ಸಿಎಂ ಕೈಯಲ್ಲಿ ಮತ್ತೊಂದು ಪ್ರಶಸ್ತಿ ಪಡೆದ ಹನುಮಂತ: ಶಬಾಷ್ ಹನುಮಂತ

ಸಿಎಂ ಕೈಯಲ್ಲಿ ಮತ್ತೊಂದು ಪ್ರಶಸ್ತಿ ಪಡೆದ ಹನುಮಂತ: ಶಬಾಷ್ ಹನುಮಂತ

ಸರಿಗಮಪ ವೇದಿಕೆಯಲ್ಲಿ ಇಡೀ ಕರ್ನಾಟಕದ ಜನರು ಕಾದು ಕುಳಿತು ಕೇಳುವ ಹಾಡು ಎಂದರೆ ಅದು ಹನುಮಂತಪ್ಪನವರ ಹಾಡು. ಕೆಲವೇ ಕೆಲವು ದಿನಗಳ ಹಿಂದಷ್ಟೇ ತೆರೆಮರೆಯ ಕಾಯಿ ಎಂಬಂತೆ ಇದ್ದಕ್ಕಿದ್ದ ಹಾಗೆ ಎಲ್ಲರೆದುರು ಬಂದು ಇಡೀ ಕರ್ನಾಟಕದ ಜನರನ್ನು ಕೇವಲ ಒಂದೇ ಹಾಡಿನಲ್ಲಿಯೇ ಸಂತೃಪ್ತಿ ಗೊಳಿಸಿ ಎಲ್ಲರ ಮನಗೆದ್ದಿದ್ದ ಹನುಮಂತಪ್ಪ ನವರಿಗೆ ಈಗ ಮತ್ತೊಂದು ಬಹುಮಾನ ದೊರೆತಿದೆ.

ಕಳೆದ ಕೆಲವೇ ಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈತನ ಹಾಡಿಗೆ ಫಿದಾ ಆಗಿ ತನ್ನ ಸಿನಿಮಾದಲ್ಲಿ ಹಾಡನ್ನು ಹಾಡುವ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಹನುಮಂತನ ಅವರಿಗೆ ಮತ್ತೊಂದು ಬಹುಮಾನ ದೊರೆತಿದೆ. ಹಾಗೂ ಈ ಬಹುಮಾನ ಬಹಳ ವಿಶೇಷವಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ರಿಲೀಸ್ ಕಾರ್ಯಕ್ರಮದಲ್ಲಿ ಹನುಮಂತಪ್ಪನವರು ಸಿನಿಮಾದ ಎಲ್ಲಾ ಹಾಡುಗಳನ್ನು ಹಾಡಿ ರಂಜಿಸಿದರು. ನೆರೆದಿದ್ದ ಜನರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚೀಲೂರು ಬುಡ್ಡಿ ತಾಂಡದ ಕುರಿ ಕಾಯುವ ಹುಡುಗನ ಕಂಠಕ್ಕೆ ಮನಸೋತಿದ್ದರು ಹಾಗೂ ಈತನ ಹಾಡಿಗೆ ಸ್ವತಹ ಮುಖ್ಯಮಂತ್ರಿಗಳು ಮನಸೋತು ಹಾಡನ್ನು ಮೆಚ್ಚಿಕೊಂಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಮುಖ್ಯಮಂತ್ರಿಗಳು ವೇದಿಕೆಯಲ್ಲಿ ಹನುಮಂತಪ್ಪನವರನ್ನು ಮಾತನಾಡಿಸಿ ಸಾಧನೆಯನ್ನು ಮೆಚ್ಚಿ ತಮ್ಮ ನಿರ್ಮಾಣದ ಚೆನ್ನಂಬಿಕ ಫಿಲಂಸ್ ವತಿಯಿಂದ 25 ಸಾವಿರ ಬಹುಮಾನ ಘೋಷಣೆ ಮಾಡಿದ್ದರು. ಕಾರ್ಯಕ್ರಮಕ್ಕಾಗಿ ಡೂಪ್ಲಿಕೇಟ್ ಚೆಕ್ ಬಳಸಲಾಗಿದ್ದ ಕಾರಣ ಹನುಮಂತಪ್ಪ ನವರಿಗೆ ಅಂದು ಹಣ ದೊರೆತಿರಲಿಲ್ಲ ಆದರೆ ಈಗ ಆ ಹಣ ಹನುಮಂತಪ್ಪನವರ ಕೈ ಗೆ ಸೇರಿದೆ.