ಮತ್ತೊಮ್ಮೆ ಜನರ ಮನಗೆದ್ದ ರಾಕಿಂಗ್ ಸ್ಟಾರ್- ಯಶೋ ಮಾರ್ಗದ ಮೂಲಕ ಮಾಡಿದ ಕೆಲಸವೇನು ಗೊತ್ತಾ??

ಮತ್ತೊಮ್ಮೆ ಜನರ ಮನಗೆದ್ದ ರಾಕಿಂಗ್ ಸ್ಟಾರ್- ಯಶೋ ಮಾರ್ಗದ ಮೂಲಕ ಮಾಡಿದ ಕೆಲಸವೇನು ಗೊತ್ತಾ??

ಕನ್ನಡ ಚಿತ್ರರಂಗದ ಅಗ್ರಮಾನ್ಯ ನಟರಲ್ಲಿ ಒಬ್ಬರಾಗಿರುವ ರಾಕಿ ಬಾಯ್ ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ ರವರು ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ ಬಹಳ ಮುಂದೆ ಇರುತ್ತಾರೆ. ಈಗಾಗಲೇ ಹಲವು ಬಾರಿ ತಮ್ಮ ಸಮಾಜಸೇವೆಯಿಂದ ಬಾರಿ ಜನರ ಮನಗೆದ್ದಿರುವ ನಟ ಯಶ್ ರವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ರಾಕಿಂಗ್ ಸ್ಟಾರ್ ಯಶ್ ರವರು ಯಶೋಮಾರ್ಗ ಸಂಸ್ಥೆಯ ಮೂಲಕ ರಾಯಚೂರು ಜನರ ಬೆನ್ನಿಗೆ ನಿಂತಿದ್ದು, ಬರ ದೊಂದಿಗೆ ತತ್ತರಿಸಿರುವ ರಾಯಚೂರಿನ ಜನತೆಗೆ ಸಹಾಯ ಹಸ್ತ ಚಾಚಿದ್ದಾರೆ. ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ರಾಯಚೂರು ಜಿಲ್ಲೆ ಈ ಬಾರಿ ಅತ್ಯಂತ ಭೀಕರ ಬರವನ್ನು ಎದುರಿಸುತ್ತಿದೆ. ಎಲ್ಲಿ ನೋಡಿದರೂ ಕುಡಿಯುವ ನೀರಿಗೂ ಹಾಹಾಕಾರ.

ಜಾನುವಾರುಗಳಿಗೆ ಸಹ ಕುಡಿಯಲು ನೀರಿಲ್ಲ, ಈ ರೀತಿಯ ಕಷ್ಟದ ಸಮಯದಲ್ಲಿ ರಾಯಚೂರಿನ ಜನತೆಯ ಪಾಲಿಗೆ ಯಶ್ ರವರು ನಿಂತಿದ್ದಾರೆ. ಯಾವುದು ರಾಜಕೀಯ ಹಣದಿಂದ ಅಲ್ಲ, ಬದಲಾಗಿ ತಾವು ಕಷ್ಟಪಟ್ಟು ದುಡಿದ ಹಣದಿಂದ ರಾಯಚೂರಿನ ಹಲವಾರು ಹಳ್ಳಿಗಳಿಗೆ ಟ್ಯಾಂಕರ್ ಗಳ ಮೂಲಕ ಅಗತ್ಯವಿರುವ ನೀರನ್ನು ಪೂರೈಸಲು ಮುಂದಾಗಿದ್ದಾರೆ. ಬರ ಪೂರಿತ ಹಳ್ಳಿಗಳನ್ನು ಆಯ್ಕೆ ಮಾಡಿ ಟ್ಯಾಂಕರ್ ಗಳ ಮೂಲಕ ಪ್ರತಿಯೊಂದು ಹಳ್ಳಿಗಳಿಗೂ ನೀರಿನ ಸರಬರಾಜು ಮಾಡುತ್ತಿದ್ದಾರೆ. ಜನರ ಮತ ಪಡೆದು ಅಧಿಕಾರದಲ್ಲಿ ಇರುವ ರಾಜಕೀಯ ನಾಯಕರು ಜನರನ್ನು ಮರೆತಿರುವ ಸಂದರ್ಭದಲ್ಲಿ, ಯಾವುದೇ ಸ್ವಾರ್ಥವಿಲ್ಲದೆ ಯಶ್ ರವರು ಮಾಡುತ್ತಿರುವ ಈ ರೀತಿಯ ಸಮಾಜ ಸೇವೆಗೆ ನಮ್ಮದೊಂದು ಸೆಲ್ಯೂಟ್.