ಬಿಎಸ್ ವೈ ಪುತ್ರನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಗೂಳಿಹಟ್ಟಿ ಡಿ ಶೇಖರ್ ! ಆರೋಪ ಮಾಡಿದ್ದೇನು ಗೊತ್ತಾ??

ಬಿಎಸ್ ವೈ ಪುತ್ರನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಗೂಳಿಹಟ್ಟಿ ಡಿ ಶೇಖರ್ ! ಆರೋಪ ಮಾಡಿದ್ದೇನು ಗೊತ್ತಾ??

ಇತ್ತೀಚೆಗಷ್ಟೇ  ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನದ ಧ್ವನಿಯೆತ್ತಿದ ಗೂಳಿಹಟ್ಟಿ ಡಿ  ಶೇಖರ್ ರವರು ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ನೇರವಾಗಿ ಬಿಜೆಪಿ ಪಕ್ಷದ ಯುವ ನಾಯಕ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ರಾಘವೇಂದ್ರ ರವರ ವಿರುದ್ಧ ಹೊಸ ಬಾಂಬ್ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಸಚಿವ ಸ್ಥಾನ ಸಿಗದೆ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದ ಗೂಳಿಹಟ್ಟಿ ಡಿ  ಶೇಖರ ರವರ ಈ ಹೇಳಿಕೆ ಹಾಗೂ ನಡೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ಹೊರ ಹಾಕಿ ಮಾಧ್ಯಮಗಳ ಮುಂದೆ ಬಿ ವೈ ರಾಘವೇಂದ್ರ ರವರ ವಿರುದ್ಧ ಧ್ವನಿಯೆತ್ತಿದ್ದು ಯಾಕೆ ಗೊತ್ತಾ?ತಿಳಿಯಲು ಕೆಳಗಡೆ ಓದಿ.

ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವ ಸಮಯದಲ್ಲಿ ಬಿಜೆಪಿ ಪಕ್ಷದ ಶಾಸಕರಿಗೆ ಉತ್ತಮ ಅನುದಾನ ನೀಡಿದರು, ಆದರೆ ಹೊಸದುರ್ಗ ಕ್ಷೇತ್ರಕ್ಕೆ ಮಾತ್ರ ನೀಡಲಿಲ್ಲ. ಆದರೂ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಅಪಪ್ರಚಾರ ಮಾಡಲಾಯಿತು. ಈಗ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಸಹ ಅನುದಾನ ನೀಡಿಲ್ಲ, ಅಷ್ಟೇ ಅಲ್ಲದೆ, ಹೊಸದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಿಎಸ್ಐ ವರ್ಗಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ರವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ನಾನು ಐಜಿಪಿಗೆ ದೂರವಾಣಿ ಕರೆ ಮಾಡಿ ವಿಚಾರಣೆ ಮಾಡಿದೆ. ಮುಖ್ಯಮಂತ್ರಿ ಕಚೇರಿಯ ಸೂಚನೆ ಮೇರೆಗೆ ಸ್ಥಳ ಕಾಯ್ದಿರಿಸಿರುವುದಾಗಿ ಐಜಿಪಿ ಹೇಳಿದ್ದಾರೆ, ವಿಧಾನಸಭಾ ಕ್ಷೇತ್ರದ ಸರ್ಕಾರೀ  ಅಧಿಕಾರಿಗಳ ವರ್ಗಾವಣೆ ಕೂಡ ಶಿವಮೊಗ್ಗ ಸಂಸದರ ಮಾತಿನಂತೆ ನಡೆಯುತ್ತದೆ ಎಂದು ಬೇಸರವನ್ನು ಬೆಂಬಲಿಗರ ಸಭೆಯಲ್ಲಿ ಹೊರಹಾಕಿದ್ದಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.