ದೀಪಿಕಾ JNU ಭೇಟಿಗೆ ಖಡಕ್ ಪ್ರತಿಕ್ರಿಯೆ ನೀಡಿದ ಕಂಗನಾ ! ಹೇಳಿದ್ದೇನು ಗೊತ್ತಾ??

ದೀಪಿಕಾ JNU ಭೇಟಿಗೆ ಖಡಕ್ ಪ್ರತಿಕ್ರಿಯೆ ನೀಡಿದ ಕಂಗನಾ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ದೀಪಿಕಾ ರವರ ಒಂದು ನಡೆ ಇಡೀ ದೇಶದಲ್ಲಿ ತಲ್ಲಣವನ್ನು ಸೃಷ್ಟಿಸಿತು. ಸದಾ ಬಾಕ್ಸಾಫೀಸ್ ನಲ್ಲಿ ಕೋಟ್ಯಾಂತರ ರೂ ಬಾಚುತ್ತಿದ್ದ ದೀಪಿಕಾ ರವರ ಸಿನಿಮಾ ಕಂಡು ಕೇಳರಿಯದ ರೀತಿಯಲ್ಲಿ ಕಳೆದ 9 ವರ್ಷಗಳಲ್ಲಿಯೇ ಅತಿ ಕಡಿಮೆ ಓಪನಿಂಗ್ ಮೊತ್ತವನ್ನು ಕಲೆ ಹಾಕಿತ್ತು.

ಅಷ್ಟೇ ಅಲ್ಲದೆ ದೀಪಿಕಾ ರವರ ಜಾಹೀರಾತುಗಳು ಬಹುತೇಕ ಚಾನಲ್ ಗಳಲ್ಲಿ ನಿಂತು ಹೋಗಿವೆ, ಮುಂದಿನ ಆದೇಶ ದವರೆಗೂ ತಮ್ಮ ತಮ್ಮ ಜಾಹೀರಾತುಗಳನ್ನು ಪ್ರದರ್ಶನ ಮಾಡದಂತೆ ಟಿವಿ ಚಾನೆಲ್ ಗಳಿಗೆ ಕಂಪನಿಗಳು ಸೂಚನೆ ನೀಡಿವೆ. ಎಂದಿನಂತೆ ದೀಪಿಕಾ ರವರ ಈ ನಡೆ ಹಲವಾರು ಜನರ ಕೆಂಗಣ್ಣಿಗೆ ಗುರಿಯಾದರೇ ಮತ್ತೊಂದೆಡೆ ಯಿಂದ ಪ್ರಕಾಶ್ ರೈ, ನಟ ಸಿದ್ದಾರ್ಥ್ ಹಾಗೂ ಕನ್ನಯ್ಯ ಕುಮಾರ್ ಸೇರಿದಂತೆ ಹಲವಾರು ಜನ ದೀಪಿಕಾ ರವರ ಪರವಾಗಿ ಧ್ವನಿ ಎತ್ತಿದ್ದಾರೆ. ಮತ್ತೊಂದೆಡೆ ಬಾಲಿವುಡ್ ನಟ-ನಟಿಯರು ಕೂಡ ದೀಪಿಕಾ ರವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಇದೀಗ ಇವರ ಸಾಲಿಗೆ ಸದಾ ದೇಶ ಹಾಗೂ ದೇಶದ ಸೈನಿಕರ ಪರ ಧ್ವನಿ ಎತ್ತುವ ಕಂಗನಾ ರಾಣಾವತ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯದ ಕುರಿತು ಕಂಗನಾ ರಾಣಾವತ್ ರವರ ಪ್ರತಿಕ್ರಿಯೆ ತಿಳಿಯಲು ಕೆಳಗಡೆ ಓದಿ ‌

ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿರುವ ಕಂಗನಾ ರಾಣಾವತ್ ರವರು ದೀಪಿಕಾ ಪಡುಕೋಣೆ ರವರು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ನಾನು ಹೇಳಲು ಸಾಧ್ಯವಿಲ್ಲ. ಆದರೆ ಯಾರೇ ಆಗಲಿ ತಮ್ಮ ದೇಶದಲ್ಲಿ ಯೋಧರ ಸಾವನ್ನು ಸಂಭ್ರಮಿಸಿ, ತಮಗೆ ಆಶ್ರಯ ನೀಡಿರುವ ದೇಶ ವಿರೋಧಿ ಘೋಷಣೆ ಕೂಗುವ ಯಾವುದೇ ಜನರನ್ನು ನಾನು ಬೆಂಬಲಿಸುವುದಿಲ್ಲ ಹಾಗೂ ಎಂದಿಗೂ ನಾನು ದೇಶದ್ರೋಹಿಗಳ ಜೊತೆ ಯಾವುದೇ ಕಾರಣಕ್ಕೂ ನಿಲ್ಲಲಾರೆ ಎಂದಿದ್ದಾರೆ, ಈ ಮೂಲಕ ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರ ನಡೆಗೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಸೂಚಿಸಿದ್ದಾರೆ. ಇವರ ಹೇಳಿಕೆಗಳಿಗೆ ಪರ ವಿರೋಧದ ಚರ್ಚೆ ಇದೀಗ ಹೆಚ್ಚಾಗಿದ್ದು, ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.