ಕುಮಾರಸ್ವಾಮಿ ರವರಿಗೆ ಮರ್ಮಾಘಾತ ! 24ಗಂಟೆಗಳಲ್ಲಿ ಬಿ ಎಸ್ ವೈ ಮುಖ್ಯಮಂತ್ರಿ ಯಾಗುವುದು ಖಚಿತ !

ಕುಮಾರಸ್ವಾಮಿ ರವರಿಗೆ ಮರ್ಮಾಘಾತ ! 24ಗಂಟೆಗಳಲ್ಲಿ ಬಿ ಎಸ್ ವೈ ಮುಖ್ಯಮಂತ್ರಿ ಯಾಗುವುದು ಖಚಿತ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಕೆಲವು ದಿನಗಳ ಹಿಂದೆ ಸ್ವತಹ ರಾಜ್ಯದ ಮುಖ್ಯಮಂತ್ರಿಗಳಾಗಿ ಇರುವ ಕುಮಾರಸ್ವಾಮಿರವರ ನಾನು ಶುಕ್ರವಾರದಂದು ವಿಶ್ವಾಸಮತ ಸಾಬೀತು ಪಡಿಸುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಪಕ್ಷಕ್ಕೆ ವಾದ ಮಾಡುವ ಅವಕಾಶವೇ ನೀಡಿರಲಿಲ್ಲ. ಕುಮಾರಸ್ವಾಮಿರವರ ಈ ನಡೆ ಕೊಂಡು ಬಿಜೆಪಿ ಪಕ್ಷವು ಆತಂಕದಲ್ಲಿ ಮುಳುಗುವಂತೆ ಮಾಡಿತ್ತು, ಒಂದು ವೇಳೆ ಆಪರೇಷನ್ ಜೆಡಿಎಸ್ ಎಂಬ ಹೆಸರಿನಲ್ಲಿ ಬಿಜೆಪಿ ಪಕ್ಷದ ಶಾಸಕರನ್ನು ಸೆಳೆಯಲಾಗಿದೆಯೇ ಎಂಬ ಅನುಮಾನ ಮೂಡಿತ್ತು. ಆದರೆ ಇಂದು ಕುಮಾರಸ್ವಾಮಿ ರವರು ವಿಶ್ವಾಸಮತ ಸಾಬೀತು ಮಾಡದೆ, ಸುಪ್ರೀಂಕೋರ್ಟ್ನ ವಿಚಾರಗಳು ಹಾಗೂ ಇನ್ನಿತರ ವಿಚಾರಗಳಲ್ಲಿ ಕಾಲಹರಣ ಮಾಡಲು ಪ್ರಯತ್ನಪಟ್ಟಿದ್ದು ಎಲ್ಲರಿಗೂ ತಿಳಿದಿರುವ ವಿಷಯ.

ಇನ್ನು ಸಂಜೆಯ ಹೊತ್ತಿಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದರೂ ಸಹ ಮಾನ್ಯ ಸ್ಪೀಕರ್ ರವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಎಲ್ಲ ನಾಯಕರಿಗೂ ಮಾತನಾಡುವ ಅವಕಾಶ ಸಿಗಬೇಕು ತದನಂತರ ವಷ್ಟೆ ವಿಶ್ವಾಸಮತ ಮಂಡಿಸಬೇಕೋ ಇಲ್ಲವೋ ಎಂಬುದನ್ನು ನಿರ್ಧಾರ ಮಾಡುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಬಿಜೆಪಿ ಪಕ್ಷದ ನಾಯಕರು ಈಗಲೂ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇದೀಗ ರಾಜ್ಯಪಾಲರು ಸ್ಪೀಕರ್ ಅವರ ನಡೆಯಿಂದ ಕೆಂಡಾಮಂಡಲವಾಗಿದ್ದು ಕುಮಾರಸ್ವಾಮಿ ರವರಿಗೆ ನೇರವಾಗಿ ಪತ್ರದ ಮೂಲಕ ನಾಳೆ 1:30 ರ ಒಳಗೆ ವಿಶ್ವಾಸಮತ ಸಾಬೀತುಪಡಿಸಲು ಆದೇಶ ಪಡಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಗಳು ಈ ಆದೇಶ ಮೀರಿದಲ್ಲಿ ರಾಜ್ಯದಲ್ಲಿ ರಾಜಕೀಯ ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ.