ್ ಮಧ್ಯರಾತ್ರಿ ಕರೆದಿದ್ದರು. ಇವರಿಬ್ಬರಲ್ಲಿ ಈಗ ಚಕ್ರವರ್ತಿ ಚಂದ್ರಚೂಡ್ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಕೆಲ ಮೂಲಗಳ ಪ್ರಕಾರ ಚಕ್ರವರ್ತಿ ಚಂದ್ರಚೂಡ್ ರವರ ಎಲಿಮಿನೇಷನ್ ಗೆ ವೋಟ್ ಕಾರಣ ಅಲ್ಲ ಎಂಬುದು ತಿಳಿದುಬಂದಿದೆ.

ಹೌದು ಸ್ನೇಹಿತರೆ ಇದಕ್ಕೆ ಹಲವಾರು ಕಾರಣಗಳಿವೆ ಅವುಗಳಲ್ಲಿ ಹೇಳುತ್ತಾ ಹೋದರೆ ಒಂದು, ತಾವು ತಪ್ಪು ಮಾಡಿದ್ದರೂ ಸಹ ಕಿಚ್ಚ ಸುದೀಪ್ ರವರ ಎದುರುಗಡೆ ತಮ್ಮ ತಪ್ಪನ್ನು ಕೂಡ ಸಮರ್ಥಿಸಿಕೊಳ್ಳುತ್ತಿದ್ದರು. ಅಲ್ಲದೆ ಕಿಚ್ಚ ಸುದೀಪ್ ರವರಿಗೆ ಒಂದು ಸಮಯದಲ್ಲಿ ಅವಾಜ್ ಹಾಕಲು ಪ್ರಾರಂಭಿಸಿದರು. ಇನ್ನು ಈ ಹಿಂದೆ ಪ್ರಿಯಾಂಕಾ ರವರು ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಕೆಟ್ಟ ಸನ್ನೆಯನ್ನು ಮಾಡಿದ್ದರಿಂದಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದರು. ಇದೆ ಕಾರಣಕ್ಕಾಗಿ ವ್ಯಾಪಕವಾಗಿ ಜನರು ಚಕ್ರವರ್ತಿ ಚಂದ್ರಚೂಡ್ ರವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದು ಪಟ್ಟು ಹಿಡಿದರು. ಇದನ್ನೆಲ್ಲ ಪರಿಗಣಿಸಿರುವ ಕಲರ್ಸ್ ಕನ್ನಡ ವಾಹಿನಿ ಈ ಕಾರಣದಿಂದಲೇ ಚಕ್ರವರ್ತಿ ಚಂದ್ರಚುಡ್ ರವರನ್ನು ಮನೆಯಿಂದ ಹೊರ ಹಾಕಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ