ಬಿಜೆಪಿಯಲ್ಲಿ ಭಿನ್ನಮತ ಬಿತ್ತು ಮೊದಲ ವಿಕೆಟ್ ರಾಜೀನಾಮೆ ಘೋಷಣೆ ಮಾಡಿದ ಸಚಿವ

ಬಿಜೆಪಿಯಲ್ಲಿ ಭಿನ್ನಮತ ಬಿತ್ತು ಮೊದಲ ವಿಕೆಟ್ ರಾಜೀನಾಮೆ ಘೋಷಣೆ ಮಾಡಿದ ಸಚಿವ

ಇದೀಗ ಕೊನೆಗೂ ಬಿಜೆಪಿ ಪಕ್ಷವು ಸಚಿವ ಸಂಪುಟವನ್ನು ವಿಸ್ತರಣೆ ಮಾಡಿ ಎಲ್ಲಾ ಸಚಿವರಿಗೂ ಖಾತೆ ನೀಡಿದೆ. ಮೊದಲಿನಿಂದಲೂ ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿ ಪಕ್ಷವು ಇದೀಗ ತನ್ನ ಶಿಸ್ತಿನ ಹಾದಿಯನ್ನು ಬದಲಾಯಿಸಿ ಸಾಮಾನ್ಯ ಪಕ್ಷದಂತೆ ನಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಖಾತೆ ಹಂಚಿಕೆಯ ಬೆನ್ನಲ್ಲೇ ಈಗಾಗಲೇ ಮೊದಲ ವಿಕೆಟ್ ಪತನವಾಗಿದೆ, ಹೈಕಮಾಂಡ್ ಹಾಗೂ ಬಿ ಎಸ್ ಯಡಿಯೂರಪ್ಪನವರು ಸೇರಿ ತೆಗೆದುಕೊಂಡಿರುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಪಕ್ಷದ ಪ್ರಮುಖ ಶಾಸಕರಲ್ಲಿ ಒಬ್ಬರಾಗಿರುವ ಈ ನಾಯಕ ರಾಜೀನಾಮೆ ನೀಡಿರುವುದರಿಂದ ಬಿಜೆಪಿ ಪಕ್ಷದಲ್ಲಿ ಮತ್ತಷ್ಟು ಭಿನ್ನಮತ ಭುಗಿಲೇಳುವ ಸಾಧ್ಯತೆಗಳು ಹೆಚ್ಚಾಗಿವೆ. ಅಷ್ಟಕ್ಕೂ ಆ ನಾಯಕ ಯಾರು ಗೊತ್ತಾ??

ಪ್ರಮುಖ ಖಾತೆಯ ನಿರೀಕ್ಷಣೆ ಯಲ್ಲಿ ಇದ್ದ ಸಿಟಿ ರವಿ ರವರಿಗೆ ಇದೀಗ ಬಿಜೆಪಿ ಪಕ್ಷದ ವರಿಷ್ಠರು ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿಯ ಇಲಾಖೆಯ ಖಾತೆ ನೀಡಲಾಗಿದೆ. ಇದರಿಂದ ಸಿ ಟಿ ರವಿ ರವರು ಅಕ್ಷರಸಹ ಅಸಮಾಧಾನಗೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ, ಈ ಕುರಿತು ಮಾತನಾಡಿರುವ ಸಿ ಟಿ ರವಿ ರವರು ಸುವರ್ಣ ನ್ಯೂಸ್ ಚಾನಲ್ ನಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು ನಾನು ಬೇರೆ ಖಾತೆಯ ನಿರೀಕ್ಷೆಯಲ್ಲಿದ್ದೆ, ಆದರೆ ಬಿಜೆಪಿ ಪಕ್ಷದ ಹೈಕಮಾಂಡ್ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಖಾತೆ ನೀಡಿದೆ ಇದರಿಂದ ಅಸಮಾಧಾನಗೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಖಚಿತಪಡಿಸಿದ್ದಾರೆ.