ಉದ್ದ ನಾಮ ಹಾಕಿಸಿಕೊಳ್ಳುವವರು ರಾಕ್ಷಸರಂತೆ ಕಾಣುತ್ತಾರೆ ಎಂದಿದ್ದ ಸಿದ್ದರಾಮಯ್ಯ ರವರು ಇಂದು ಮಾಡಿದ್ದೇನು ಗೊತ್ತಾ??

ಈ ಹಿಂದೆ ಕೆಲವು ವರ್ಷಗಳ ಹಿಂದೆ ಸಿ.ಟಿ ರವಿ ರವರಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ರವರು ಉದ್ದ ನಾಮ ಇಟ್ಟು ಕೊಳ್ಳುವವರ ಬಗ್ಗೆ ಮಾತನಾಡಿದ್ದರು. ಉದ್ದ ನಾಮ ಹಾಕಿಸಿ ಕೊಳ್ಳುವವರು ನನಗೆ ರಾಕ್ಷಸರಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು.

ಅಂದಿನಿಂದ ಯಾವುದೇ ಕ್ಷೇತ್ರದ ಕಾಮಗಾರಿ, ಭೂಮಿ ಪೂಜೆ ಮಾಡುವ ವೇಳೆಯಲ್ಲಿ ಅರ್ಚಕರು ಸಿದ್ದರಾಮಯ್ಯ ರವರಿಗೆ ನಾಮ ಇಡಲು ಬಂದರೇ ಅಯ್ಯೋ ನನಗೆ ನಾಮ ಕಂಡರೆ ಭಯ. ನಾನು ನಾಮ ಹಚ್ಚಿ ಕೊಳ್ಳುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಿದ್ದರು. ಅಷ್ಟೇ ಯಾಕೆ ಅವರ ಅಭಿಮಾನಿಗಳು ಆರತಿ ಬೆಳಗಿ ಹಣೆಗೆ ಕುಂಕುಮ ಇಡಲು ಬಂದರೇ ನನಗೆ ನಾಮ ಕಂಡರೆ ಭಯವಾಗುತ್ತದೆ ಎಂದು ನಾಮ ಇಡಿಸಿ ಕೊಳ್ಳುತ್ತಿರಲಿಲ್ಲ. ಇದೇ ವಿಚಾರವಾಗಿ ಸಿಟಿ ರವಿ ರವರಿಗೆ ತಿರುಗೇಟು ನೀಡುವ ವಿಷಯದಲ್ಲಿ ಉದ್ದ ನಾಮ ಹಾಕಿ ಕೊಳ್ಳುವವರು ನನಗೆ ರಾಕ್ಷಸರಂತೆ ಕಾಣುತ್ತಾರೆ, ಉದ್ದ ನಾಮ ಹಾಕಿಕೊಳ್ಳುವರನ್ನು ಕಂಡರೆ ನನಗೆ ಭಯವಾಗುತ್ತದೆ, ಅದೇ ಆ ರವಿ ಇಟ್ಟುಕೊಳ್ಳುತ್ತಾನಲ್ಲ ಅದೇ ರೀತಿ ನಾಮ ಇಟ್ಟು ಕೊಳ್ಳುವವರು ಎಂದು ಹೇಳಿಕೆ ನೀಡುವ ಮೂಲಕ ಮತ್ತಷ್ಟು ವಿವಾದವನ್ನು ಸೃಷ್ಟಿಸಿದ್ದರು.

ಆದರೆ ಇದ್ದಕ್ಕಿದ್ದ ಹಾಗೆ ಸಿದ್ದರಾಮಯ್ಯ ರವರು ಬದಲಾದಂತೆ ಕಾಣುತ್ತಿದೆ, ತಮ್ಮ ಸ್ವಕ್ಷೇತ್ರವಾದ ಬಾದಾಮಿಯಲ್ಲಿ ಇಂದು ಸಿದ್ದರಾಮಯ್ಯ ರವರು ಬೃಹತ್ ಕುಡಿಯುವ ನೀರಿನ ಯೋಜನೆಗೆ‌ ಶಂಕು ಸ್ಥಾಪನೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅದೇ ಸಮಯದಲ್ಲಿ ಅರ್ಚಕರು ಪೂಜೆ ಮಾಡಿ ಕುಂಕುಮ ಇಡಲು ಬಂದಾಗ ಸಿದ್ದರಾಮಯ್ಯ ರವರು ಮತ್ತೊಮ್ಮೆ ಬೇಡ ಎನ್ನುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರೂ ಆದರೆ, ಸಿದ್ದರಾಮಯ್ಯ ರವರು ಮರು ಮಾತನಾಡದೆ ಅರ್ಚಕರಿಂದ ನಾಮ ಹಚ್ಚಿಸಿ ಕೊಂಡರು. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.