ಸಾವಿನಲ್ಲೂ ಆದರ್ಶತೆ ಮೆರೆದ ಅರುಣ್ ಜೇಟ್ಲಿ ಕುಟುಂಬ ! ಮಾಡಿದ್ದೇನು ಗೊತ್ತಾ??

ಸಾವಿನಲ್ಲೂ ಆದರ್ಶತೆ ಮೆರೆದ ಅರುಣ್ ಜೇಟ್ಲಿ ಕುಟುಂಬ ! ಮಾಡಿದ್ದೇನು ಗೊತ್ತಾ??

ಭಾರತದ ಖ್ಯಾತ ಹಣಕಾಸು ಸಚಿವರು ಸಾಲಿನಲ್ಲಿ ಮೊದಲಿಗರಾಗಿ ಕಂಡುಬರುವ ಅರುಣ್ ಜೇಟ್ಲಿ ರವರು ನಮ್ಮೆಲ್ಲರನ್ನು ಅಗಲಿದ್ದಾರೆ. ಮೊದಲಿನಿಂದಲೂ ಹೋರಾಟವನ್ನು ತನ್ನ ಪ್ರವೃತ್ತಿಯಾಗಿ ಮಾಡಿಕೊಂಡು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದು, ದೇಶದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿ ಇಡೀ ದೇಶವನ್ನು ವಿಶ್ವ ಮಟ್ಟದಲ್ಲಿ ತನ್ನದೇ ಆದ ಆರ್ಥಿಕತೆಯ ನೀತಿಗಳ ಮೂಲಕ ಗುರುತಿಸಿಕೊಳ್ಳುವಂತೆ ಮಾಡಿದ್ದ ಅರುಣ್ ಜೇಟ್ಲಿ ರವರು ಇದೀಗ ಸ್ವರ್ಗದ ಕದ ತಟ್ಟಿದ್ದಾರೆ. ಹೀಗಿರುವಾಗ ಅರುಣ್ ಜೇಟ್ಲಿ ರವರ ಸಾವಿನ ನೋವಿನಲ್ಲಿ ಯೂ ಸಹ ಅರುಣ್ ಜೇಟ್ಲಿ ರವರ ಕುಟುಂಬ ಆದರ್ಶವನ್ನು ಮೆರೆದಿದೆ. ಈ ಮೂಲಕ ಅರುಣ್ ಜೇಟ್ಲಿ ಹಾಗೂ ಕುಟುಂಬ ದೇಶವೇ ಮೊದಲು ಎಂಬುದನ್ನು ಸಾಬೀತುಪಡಿಸಿದೆ.

ಹೌದು, ಅರುಣ್ ಜೇಟ್ಲಿ ರವರ ನಿಧನದ ಕುರಿತು ವಿಷಯ ತಿಳಿಯುತ್ತಿದ್ದಂತೆ ನರೇಂದ್ರ ಮೋದಿಯವರು ವಿದೇಶಿ ಪ್ರವಾಸದಲ್ಲಿ ಇದ್ದ ಕಾರಣ ಮೊದಲು ಕುಟುಂಬದ ಜೊತೆ ಫೋನಿನಲ್ಲಿ ಸಮಾಧಾನ ಮಾಡಿ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ಸು ಬರುವುದಾಗಿ ಹೇಳಿದರು. ಆದರೆ ನರೇಂದ್ರ ಮೋದಿ ಅವರ ಈ ವಿದೇಶಿ ಪ್ರವಾಸ ಹಲವಾರು ಒಪ್ಪಂದಗಳ ಅಡಿಪಾಯವಾಗಿದೆ ಹಾಗೂ ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುವ ಸಾಧ್ಯತೆಗಳು ಹೆಚ್ಚಾಗಿವೆ. ಆದ ಕಾರಣದಿಂದ ಈ ವಿದೇಶಿ ಪ್ರವಾಸದ ಮಹತ್ವವನ್ನು ಅರಿತಿದ್ದ ಅರುಣ್ ಜೇಟ್ಲಿ ರವರ ಪತ್ನಿ ಹಾಗೂ ಪುತ್ರ ನರೇಂದ್ರ ಮೋದಿ ರವರಿಗೆ ನಮಗೆ ದೇಶವೇ ಮೊದಲು, ನೀವು ದಯವಿಟ್ಟು ಯಾವುದೇ ಕಾರಣಕ್ಕೂ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಗೆಳೆಯನನ್ನು ಕಳೆದುಕೊಂಡ ನೋವಿನಲ್ಲಿ ಇದ್ದ ನರೇಂದ್ರಮೋದಿ ರವರು ಕುಟುಂಬದ ಈ ಬೇಡಿಕೆಯನ್ನು ಈಡೇರಿಸಿದ್ದಾರೆ.