ಹಿಮಾದಾಸ್ ಗೆದ್ದ ಹಣವನ್ನು ಏನು ಮಾಡಿದರು ಗೊತ್ತಾ?? ತಿಳಿದರೆ ಸಲಾಂ ಹೊಡೆಯುತ್ತೀರಾ !!

ಹಿಮಾದಾಸ್ ಗೆದ್ದ ಹಣವನ್ನು ಏನು ಮಾಡಿದರು ಗೊತ್ತಾ?? ತಿಳಿದರೆ ಸಲಾಂ ಹೊಡೆಯುತ್ತೀರಾ !!

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಭಾರತದ ಚಿನ್ನದ ಓಟಗಾರ್ತಿ ಎಂದೇ ಖ್ಯಾತಿ ಪಡೆದು ಕೊಂಡಿರುವ ಹಿಮಾದಾಸ್ ರವರು ಕಳೆದ ಎರಡು ವಾರಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ ಮೂರು ಚಿನ್ನದ ಪದಕಗಳನ್ನು ಭಾರತದ ಮುಡಿಗೆರಿಸಿದ್ದಾರೆ. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿ ಬೆಳೆದ ಹಿಮ ದಾಸ್ ರವರು ಅಥ್ಲೆಟ್ ಆಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ಹಲವು ಬಾರಿ ಬರಿಗಾಲಿನಲ್ಲಿ ಟ್ರ್ಯಾಕ್ ಮೇಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಇಂದು ಭಾರತ ದೇಶವನ್ನು ಪ್ರತಿನಿಧಿಸುವಂತಹ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹೀಗಿರುವಾಗ ಇಷ್ಟು ದಿವಸ ಬಡತನದಲ್ಲಿ ಬೆಳೆದ ಹಿಮ ದಾಸ್ ಅವರು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದರು. ಈ ಬದುಕು ಕಟ್ಟಿಕೊಳ್ಳುವ ದಾರಿಯಲ್ಲಿ ಹಿಮಾ ದಾಸ್ ರವರು ಮತ್ತೊಂದು ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಆದರೆ ವಿಪರ್ಯಾಸವೆಂದರೆ ಈ ಸುದ್ದಿಯನ್ನು ಯಾವ ಮಾಧ್ಯಮದವರು ತೋರಿಸುತ್ತಿಲ್ಲ ದಯವಿಟ್ಟು ನೀವೇ ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

ಒಂದು ಕಾಲದಲ್ಲಿ ತುತ್ತು ಅನ್ನಕ್ಕೆ ಪರದಾಡುತ್ತಿದ್ದ ಹಿಮಾ ದಾಸ್ ರವರು, ತಾನು ಗೆದ್ದು ಬಂದ ಹಣ ಹಾಗೂ ಜಾಹೀರಾತುಗಳಿಂದ ಪಡೆದ ಹಣದಿಂದ ಬದುಕು ಕಟ್ಟಿ ಕೊಳ್ಳುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇತ್ತೀಚೆಗೆ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಆರಿಸಿರುವ ಹಿಮಾ ದಾಸ್ ರವರು, ಇದೀಗ ಹವಾಮಾನ ವೈಪರೀತ್ಯದಿಂದ ಇಡೀ ರಾಜ್ಯದಲ್ಲಿದೆಲ್ಲೆಡೆ ಸಾಮಾನ್ಯ ಜನರ ಬದುಕು ಅಸ್ತವ್ಯಸ್ತವಾಗಿರುವ ಅಸ್ಸಾಂ ರಾಜ್ಯದ ಪರವಾಗಿ ನಿಂತಿದ್ದಾರೆ. ಹೌದು ಇದೀಗ ಅಸ್ಸಾಮ್ ರಾಜ್ಯದಲ್ಲಿ ಪ್ರವಾಹ ತಾಂಡವವಾಡುತ್ತಿದೆ, ಲಕ್ಷಾಂತರ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಪ್ರಾಣಿಗಳು ಪ್ರವಾಹ ಹೆಚ್ಚಾಗಿ ಸಾವನ್ನಪ್ಪುತ್ತಿವೆ ಇಂತಹ ಸಮಯದಲ್ಲಿ ಅಸ್ಸಾಂ ರಾಜ್ಯದ ಪ್ರವಾಹ ನಿಧಿಗೆ ತಾನು ಗೆದ್ದುಬಂದ ಅರ್ಧದಷ್ಟು ಹಣವನ್ನು ನೀಡುವ ಮೂಲಕ ಹಿಮಾ ದಾಸ್ ರವರು ಮತ್ತೊಮ್ಮೆ ಜನರ ಮನಗೆದ್ದಿದ್ದಾರೆ. ವಿಪರ್ಯಾಸವೆಂದರೆ 24 ಗಂಟೆಗಳ ಕಾಲ ನ್ಯೂಸ್ ಪ್ರಸಾರಮಾಡುವ ಯಾವುದೇ ಚಾನಲ್ ಗಳು ಈ ಸುದ್ದಿಯನ್ನು ತೋರಿಸುತ್ತಿಲ್ಲ. ಈ ಕೆಲಸ ಮಾಡಿದ ಹಿಮಾದಾಸ ರವರಿಗೆ ಕರುನಾಡ ವಾಣಿ ತಂಡದಿಂದ ಧನ್ಯವಾದಗಳು, ನಿಮ್ಮ ಕ್ರೀಡಾ ಬದುಕು ಹಾಗೂ ವೈಯಕ್ತಿಕ ಬದುಕು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸುತ್ತೇವೆ.