ಸೋತ ಮರು ದಿನವೇ ಕಂಬದ ರಂಗಯ್ಯ ನವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿ ಡಿ ಬಾಸ್ ! ಏನು ಗೊತ್ತಾ??

ಸೋತ ಮರು ದಿನವೇ ಕಂಬದ ರಂಗಯ್ಯ ನವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿ ಡಿ ಬಾಸ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸರಿಗಮಪ ಸೀಸನ್ 17 ಬಹಳ ವರ್ಣರಂಜಿತವಾಗಿ ಯಶಸ್ವಿಯಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಕಾರ್ಯಕ್ರಮ ಅತ್ಯುತ್ತಮ ಟಿಆರ್ಪಿ ಪಡೆದುಕೊಂಡಿದ್ದು ಅದರ ಜೊತೆ ಹಲವಾರು ಸ್ಪರ್ಧಿಗಳ ಜೀವನವು ಬದಲಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ತೆರೆಮರೆಯ ಹಿಂದಿನ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುವ ಸರಿಗಮಪ ಶೋ ಈ ಬಾರಿಯೂ ಕೂಡ ಹಲವಾರು ಜನರಿಗೆ ಒಂದು ದಾರಿದೀಪವಾಗಿದೆ.

ಯಾರು ಸೋತರು ಯಾರು ಗೆದ್ದರು ಎಂಬುದನ್ನು ಪಕ್ಕಕ್ಕೆ ಇಡುವುದಾದರೇ ಹಲವಾರು ಸ್ಪರ್ಧಿಗಳನ್ನು ವೇದಿಕೆ ಮೇಲೆ ತರುವುದೇ ಒಂದು ದೊಡ್ಡ ವಿಚಾರ ಎಂಬುದನ್ನು ಯಾರೂ ಮರೆಯಬಾರದು. ಅದರಂತೆ ಹಲವಾರು ಸ್ಪರ್ಧಿಗಳಿಗೆ ಹೊಸ ದಾರಿಯನ್ನು ತೋರಿಸಿರುವ ಸರಿಗಮಪ ವೇದಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹವಾ ಸೃಷ್ಟಿಸಿರುವ ಕಂಬದ ರಂಗಯ್ಯ ರವರಿಗೂ ಕೂಡ ಒಂದು ದಾರಿದೀಪವಾಗಿದೆ, ಹೌದು ಸ್ನೇಹಿತರೇ ಇದೀಗ ಸರಿಗಮಪ ವೇದಿಕೆಯಲ್ಲಿ ಸೋಲನ್ನು ಕಂಡರೂ ಕೂಡ ಕಂಬದ ರಂಗಯ್ಯ ನವರಿಗೆ ಭರ್ಜರಿ ಸಿಹಿ ಯೊಂದು ಸಿಕ್ಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕಂಬದ ರಂಗಯ್ಯ ಗೆಲ್ಲಬೇಕು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೂ ಕೂಡ ತೀರ್ಪುಗಾರರು ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀನಿಧಿ ಶೆಟ್ಟಿ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಿದ್ದಾರೆ. ಫೈನಲ್ ಅವರಿಗೆ ತಲುಪಿಸುವುದನ್ನು ಕಂಡಿರುವ ಕಂಬದ ರಂಗಯ್ಯ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಬಹುಶಹ ಇದನ್ನೆಲ್ಲವನ್ನು ಸದಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಹಾಯ ಮಾಡುವ ನಟ ದರ್ಶನ್ ರವರ ಗಮನಿಸುತ್ತಿದ್ದರು ಎಂದೆನಿಸುತ್ತದೆ. ಅದೇ ಕಾರಣಕ್ಕಾಗಿ ಇದೀಗ ದರ್ಶನ್ ಅವರು ಮತ್ತೊಮ್ಮೆ ತಮ್ಮ ನಡೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೂಚಿಸಿದ್ದಾರೆ.

ಹೌದು ಸ್ನೇಹಿತರೇ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಡಿ ಬಾಸ್ ಖ್ಯಾತಿಯ ದರ್ಶನ್ ಅವರು ಮೊದಲಿನಿಂದಲೂ ವಿವಿಧ ರೀತಿಯ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಹಾಗೂ ಪ್ರತಿಭೆಗಳನ್ನು ಗುರುತಿಸಿ ಸಹ ಪ್ರೋತ್ಸಾಹ ಮಾಡುವ ಗುಣವನ್ನು ಹೊಂದಿದ್ದಾರೆ. ಅದೇ ದರ್ಶನ ರವರು ಈಗ ಕಂಬದ ರಂಗಯ್ಯ ರವರ ಹಾಡು ಕೇಳಿ ಫುಲ್ ಫಿದಾ ಆಗಿದ್ದಾರೆ ಎಂಬುದು ತಿಳಿದುಬಂದಿದೆ. ಇಷ್ಟೆಲ್ಲ ಮೆಚ್ಚಿಕೊಂಡರೂ ಬಹುಶಹ ದರ್ಶನ್ ರವರು ಕಂಬದ ರಂಗಯ್ಯ ಸರಿಗಮಪ ಶೋ ಮುಗಿಸಲಿ ಎಂಬುದನ್ನು ಕಾಯುತ್ತಿದ್ದರು ಎಂಬಂತೆ ಕಾಣುತ್ತಿದೆ.

ಯಾಕೆಂದರೆ ಸರಿಗಮಪ ಶೋ ಮುಗಿದ ಕೂಡಲೇ ಮನೆಗೆ ಬರುವಂತೆ ಕಂಬದ ರಂಗಯ್ಯ ನವರಿಗೆ ದರ್ಶನ ಕರೆ ಮಾಡಿ ಹೇಳಿದ್ದಾರೆ, ಇನ್ನು ದರ್ಶನ್ ರವರು ಕರೆದ ತಕ್ಷಣ ಕಂಬದ ರಂಗಯ್ಯ ರವರು ಮನೆಗೆ ಹೋಗಿ ಮಾತುಕತೆ ನಡೆಸುವಾಗ ದರ್ಶನ್ ರವರು ನೀವು ಹಾಡಿದ ಹಲವಾರು ಹಾಡುಗಳನ್ನು ನಾನು ಕೇಳಿದ್ದೇನೆ ಖಂಡಿತ ನಿಮ್ಮ ಧ್ವನಿ ಅದ್ಭುತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ, ಸರಿಗಮಪ ವೇದಿಕೆಯಲ್ಲಿ ಸೋಲನ್ನು ಕಂಡಿದ್ದೇನೆ ಎಂದು ಬೇಜಾರು ಮಾಡಿಕೊಳ್ಳಬೇಡಿ.

ಸೋಲೆ ಗೆಲುವಿನ ಮೆಟ್ಟಲು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಉತ್ತಮ ಗಾಯಕನಾಗುತ್ತೀರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿನಗೊಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದಾರಂತೆ. ದರ್ಶನ ರವರು ಮಾತುಕೊಟ್ಟಿದ್ದಾರೆ ಎಂದರೆ ಖಂಡಿತ ಇನ್ನು ಕೆಲವೇ ಕೆಲವು ದಿನಗಳಲ್ಲಿ ಕಂಬದ ರಂಗಯ್ಯ ರವರಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ತಲ್ಲಣವನ್ನು ಸೃಷ್ಟಿಸಿದ್ದು ದರ್ಶನ್ ರವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಮತ್ತೊಮ್ಮೆ ಮುಂದುವರೆದಿದೆ ಎಂದು ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡದ ಪರವಾಗಿಯೂ ಕೂಡ ಹೀಗೆ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ದರ್ಶನ್ ರವರಿಗೆ ಅನಂತ ಅನಂತ ವಂದನೆಗಳು.