ಕೆ ಎಲ್ ರಾಹುಲ್ ಗೆ ಒಲಿದು ಬರಲಿದೆಯೇ ಮಹಾ ಅದೃಷ್ಟ? ಕನ್ನಡಿಗನಿಗೆ ಬಂಪರ್ ಸುದ್ದಿ ಕೊಡಲಿದ್ದಾರಾ ಸೌರವ್ ಗಂಗೂಲಿ ಅಂಡ್ ಟೀಮ್??

ಕೆ ಎಲ್ ರಾಹುಲ್ ಗೆ ಒಲಿದು ಬರಲಿದೆಯೇ ಮಹಾ ಅದೃಷ್ಟ? ಕನ್ನಡಿಗನಿಗೆ ಬಂಪರ್ ಸುದ್ದಿ ಕೊಡಲಿದ್ದಾರಾ ಸೌರವ್ ಗಂಗೂಲಿ?

ನಮಸ್ಕಾರ ಸ್ನೇಹಿತರೇ, ಕೆ ಎಲ್ ರಾಹುಲ್ ರವರು ಇದೀಗ ತಮ್ಮ ಜೀವನದ ಶ್ರೇಷ್ಠ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಏಕದಿನ ಹಾಗೂ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರವೂ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ರವರು ಆಯ್ಕೆಯಾಗಿರಲಿಲ್ಲ.

ಇದರಿಂದ ಅಭಿಮಾನಿಗಳಿಗೆ ಬಾರಿ ನಿರಾಸೆ ಉಂಟಾಗಿತ್ತು, ಆದರೆ ಇದರ ಬೆನ್ನಲ್ಲೇ ಇದೀಗ ತಾನಾಗಿಯೇ ಕೆಎಲ್ ರಾಹುಲ್ ರವರಿಗೆ ಅದೃಷ್ಟ ಒಲಿದು ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ರವರು ತನ್ನ ಹೆಗಲಮೇಲೆ ಹೊರಿಸಿ ಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ ಏನು ಗೊತ್ತಾ ಹಾಗೂ ಇದಕ್ಕೆ ಕಾರಣಗಳೇನು ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವಂತೆ ರೋಹಿತ್ ಶರ್ಮಾ ರವರು ಇದೀಗ ಭಾರತೀಯ ಕ್ರಿಕೆಟ್ ತಂಡದಿಂದ ಗಾಯಾಳುಯಾಗಿ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ ಕೆಲವು ಐಪಿಎಲ್ ಪಂದ್ಯಗಳನ್ನು ಕೂಡ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ, ಮತ್ತೊಂದೆಡೆ ನಾಯಕ ವಿರಾಟ್ ಕೊಹ್ಲಿ ರವರು ನ್ಯೂಜಿಲೆಂಡ್ ಸರಣಿಯ ನಂತರ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ರವರು ಮೊದಲಿಂದಲೂ ಹೊರಗುಳಿದ ಸಮಯದಲ್ಲಿ ರೋಹಿತ್ ಶರ್ಮಾರವರು ನಾಯಕರಾಗಿ ಜವಾಬ್ದಾರಿ ಹೊರುತ್ತಿದ್ದರು. ಆದರೆ ಇದೀಗ ರೋಹಿತ್ ಶರ್ಮಾ ರವರು ಗಾಯದ ಕಾರಣದಿಂದ ಹೊರಗುಳಿದಿರುವ ಕಾರಣ ಕೆಎಲ್ ರಾಹುಲ್ ರವರಿಗೆ ಬಹುತೇಕ ನಾಯಕ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬಂದಿದೆ. ಯಾಕೆಂದರೇ, ಕಳೆದ ನ್ಯೂಜಿಲೆಂಡ್ ತಂಡದ ನಡುವಿನ ಪಂದ್ಯದಲ್ಲಿ ಕೆಎಲ್ ರಾಹುಲ್ ರವರು ಹಂಗಾಮಿ ನಾಯಕರಾಗಿದ್ದರು.

ನಾಯಕತ್ವ ವಹಿಸಬಹುದಾದ ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆ ರವರು ಇಲ್ಲಿಯವರೆಗೂ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕತ್ವ ವಯಿಸ್ಸಿಲ್ಲ, ಇನ್ನುಳಿದಂತೆ ಆರಂಭಿಕ ಆಟಗಾರ ಶಿಖರ್ ಧವನ್ ರವರಿಗೆ ನಾಯಕತ್ವದ ಪಾತ್ರವಹಿಸಿದ ಯಾವುದೇ ಅನುಭವ ಆಗಿಲ್ಲ. ಅಷ್ಟೇ ಅಲ್ಲದೇ ನಾಯಕನಾಗಿಯೂ ಕೂಡ ಉತ್ತಮ ನಿರ್ಧಾರಗಳನ್ನು ಫೀಲ್ಡ್ನಲ್ಲಿ ರಾಹುಲ್ ರವರು ತೆಗೆದುಕೊಂಡ ಕಾರಣ ಇದೀಗ ಬಹುತೇಕ ನಾಯಕ ಸ್ಥಾನಕ್ಕೆ ಕೆ ಎಲ್ ರಾಹುಲ್ ರವರು ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.