ಬಿಗ್ ನ್ಯೂಸ್: ಅಮಿತ್ ಶಾ ಗ್ರೀನ್ ಸಿಗ್ನಲ್ ! ಬಿಎಸ್ವೈ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ !

ಬಿಗ್ ನ್ಯೂಸ್: ಅಮಿತ್ ಶಾ ಗ್ರೀನ್ ಸಿಗ್ನಲ್ ! ಬಿಎಸ್ವೈ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ !

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪ ನವರು ಇಂದು ಇದ್ದಕ್ಕಿದ್ದ ಹಾಗೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಕಡೆ ಸ್ಪಷ್ಟ ಬಹುಮತ ಸಾಬೀತಾದ ಮೇಲೆ ಬಿಜೆಪಿ ಪಕ್ಷ ಸರ್ಕಾರ ರಚಿಸಿದೇ ಇರುವ ಕಾರಣ ಕುಮಾರಸ್ವಾಮಿ ರವರು ಮತ್ತೊಮ್ಮೆ ಅತೃಪ್ತರ ಮನವೊಲಿಸಲು ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ ಒಂದು ವೇಳೆ ಜುಲೈ 30ರ ವರೆಗೂ ಯಾವುದೇ ಸರ್ಕಾರ ರಚನೆ ಯಾಗದಲ್ಲಿ, ಮಧ್ಯಂತರ ಚುನಾವಣೆ ಅಥವಾ ರಾಷ್ಟ್ರಪತಿ ಆಡಳಿತ ಎದುರಾಗಬಹುದು ಎಂದು ಸಿದ್ದರಾಮಯ್ಯ ಸೇರಿದಂತೆ ಹಲವಾರು ಹಿರಿಯ ರಾಜಕಾರಣಿಗಳು ಹಾಗೂ ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದರು. ಇದೀಗ ಈ ಎಲ್ಲ ರಾಜಕಾರಣಿಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಯಡಿಯೂರಪ್ಪನವರು ಬೆಳ್ಳಂ ಬೆಳಗ್ಗೆ ಮಾಧ್ಯಮಗಳೊಂದಿಗೆ ತಾವು ರಾಜ್ಯಪಾಲರ ಭೇಟಿಗೆ ತೆರಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು ಇಂದು ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿರುವ ಬಿಎಸ್ ಯಡಿಯೂರಪ್ಪನವರು, ಇತ್ತೀಚಿಗಷ್ಟೇ ಬಹುಮತ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಪರ ಸಾಬೀತಾದ ಕಾರಣವನ್ನು ಮುಂದಿಟ್ಟುಕೊಂಡು ಈಗಾಗಲೇ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷನಾಗಿರುವ ಕಾರಣ ಮತ್ತೊಮ್ಮೆ ಬಿಜೆಪಿ ಪಕ್ಷದ ಕಡೆಯಿಂದ ಯಾವುದೇ ಶಾಸಕಾಂಗ ಸಭೆ ನಡೆಸುವ ಅಗತ್ಯವಿಲ್ಲ ಎಂಬ ನಿರ್ಧಾರ ಮಾಡಿ ಇಂದು ಮಧ್ಯಾಹ್ನ 12 ಮೂವತ್ತರ ವೇಳೆಗೆ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಡುವಂತೆ ರಾಜ್ಯಪಾಲರ ಬಳಿ ಮನವಿ ಮಾಡಲಿದ್ದಾರೆ. ಇದೊಂದು ದಿಡೀರ್ ನಿರ್ಧಾರವಾಗಿರುವಂತೆ ರಾಜ್ಯಪಾಲರು ಕೇವಲ ಎರಡು-ಮೂರು ಗಂಟೆಗಳಲ್ಲಿ ಪ್ರಮಾಣವಚನಕ್ಕೆ ಅನುವು ಮಾಡಿಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಇದು ನಿರ್ಧಾರದ ಮೂಲಕ ದೋಸ್ತಿ ಪಕ್ಷಗಳಿಗಿಂತ ಕೊನೆಯ ದಾರಿಯನ್ನು ಯಡಿಯೂರಪ್ಪನವರು ಮುಚ್ಚಿದ್ದಾರೆ.