ರೇಣುಕಾಚಾರ್ಯ ರವರ ಪರ ಬ್ಯಾಟ್ ಬೀಸಿದ ಮಾಧುಸ್ವಾಮಿ ! ಹೇಳಿದ್ದೇನು ಗೊತ್ತಾ??

ರೇಣುಕಾಚಾರ್ಯ ರವರ ಪರ ಬ್ಯಾಟ್ ಬೀಸಿದ ಮಾಧುಸ್ವಾಮಿ ! ಹೇಳಿದ್ದೇನು ಗೊತ್ತಾ??

ಇದೀಗ ಸಚಿವ ಸ್ಥಾನ ತನಗೆ ನೀಡಿಲ್ಲ ಎಂದು ರೇಣುಕಾಚಾರ್ಯ ರವರು ಅಸಮಾಧಾನವನ್ನು ಹೊರಹಾಕಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೇವಲ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿಲ್ಲ ಎಂದು ಹೇಳಿಕೆ ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದ ರೇಣುಕಾಚಾರ್ಯ ರವರು ಒಂದು ವೇಳೆ ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಘೋಷಣೆ ಮಾಡಿದರು. ಇದರಿಂದ ಬಿಜೆಪಿ ಪಕ್ಷದಲ್ಲಿ ಕೊಂಚ ಬಿಗುವಿನ ವಾತಾವರಣ ಉಂಟಾಗಿದ್ದು ಸುಳ್ಳಲ್ಲ, ಇದೀಗ ಇದೇ ವಿಚಾರವಾಗಿ ಬಿಜೆಪಿ ಪಕ್ಷದ ಮತ್ತೊಬ್ಬ ಸಚಿವ ಹಾಗೂ ಶಾಸಕರಾಗಿರುವ ಮಾಧುಸ್ವಾಮಿ ರವರು ದನಿಯೆತ್ತಿದ್ದಾರೆ. ಸಚಿವ ಸ್ಥಾನ ಸಿಕ್ಕಮೇಲೆ ಮಾಧುಸ್ವಾಮಿ ರವರ ಹೇಳಿಕೆ ಭಾರೀ ಆಶ್ಚರ್ಯ ಮೂಡಿಸಿದೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ??

ರೇಣುಕಾಚಾರ್ಯ ರವರು ಬಿಜೆಪಿ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ, ಅವರನ್ನು ಪಕ್ಷದಿಂದ ಹೊರಗೆ ಹೋಗಲು ಬಿಡಲು ಸಾಧ್ಯವೇ?? ಅವರನ್ನು ಜೊತೆಗೆ ಇಟ್ಟುಕೊಳ್ಳುವ ಶಕ್ತಿ ನಮಗೆ ಇದೆ. ಒಂದು ವೇಳೆ ನನಗೆ ಸಚಿವ ಸ್ಥಾನ ಸಿಗದೇ ಇದ್ದರೆ ನಾನು ಕೂಡ ರೇಣುಕಾಚಾರ್ಯ ರವರ ರೀತಿ ಮಾತನಾಡುತ್ತಿದ್ದೆ, ಅವರು ಮಾತನಾಡುತ್ತಿರುವುದುರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಪಕ್ಷದಲ್ಲಿ ಗೆದ್ದು ಬಂದವರೆಲ್ಲರೂ ಸಚಿವ ಸ್ಥಾನದ ಅರ್ಹತೆ ಉಳ್ಳವರಾಗಿದ್ದಾರೆ. ಆದರೆ ಎಲ್ಲರಿಗೂ ಸಚಿವ ಸ್ಥಾನ ಸಿಗುವುದಿಲ್ಲ, ಜಿಲ್ಲೆಯ ಹಾಗೂ ಜನಾಂಗದ ಬಗ್ಗೆ ಆಲೋಚನೆ ಮಾಡಿ ಸಚಿವ ಸ್ಥಾನವನ್ನು ಹಂಚ ಬೇಕಾಗಿದೆ. ಇಲ್ಲದಿದ್ದರೆ ಪಕ್ಷ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಹಲವಾರು ಕಾರಣಗಳಿರುತ್ತವೆ, ಯಾರನ್ನು ಪಕ್ಷವು ಮಣಿಯಲು ಮುಂದಾಗಿಲ್ಲ, ಅವರನ್ನು ಮಣಿಸಲಾಗದೆ ಇವರನ್ನು ಮಣಿಸಲಾಗಿದೆ ಎಂಬ ಸುದ್ದಿಗಳೆಲ್ಲ ಸುಳ್ಳು. ಆಡಳಿತವನ್ನು ನೋಡಿಕೊಳ್ಳುವುದರ ಜೊತೆಗೆ ಪಕ್ಷ ಸಂಘಟನೆ ಸಹ ಮಾಡಬೇಕು ಹಾಗಾಗಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಏನೇ ಗೊಂದಲಗಳಿದ್ದರೂ, ಅವುಗಳನ್ನು ಸರಿಪಡಿಸುತ್ತಾರೆ ಎಂದರು.