ಬಯಲಾಯಿತು ಚಿರು ರವರ ಕನ್ನಡದ ಮೇಲಿನ ಪ್ರೀತಿ ! ಕನ್ನಡ ಪ್ರೀತಿಯನ್ನು ಮೆರೆದಿದ್ದ ಚಿರುರವರ ಕಥೆ

ಬಯಲಾಯಿತು ಚಿರು ರವರ ಕನ್ನಡದ ಮೇಲಿನ ಪ್ರೀತಿ ! ಕನ್ನಡ ಪ್ರೀತಿಯನ್ನು ಮೆರೆದಿದ್ದ ಚಿರುರವರ ಕಥೆ

ನಮಸ್ಕಾರ ಸ್ನೇಹಿತರೇ, ನಟ ಚಿರಂಜೀವಿ ಸರ್ಜಾ ರವರು ನಮ್ಮೆಲ್ಲರನ್ನು ಬಿಟ್ಟು ಸ್ವರ್ಗ ಸೇರಿಕೊಂಡ ಬಳಿಕ ಅವರ ಬಗ್ಗೆ ಹಲವಾರು ವಿಷಯಗಳು ತಿಳಿದು ಬರುತ್ತಿವೆ‌. ಇಷ್ಟು ದಿವಸ ಚಿರಂಜೀವಿ ಸರ್ಜಾ ಅವರ ಬಗ್ಗೆ ತಿಳಿಯದ ಹಲವಾರು ಮಾಹಿತಿಗಳು ಇದೀಗ ತಿಳಿಯುತ್ತಿವೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಚಿರಂಜೀವಿ ಸರ್ಜಾರ ರವರು ಅಪ್ಪಟ ದೇಶ ಭಕ್ತರಾಗಿದ್ದರು. ಅದೇ ಕಾರಣಕ್ಕಾಗಿ ತಮ್ಮ ಕೈಮೇಲೆ ರಾಷ್ಟ್ರ ಧ್ವಜವನ್ನು ಹಚ್ಚೆ ಕೂಡ ಹಾಕಿಸಿ ಕೊಂಡಿದ್ದರು (ಎದೆಯ ಮೇಲೆ ತ್ರಿಶೂಲದ ಹಚ್ಚೆ ಕೂಡ ಇತ್ತು.) ಈ ವಿಷಯವನ್ನು ಚಿರಂಜೀವಿ ಸರ್ಜಾ ರವರ ತಾಯಿ ಪೋಸ್ಟ್ ಮಾರ್ಟಂ ಸಂದರ್ಭದಲ್ಲಿ ಬಹಿರಂಗ ಪಡಿಸಿದಾಗಲೇ ಎಲ್ಲರಿಗೂ ತಿಳಿದಿದ್ದು. ಇದಾದ ಬಳಿಕ ಇದೀಗ ಮತ್ತೊಂದು ವಿಷಯ ತಿಳಿದು ಬಂದಿದ್ದು ಚಿರಂಜೀವಿ ಸರ್ಜಾ ರವರು ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು ಎಂಬುದಕ್ಕೆ ಈ ನಿದರ್ಶನವೇ ಉದಾಹರಣೆ.

ನಿಮಗೆ ಹೀಗಾಗಲೇ ತಿಳಿದಿರಬಹುದು, ಚಿರಂಜೀವಿ ಸರ್ಜಾ ರವರು ಚಿತ್ರರಂಗಕ್ಕೆ ನಟರಾಗಿ ಪಾದಾರ್ಪಣೆ ಮಾಡುವ ಮುನ್ನ ಅರ್ಜುನ್ ಸರ್ಜಾ ರವರ ಬಳಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಅರ್ಜುನ್ ಸರ್ಜಾ ರವರು ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾಗಿದ್ದ ಕಾರಣ ಅರ್ಜುನ್ ಸರ್ಜಾ ಅವರ ಕುಟುಂಬದ ಒಂದು ಕುಡಿ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ ಎಂದ ತಕ್ಷಣ ಮಲಯಾಳಂ ಚಿತ್ರರಂಗ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸುವಂತೆ ಚಿರಂಜೀವಿ ಸರ್ಜಾ ರವರಿಗೆ ಬೇಡಿಕೆಗಳು ಕೇಳಿಬಂದಿದ್ದವು ಎಂಬುದು ತಿಳಿದುಬಂದಿದೆ. ಆದರೆ ನಾನು ನಟನಾಗಿ ಪದಾರ್ಪಣೆ ಮಾಡುವುದಾದರೇ ಅದು ಕನ್ನಡ ಚಿತ್ರಕ್ಕಾಗಿ ಮಾತ್ರ, ನನ್ನ ಸಿನಿಮಾ ನಟನೆ ಕನ್ನಡಕ್ಕೆ ಮಾತ್ರ ಸೀಮಿತ ಎಂದು ಖಡಾ ಖಂಡಿತವಾಗಿ ನಿರಾಕರಿಸಿದ್ದರು ಎಂಬುದು ತಿಳಿದು ಬಂದಿದೆ.