ಬಿಗ್ ನ್ಯೂಸ್: ಸರಿಗಮಪ ಶೋ ವಿರುದ್ಧ ರೊಚ್ಚಿಗೆದ್ದ ಜನ ! ಮೋಸ ನಡೆದುಹೋಯೀತೇ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸರಿಗಮಪ ಸೀಸನ್ 17ರ ಪ್ರಶಸ್ತಿಯನ್ನು ಶ್ರೀ ನಿಧಿ ಶಾಸ್ತ್ರಿಯವರು ಗೆದ್ದುಕೊಂಡಿದ್ದಾರೆ. ಸೀಸನ್ ಆರಂಭದಿಂದಲೂ ಬಹಳ ಕುತೂಹಲಕಾರಿಯಾಗಿ ನಡೆದುಕೊಂಡು ಬಂದಿದ್ದ ಸರಿಗಮಪ ಶೋ ಇದೀಗ ಅಷ್ಟೇ ಕುತೂಹಲಕಾರಿಯಾಗಿ ಮುಗಿದಿದೆ. ಇನ್ನು ಎರಡನೇ ಸ್ಥಾನದಲ್ಲಿ ಅಂದರೆರೇ ಮೊದಲನೆ ರನ್ನರ್ ಅಪ್ ಆಗಿ ಅಶ್ವಿನಿ ಶರ್ಮರವರು ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಎರಡನೇ ರನ್ನರ್ ಅಪ್ ಆಗಿ ಬಾರಿ ಅಭಿಮಾನಿ ಬಳಗವನ್ನು ಹೊಂದಿದ್ದ ಕಂಬದ ರಂಗಯ್ಯ ರವರು ಸ್ಥಾನ ಪಡೆದುಕೊಂಡಿದ್ದಾರೆ.

ಮೊದಲಿನಿಂದಲೂ ಯಾವುದೇ ಸಂಗೀತ ಬ್ಯಾಗ್ರೌಂಡ್ ಇಲ್ಲದೆ ಹಲವಾರು ವರ್ಷಗಳ ನಿರಂತರ ಅಭ್ಯಾಸ ಮಾಡಿ ಸರಿಗಮಪ ಸೀಸನ್ ನಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಸವಾಲನ್ನು ನೀಡಿದ ಕಂಬದ ರಂಗಯ್ಯ ರವರು ಫೈನಲ್ಗೆ ತಲುಪಿ ಸೋಲನ್ನು ಕಂಡಿದ್ದಾರೆ. ಇನ್ನು ಪ್ರತಿಬಾರಿಯಂತೆ ಈ ವರ್ಷವೂ ಕೂಡ ಅವರು ಗೆಲ್ಲಬೇಕು ಇವರು ಗೆಲ್ಲಬೇಕು ಎಂಬ ಚರ್ಚೆಗಳು ನಡೆಯುತ್ತಿವೆ, ಆದರೆ ಯಾವ ಆಧಾರದ ಮೇರೆಗೆ ಶ್ರೀನಿಧಿ ಶಾಸ್ತ್ರಿಯವರನ್ನು ಗೆಲ್ಲಿಸಲಾಗಿದೆ ಎಂದು ಈ ಬಾರಿ ಜನರು ಭಾರಿ ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೀ ವಾಹಿನಿಯು ಜನರ ಅಭಿಪ್ರಾಯದ ಮೇರಿಗೆ ಫೈನಲ್ನಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಿಂದ ಹಿಡಿದು ವೋ’ಟಿಂಗ್ ಪೋಲ್ ನಲ್ಲಿ ಕೂಡ ಕಂಬದ ರಂಗಯ್ಯ ರವರು ಹೆಚ್ಚು ಮ’ತಗಳನ್ನು ಪಡೆದಿರುವ ಸಾಧ್ಯತೆ ಹೆಚ್ಚಾಗಿದೆ. ಆದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹವಾ ಸೃಷ್ಟಿಸಿರುವ ಕಂಬದ ರಂಗಯ್ಯ ನವರು ಗೆಲ್ಲಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಈತನ್ಮದ್ಯೆ ಜೀ ವಾಹಿನಿಯು ಶ್ರೀನಿಧಿ ಶಾಸ್ತ್ರಿ ಅವರನ್ನು ವಿಜೇತರನ್ನಾಗಿ ಆಯ್ಕೆ ಮಾಡಿದೆ. ಜೀ ವಾಹಿನಿಯ ತೀರ್ಪುಗಾರರ ಆಧಾರದ ಮೇರೆಗೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಖಚಿತಪಡಿಸಿದ್ದರೇ ಬಹುಶಹ ಯಾವುದೇ ವಿವಾದಗಳು ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಜನರ ಅಭಿಪ್ರಾಯದ ಮೇರೆಗೆ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳುತ್ತಿರುವ ಕಾರಣ ಹಾಗೂ ಪ್ರತಿಬಾರಿಯೂ ವೋ’ಟಿಂಗ್ ಪೋಲ್ ಓಪನ್ ಇದೆ ಮ’ತ ನೀಡಿ ಮ’ತ ನೀಡಿ ಎಂದು ಪ್ರೇರೇಪಿಸುವ ಮೂಲಕ ಮ’ತಗಳ ಆಧಾರದ ಮೇರೆಗೆ ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡುವುದು ಎಂಬುದನ್ನು ಜೀ ನಿರೂಪಿಸಲು ಹೊರಟಿದೆ.

ಇದರಿಂದ ಇದೀಗ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪರ ಹಾಗೂ ವಿರೋಧದ ಚರ್ಚೆಗಳು ಎದುರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿಯ ಕುರಿತು ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಅಸಲಿಗೆ ಎಲ್ಲಾ ಫೈನಲ್ ಸ್ಪರ್ದಿಗಳಿಗೆ ಬಂದಿರುವ ಜನರ ಅಭಿಪ್ರಾಯಗಳನ್ನು ಬಹಿರಂಗ ಪಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ಸರಿಗಮಪ ಒಂದು ವಿವಾದದ ಗೂಡಾಗಿ ಮಾರ್ಪಟ್ಟಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ